<p><strong>ಹಾವೇರಿ:</strong> ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಬುಧವಾರ ಜೋರು ಮಳೆಯಾಗಿದೆ. ಸವಣೂರು ತಾಲ್ಲೂಕಿನ ಗಡಿಭಾಗದಲ್ಲಿರುವ ನದಿ ನೀರಲಗಿ ಹಾಗೂ ಸುತ್ತಮುತ್ತ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು.</p>.<p>ಹಾವೇರಿ, ಸವಣೂರು, ರಾಣೆಬೆನ್ನೂರು, ಬ್ಯಾಡಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಯಾಯಿತು. ಹಲವು ಕಡೆಗಳಲ್ಲಿ ಗಾಳಿ ಹಾಗೂ ಗುಡುಗು– ಸಿಡಿಲಿನ ಅಬ್ಬರವೂ ಹೆಚ್ಚಿತ್ತು.ಬುಧವಾರ ಬೆಳಿಗ್ಗೆ ಯಿಂದಲೇ ಬಿಸಿಲು ಹೆಚ್ಚಿತ್ತು. ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದಿಂದಲೇ ಜಿಟಿ ಜಿಟಿಯಾಗಿ ಆರಂಭವಾದ ಮಳೆ, ಕ್ರಮೇಣ ಹೆಚ್ಚಾಗಿ ಅಬ್ಬರಿಸಿತು.</p>.<p>ಹಾವೇರಿ ನಗರದಲ್ಲಿ ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಕಾಣಿಸಿತು. ಸಂಜೆ ವೇಳೆ ಜೋರು ಗಾಳಿ ಸಮೇತ ಶುರುವಾದ ಮಳೆ, ಕೆಲ ಗಂಟೆಗಳವರೆಗೂ ಸುರಿಯಿತು.</p>.<p>ನಿತ್ಯದ ಕೆಲಸಕ್ಕಾಗಿ ಮನೆಯಿಂದ ಸಂಜೆ ಹೊರಗೆ ಬಂದಿದ್ದ ಜನರು, ಮಳೆಯಲ್ಲಿ ಓಡಾಡಿದರು. ಕೆಲವರು, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಮಳಿಗೆಗಳನ್ನು ಆಶ್ರಯ ಪಡೆದುಕೊಂಡಿದ್ದ ದೃಶ್ಯಗಳು ಕಂಡು ಬಂದವು. ಮಳೆಯ ಅಬ್ಬರ ಜೋರಾಗಿ ದ್ದರಿಂದ ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ಹರಿಯಿತು.</p>.<p>ಹಳೇ ಪಿ.ಬಿ. ರಸ್ತೆ, ಹಾನಗಲ್ ರಸ್ತೆ, ಬಸವೇಶ್ವರನಗರದ, ಎಂ.ಜಿ. ರಸ್ತೆ, ಅಶ್ವಿನಿನಗರ, ದಾನೇಶ್ವರಿನಗರ, ಮಂಜುನಾಥ ನಗರ, ಇಜಾರಿ ಲಕಮಾಪುರ, ಗುತ್ತಲ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಸುರಿಯಿತು.</p>.<p>ನದಿ ನೀರಲಗಿ ಗ್ರಾಮದಲ್ಲಿ ಅವ್ಯವಸ್ಥೆ: ಸವಣೂರು ತಾಲ್ಲೂಕಿನ ಗಡಿ ಗ್ರಾಮವಾದ ನದಿ ನೀರಲಗಿ ಗ್ರಾಮದಲ್ಲಿ, ಬುಧವಾರ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಯಿತು. ಚರಂಡಿ ಸ್ವಚ್ಛತೆ ಮಾಡದಿದ್ದರಿಮದ, ಚರಂಡಿ ನೀರು ಮನೆಗಳಿಗೆ ನುಗ್ಗಿತ್ತು. ದುರ್ವಾತವೂ ಹೆಚ್ಚಾಗಿ ಸ್ಥಳೀಯರು ಯಾತನೆ ಅನುಭವಿಸಿದರು.</p>.<p>‘ನದಿ ನೀರಲಗಿ ಗ್ರಾಮವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಭಿವೃದ್ಧಿಯೂ ