<p><strong>ಹಾವೇರಿ:</strong> ‘ಬರವಣಿಗೆಯು ಸೃಜನಾತ್ಮಕ ಕಲೆ. ಓದುಗರ ಅರಿವನ್ನು ವಿಸ್ತರಿಸಿ ಗುಣಾತ್ಮಕ ಬದಲಾವಣೆಗೆ ಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜವನ್ನು ಸರಿ ದಾರಿಗೆ ಕರೆದೊಯ್ಯುವ ಶಕ್ತಿ ಪುಸ್ತಕಗಳಿಗಿದೆ. ವ್ಯಕ್ತಿಯಿಂದ ಹಿಡಿದು ದೇಶ–ದೇಶಗಳ ಮಧ್ಯೆ ತಲೆದೋರುವ ಸಂಘರ್ಷಗಳಿಗೆ ಪುಸ್ತಕಗಳು ಉತ್ತರಿಸುತ್ತವೆ. ಆದ್ದರಿಂದ, ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಗೌರಿ ಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ನಗರದ ಹೊಸಮಠದಲ್ಲಿ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಾಹಿತಿ ಕಲಾವಿದರ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಪುಸ್ತಕ ಪ್ರೀತಿ’ ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಓದುಗ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಇತಿಹಾಸದುದ್ದಕ್ಕೂ ಅನೇಕರು ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಸೇರಿ ವಿವಿಧ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅದರಲ್ಲಿ ಮಹಿಳೆಯರ ಪರಿಸ್ಥಿತಿ ಶೋಚನಿಯವಾಗಿತ್ತು. ಮಹಿಳೆ ಕುಟುಂಬದಿಂದ ಹಿಡಿದು ಸಾಮ್ರಾಜ್ಯ ಸ್ಥಾಪನೆ, ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಅವಳಿಗೆ ನ್ಯಾಯ ಸಿಕ್ಕಿಲ್ಲ. ರಾಮಾಯಣ, ಮಹಾಭಾರತ, ಐತಿಹಾಸಿಕ ಮತ್ತು ಪುರಾಣದಂತಹ ಕಾವ್ಯಗಳಲ್ಲಿ ಬರುವ ಸ್ತ್ರೀ ಪಾತ್ರಗಳಿಗೆ ಸೂಕ್ತ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ವಿನುತಾ ಹಂಚಿನಮನಿ ಅವರು ‘ನಾತಿಚರಾಮಿ’ ಪುಸ್ತಕ ಬರೆದಿದ್ದಾರೆ. ಯಶೋಧರೆ, ಅಹಲ್ಯೆ, ಪರಿತೆಕ್ತ ಸೀತೆ, ಶಕುಂತಲೆ ಮತ್ತು ಅಂಬೆ ಅವರ ತ್ಯಾಗ, ಪ್ರೀತಿ, ನೋವು, ನಲಿವು ಮತ್ತು ಮಾನಸಿಕ ತಳಮಳಗಳ ಬಗ್ಗೆ ಚೆನ್ನಾಗಿ ಪುಸ್ತಕದಲ್ಲಿ ವಿವರಿಸಿದ್ದಾರೆ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ‘ಪುಸ್ತಕ ಪ್ರೀತಿ ಕಾರ್ಯಕ್ರಮವು ಎಂಟನೇ ಆವೃತ್ತಿಯಲ್ಲಿದ್ದರೂ ಹೊಸತನವನ್ನು ಕಂಡುಕೊಂಡಿದೆ. ಮೂವರು ಲೇಖಕರ ಪುಸ್ತಕಗಳನ್ನು ವಿಮರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಪುಸ್ತಕಗಳಿಗಿರುವ ಶಕ್ತಿ. ಇದೇ ರೀತಿ ಪುಸ್ತಕಗಳ ಬಗ್ಗೆ ಚರ್ಚೆ, ಸಂವಾದ, ವಿಮರ್ಶೆ ನಿರಂತರವಾಗಿ ನಡೆದರೆ ಕನ್ನಡ ಭಾಷೆ ಪ್ರಜ್ವಲಿಸುತ್ತದೆ’ ಎಂದರು.</p>.<p>ಸಾಹಿತಿ ಸತೀಶ ಕುಲಕರ್ಣಿ ಸಂಪಾದಕತ್ವದ ‘ಗಾಳಿಪಟಗಳು’ ಕೃತಿ ಬಗ್ಗೆ ಮಾತನಾಡಿದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ‘ಇದೊಂದು ಲಲಿತ ಪ್ರಬಂಧಗಳ ಸಂಕಲನ. ಹಾಸ್ಯ, ಲಘು ಶೈಲಿ ಮತ್ತು ವೈಯಕ್ತಿಕ ಅನುಭವಗಳಿಂದ ಕೂಡಿದ ಸುಂದರ ಆಕರ್ಷಕ ಪದ್ಯ ಬರಹವಾಗಿದೆ. ಒಳ್ಳೆಯ ಪುಸ್ತಕಗಳ ಸಂಗ್ರಹ ಮತ್ತು ಓದಿನಿಂದ ಮಾನಸಿಕ ವಿಕಾಸವಾಗುತ್ತದೆ. ಒಳ್ಳೆಯ ಓದುಗರು ಮಾತ್ರ ಒಳ್ಳೆಯ ಬರಹಗಾರರಾಗುತ್ತಾರೆ’ ಎಂದರು.</p>.<p>ರಾಮಚಂದ್ರ ಕುಲಕರ್ಣಿ ಅವರ ‘ಅನುದಿನದ ಅನುಭೂತಿ’ ಕೃತಿ ಬಗ್ಗೆ ಮಾತನಾಡಿದ ಹುಬ್ಬಳ್ಳಿಯ ಶ್ರೀಮತಾ ಆಶ್ರಮದ ಅಧ್ಯಕ್ಷರಾದ ಮಾತಾ ತೇಜೋಮಯಿ, ‘ದೈನಂದಿನ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವ ಪರಿ ಮತ್ತು ನಿರಂತರವಾಗಿ ಧನಾತ್ಮಕತೆಯನ್ನು ಕಾಪಾಡಿಕೊಳ್ಳುವ ವಿಧಾನಗಳ ಕುರಿತು ಕೃತಿಯಲ್ಲಿ ಚರ್ಚಿಸುತ್ತಾರೆ. ನಮ್ಮೊಳಗಿನ ಧೈರ್ಯ, ಜಾಣ್ಮೆ, ಯೋಗ, ಧ್ಯಾನ ಮತ್ತು ಆತ್ಮ ವಿಶ್ವಾಸಗಳ ಕುರಿತು ವಿವರಿಸಿದ್ದಾರೆ’ ಎಂದರು.</p>.<p>ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಕರಿಯಪ್ಪ ಹಂಚಿನಮನಿ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ, ಪ್ರಾಂಶುಪಾಲ ಮಂಜುನಾಥ ಬಿ.