<p><strong>ಹಾವೇರಿ:</strong> ಅಕ್ಕಿಆಲೂರಿನ ಮನೆಗಳಿಗೆ ಪ್ಲೇಟ್ ಅಂಟಿಸಲು ಅಕ್ರಮವಾಗಿ ತಲಾ ₹ 100 ವಸೂಲಿ ಮಾಡಲು ಸಹಕರಿಸಿದ್ದ ಆರೋಪದಡಿ ಪಿಡಿಒ ಅಮಾನತಾಗಿದ್ದ ಪ್ರಕರಣ ಮಾಸುವ ಮುನ್ನವೇ, ಈಗ ಅದೇ ಪ್ಲೇಟ್ ಹೆಸರಿನಲ್ಲಿ ಜನರಿಂದ ₹ 100 ವಸೂಲಿ ಮಾಡಲು ಬ್ಯಾಡಗಿ ಪುರಸಭೆ ಒಪ್ಪಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.</p>.<p>‘ಬೆಂಗಳೂರಿನ ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿಯವರು ಆಸ್ತಿ ನಂಬರ್ ಪ್ಲೇಟ್ ಅಳವಡಿಸಲಿದ್ದಾರೆ. ಆಸ್ತಿ ಮಾಲೀಕರು, ಸಮಿತಿಯವರಿಗೆ ತಲಾ ₹ 100 ನೀಡಿ ಸಹಕರಿಸಬೇಕು’ ಎಂದು ಉಪವಿಭಾಗಾಧಿಕಾರಿಯೂ ಆಗಿರುವ ಬ್ಯಾಡಗಿ ಪುರಸಭೆಯ ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಅವರು ಸೋಮವಾರ ಜಂಟಿ ಪ್ರಕಟಣೆ ಹೊರಡಿಸಿದ್ದಾರೆ.</p>.<p>ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ್ದ ಆದೇಶ ಉಲ್ಲಂಘಿಸಿ ಸಮಿತಿಯಿಂದ ಅಕ್ಕಿಆಲೂರಿನ 64 ಮನೆಗಳಿಗೆ ಪ್ಲೇಟ್ ಅಳವಡಿಸಿ ತಲಾ ₹ 100 ಸಂಗ್ರಹಿಸಲಾಗಿತ್ತು. ಇದೇ ಪ್ರಕರಣದಲ್ಲಿ ಪಿಡಿಒ ಅಮಾನತಾಗಿತ್ತು. ಅದೇ ಸಮಿತಿಗೆ ಪ್ಲೇಟ್ ಅಳವಡಿಸಲು ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಒಪ್ಪಿಗೆ ನೀಡಿರುವುದಕ್ಕೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ಈ ವಿಷಯದಲ್ಲಿ ಪಿಡಿಒ ಅಮಾನತಾದ ಪ್ರಕರಣ ನನ್ನ ಗಮನದಲ್ಲಿಲ್ಲ’ ಎಂದು ಮುಖ್ಯಾಧಿಕಾರಿ ವಿನಯ್ಕುಮಾರ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-22-717301223</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಅಕ್ಕಿಆಲೂರಿನ ಮನೆಗಳಿಗೆ ಪ್ಲೇಟ್ ಅಂಟಿಸಲು ಅಕ್ರಮವಾಗಿ ತಲಾ ₹ 100 ವಸೂಲಿ ಮಾಡಲು ಸಹಕರಿಸಿದ್ದ ಆರೋಪದಡಿ ಪಿಡಿಒ ಅಮಾನತಾಗಿದ್ದ ಪ್ರಕರಣ ಮಾಸುವ ಮುನ್ನವೇ, ಈಗ ಅದೇ ಪ್ಲೇಟ್ ಹೆಸರಿನಲ್ಲಿ ಜನರಿಂದ ₹ 100 ವಸೂಲಿ ಮಾಡಲು ಬ್ಯಾಡಗಿ ಪುರಸಭೆ ಒಪ್ಪಿಗೆ ನೀಡಿರುವುದು ಅನುಮಾನಕ್ಕೆ ಕಾರಣವಾಗಿದೆ.</p>.<p>‘ಬೆಂಗಳೂರಿನ ಅಖಿಲ ಕರ್ನಾಟಕ ಗ್ರಾಮ ಪಂಚಾಯಿತಿ ಹಿತರಕ್ಷಣಾ ಸಮಿತಿಯವರು ಆಸ್ತಿ ನಂಬರ್ ಪ್ಲೇಟ್ ಅಳವಡಿಸಲಿದ್ದಾರೆ. ಆಸ್ತಿ ಮಾಲೀಕರು, ಸಮಿತಿಯವರಿಗೆ ತಲಾ ₹ 100 ನೀಡಿ ಸಹಕರಿಸಬೇಕು’ ಎಂದು ಉಪವಿಭಾಗಾಧಿಕಾರಿಯೂ ಆಗಿರುವ ಬ್ಯಾಡಗಿ ಪುರಸಭೆಯ ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಅವರು ಸೋಮವಾರ ಜಂಟಿ ಪ್ರಕಟಣೆ ಹೊರಡಿಸಿದ್ದಾರೆ.</p>.<p>ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಹೊರಡಿಸಿದ್ದ ಆದೇಶ ಉಲ್ಲಂಘಿಸಿ ಸಮಿತಿಯಿಂದ ಅಕ್ಕಿಆಲೂರಿನ 64 ಮನೆಗಳಿಗೆ ಪ್ಲೇಟ್ ಅಳವಡಿಸಿ ತಲಾ ₹ 100 ಸಂಗ್ರಹಿಸಲಾಗಿತ್ತು. ಇದೇ ಪ್ರಕರಣದಲ್ಲಿ ಪಿಡಿಒ ಅಮಾನತಾಗಿತ್ತು. ಅದೇ ಸಮಿತಿಗೆ ಪ್ಲೇಟ್ ಅಳವಡಿಸಲು ಆಡಳಿತಾಧಿಕಾರಿ ಕಲ್ಯಾಣಿ ಕಾಂಬಳೆ ಹಾಗೂ ಮುಖ್ಯಾಧಿಕಾರಿ ವಿನಯಕುಮಾರ ಒಪ್ಪಿಗೆ ನೀಡಿರುವುದಕ್ಕೆ ಜನರು ಸಂಶಯ ವ್ಯಕ್ತಪಡಿಸುತ್ತಿದ್ದಾರೆ.</p>.<p>‘ಈ ವಿಷಯದಲ್ಲಿ ಪಿಡಿಒ ಅಮಾನತಾದ ಪ್ರಕರಣ ನನ್ನ ಗಮನದಲ್ಲಿಲ್ಲ’ ಎಂದು ಮುಖ್ಯಾಧಿಕಾರಿ ವಿನಯ್ಕುಮಾರ್ ತಿಳಿಸಿದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260526-22-717301223</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>