ತಾಲ್ಲೂಕಿನ ಅಗಡಿ ಹಳ್ಳದಲ್ಲಿ ಮಳೆಯಿಂದ ತುಂಬಿ ರಸ್ತೆಯ ಮೇಲೆ ಹರಿಯುತ್ತಿತ್ತು. ಮಳೆಯಲ್ಲಿ ರಾತ್ರಿ ದಾರಿ ಕಾಣದೆಬೈಕ್ ಸವಾರರು ಸೇತುವೆ ದಾಟುತ್ತಿರುವಾಗ, ಕೊಚ್ಚಿ ಹೋಗಿದ್ದರು. ಅದೃಷ್ಟವಶಾತ್ಮರದ ಟೊಂಗೆ ಹಿಡಿದು ಕುಳಿತಿದ್ದ, ಬೊಮ್ಮನಕಟ್ಟಿ ಗ್ರಾಮದ ಸಂಗಯ್ಯ ಬಸಯ್ಯ ಹಿರೇಮಠ, ನೇತ್ರಾವತಿ ಹಾಗೂ ಸೀತಾಬಾಯಿ ನಾಯಕ ಅವರನ್ನು ಅಗ್ನಿಶಾಮಕ ಸಿಬ್ಬಂದಿ ಮತ್ತು ಅದೇ ಮಾರ್ಗವಾಗಿ ಸಂಚರಿಸುತ್ತಿದ್ದ ಕೆ.ಎಸ್.ಆರ್.ಟಿ.ಸಿ ಬಸ್ ಚಾಲಕ ಹಾಗೂ ಪ್ರಯಾಣಿಕರಿಂದ ರಕ್ಷಣೆ ಮಾಡಿದರು.