ವಿ., ಪ್ರಥ್ವಿರಾಜ್ ಬೆಟಗೇರಿ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ‘ಬರವಣಿಗೆಯು ಸೃಜನಾತ್ಮಕ ಕಲೆ. ಓದುಗರ ಅರಿವನ್ನು ವಿಸ್ತರಿಸಿ ಗುಣಾತ್ಮಕ ಬದಲಾವಣೆಗೆ ಗಂಭೀರ ಪರಿಣಾಮ ಬೀರುತ್ತದೆ. ವ್ಯಕ್ತಿತ್ವ ವಿಕಸನದ ಜೊತೆಗೆ ಸಮಾಜವನ್ನು ಸರಿ ದಾರಿಗೆ ಕರೆದೊಯ್ಯುವ ಶಕ್ತಿ ಪುಸ್ತಕಗಳಿಗಿದೆ. ವ್ಯಕ್ತಿಯಿಂದ ಹಿಡಿದು ದೇಶ–ದೇಶಗಳ ಮಧ್ಯೆ ತಲೆದೋರುವ ಸಂಘರ್ಷಗಳಿಗೆ ಪುಸ್ತಕಗಳು ಉತ್ತರಿಸುತ್ತವೆ. ಆದ್ದರಿಂದ, ಎಲ್ಲರೂ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಳ್ಳಬೇಕು’ ಎಂದು ಗೌರಿ ಮಠದ ಶಿವಯೋಗೀಶ್ವರ ಶಿವಾಚಾರ್ಯ ಸ್ವಾಮೀಜಿ ಹೇಳಿದರು.</p>.<p>ನಗರದ ಹೊಸಮಠದಲ್ಲಿ ಭಾವಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆ, ಸಾಹಿತಿ ಕಲಾವಿದರ ಬಳಗದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ‘ಪುಸ್ತಕ ಪ್ರೀತಿ’ ಆಯ್ದ ಬರಹಗಾರರ ಹೊಸ ಪುಸ್ತಕಗಳ ವಿಮರ್ಶೆ ಮತ್ತು ಓದುಗ ಲೇಖಕರೊಂದಿಗಿನ ಸಂವಾದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.</p>.<p>‘ಇತಿಹಾಸದುದ್ದಕ್ಕೂ ಅನೇಕರು ಶಿಕ್ಷಣ, ಸ್ವಾತಂತ್ರ್ಯ, ಸಮಾನತೆ ಸೇರಿ ವಿವಿಧ ಅವಕಾಶಗಳಿಂದ ವಂಚಿತರಾಗಿದ್ದಾರೆ. ಅದರಲ್ಲಿ ಮಹಿಳೆಯರ ಪರಿಸ್ಥಿತಿ ಶೋಚನಿಯವಾಗಿತ್ತು. ಮಹಿಳೆ ಕುಟುಂಬದಿಂದ ಹಿಡಿದು ಸಾಮ್ರಾಜ್ಯ ಸ್ಥಾಪನೆ, ರಕ್ಷಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರೂ ಅವಳಿಗೆ ನ್ಯಾಯ ಸಿಕ್ಕಿಲ್ಲ. ರಾಮಾಯಣ, ಮಹಾಭಾರತ, ಐತಿಹಾಸಿಕ ಮತ್ತು ಪುರಾಣದಂತಹ ಕಾವ್ಯಗಳಲ್ಲಿ ಬರುವ ಸ್ತ್ರೀ ಪಾತ್ರಗಳಿಗೆ ಸೂಕ್ತ ನ್ಯಾಯ ಸಿಗಬೇಕು ಎಂಬ ಉದ್ದೇಶದಿಂದ ವಿನುತಾ ಹಂಚಿನಮನಿ ಅವರು ‘ನಾತಿಚರಾಮಿ’ ಪುಸ್ತಕ ಬರೆದಿದ್ದಾರೆ. ಯಶೋಧರೆ, ಅಹಲ್ಯೆ, ಪರಿತೆಕ್ತ ಸೀತೆ, ಶಕುಂತಲೆ ಮತ್ತು ಅಂಬೆ ಅವರ ತ್ಯಾಗ, ಪ್ರೀತಿ, ನೋವು, ನಲಿವು ಮತ್ತು ಮಾನಸಿಕ ತಳಮಳಗಳ ಬಗ್ಗೆ ಚೆನ್ನಾಗಿ ಪುಸ್ತಕದಲ್ಲಿ ವಿವರಿಸಿದ್ದಾರೆ’ ಎಂದರು.</p>.