ರಾಣೆಬೆನ್ನೂರು ಪಟ್ಟಣದ ದೊಡ್ಡ ಕೆರೆ ಕೋಡಿಯಿಂದ ಗಂಗಾಪುರ ರಸ್ತೆಯ ಬಡಾವಣೆಯಲ್ಲಿ ನೀರಿನ ಹರಿವು ಉಂಟಾಗಿದ್ದು, ಜಿಲ್ಲಾಧಿಕಾರಿ ಸಂಜಯ ಶೆಟ್ಟೆಣ್ಣವರ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಇದೇ ಸಂದರ್ಭದಲ್ಲಿ ಮೆಡ್ಲೇರಿ ರಸ್ತೆಯ ಮಾರ್ಗದಲ್ಲಿ ರೈಲ್ವೆ ಟ್ರ್ಯಾಕ್ ಪಕ್ಕ ಒಳಚರಂಡಿ ಹಾಗೂ ದೇವರಗುಡ್ಡದ ರೈಲ್ವೆ ಮೇಲ್ಸೇತುವೆ ಕೆಳಬದಿಯಲ್ಲಿ ನೀರಿನ ಹರಿವು ಕುರಿತಂತೆ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ದುರಸ್ತಿಗೆ ಸೂಚನೆ ನೀಡಿದರು.