<p>ಕಾರ್ಯಕ್ರಮ ಉದ್ಘಾಟಿಸಿದ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಲಿಂಗಯ್ಯ ಹಿರೇಮಠ, ‘ಪುಸ್ತಕ ಪ್ರೀತಿ ಕಾರ್ಯಕ್ರಮವು ಎಂಟನೇ ಆವೃತ್ತಿಯಲ್ಲಿದ್ದರೂ ಹೊಸತನವನ್ನು ಕಂಡುಕೊಂಡಿದೆ. ಮೂವರು ಲೇಖಕರ ಪುಸ್ತಕಗಳನ್ನು ವಿಮರ್ಶಿಸುತ್ತಿರುವುದು ಹೆಮ್ಮೆಯ ಸಂಗತಿ. ಇದು ಪುಸ್ತಕಗಳಿಗಿರುವ ಶಕ್ತಿ. ಇದೇ ರೀತಿ ಪುಸ್ತಕಗಳ ಬಗ್ಗೆ ಚರ್ಚೆ, ಸಂವಾದ, ವಿಮರ್ಶೆ ನಿರಂತರವಾಗಿ ನಡೆದರೆ ಕನ್ನಡ ಭಾಷೆ ಪ್ರಜ್ವಲಿಸುತ್ತದೆ’ ಎಂದರು.</p>.<p>ಸಾಹಿತಿ ಸತೀಶ ಕುಲಕರ್ಣಿ ಸಂಪಾದಕತ್ವದ ‘ಗಾಳಿಪಟಗಳು’ ಕೃತಿ ಬಗ್ಗೆ ಮಾತನಾಡಿದ ಹೊಸಮಠದ ಬಸವಶಾಂತಲಿಂಗ ಸ್ವಾಮೀಜಿ, ‘ಇದೊಂದು ಲಲಿತ ಪ್ರಬಂಧಗಳ ಸಂಕಲನ. ಹಾಸ್ಯ, ಲಘು ಶೈಲಿ ಮತ್ತು ವೈಯಕ್ತಿಕ ಅನುಭವಗಳಿಂದ ಕೂಡಿದ ಸುಂದರ ಆಕರ್ಷಕ ಪದ್ಯ ಬರಹವಾಗಿದೆ. ಒಳ್ಳೆಯ ಪುಸ್ತಕಗಳ ಸಂಗ್ರಹ ಮತ್ತು ಓದಿನಿಂದ ಮಾನಸಿಕ ವಿಕಾಸವಾಗುತ್ತದೆ. ಒಳ್ಳೆಯ ಓದುಗರು ಮಾತ್ರ ಒಳ್ಳೆಯ ಬರಹಗಾರರಾಗುತ್ತಾರೆ’ ಎಂದರು.</p>.<p>ರಾಮಚಂದ್ರ ಕುಲಕರ್ಣಿ ಅವರ ‘ಅನುದಿನದ ಅನುಭೂತಿ’ ಕೃತಿ ಬಗ್ಗೆ ಮಾತನಾಡಿದ ಹುಬ್ಬಳ್ಳಿಯ ಶ್ರೀಮತಾ ಆಶ್ರಮದ ಅಧ್ಯಕ್ಷರಾದ ಮಾತಾ ತೇಜೋಮಯಿ, ‘ದೈನಂದಿನ ಬದುಕಿನಲ್ಲಿ ಬರುವ ಸವಾಲುಗಳನ್ನು ಎದುರಿಸುವ ಪರಿ ಮತ್ತು ನಿರಂತರವಾಗಿ ಧನಾತ್ಮಕತೆಯನ್ನು ಕಾಪಾಡಿಕೊಳ್ಳುವ ವಿಧಾನಗಳ ಕುರಿತು ಕೃತಿಯಲ್ಲಿ ಚರ್ಚಿಸುತ್ತಾರೆ. ನಮ್ಮೊಳಗಿನ ಧೈರ್ಯ, ಜಾಣ್ಮೆ, ಯೋಗ, ಧ್ಯಾನ ಮತ್ತು ಆತ್ಮ ವಿಶ್ವಾಸಗಳ ಕುರಿತು ವಿವರಿಸಿದ್ದಾರೆ’ ಎಂದರು.</p>.<p>ಭಾವ ಸಂಗಮ ಸಾಹಿತ್ಯ ಮತ್ತು ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಶೇಖರ ಭಜಂತ್ರಿ ಅಧ್ಯಕ್ಷತೆ ವಹಿಸಿದ್ದರು. ಕಲಾವಿದ ಕರಿಯಪ್ಪ ಹಂಚಿನಮನಿ, ನಿವೃತ್ತ ಶಿಕ್ಷಕ ಹನುಮಂತಗೌಡ ಗೊಲ್ಲರ, ಪ್ರಾಂಶುಪಾಲ ಮಂಜುನಾಥ ಬಿ.ವಿ., ಪ್ರಥ್ವಿರಾಜ್ ಬೆಟಗೇರಿ ಹಾಗೂ ಇತರರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>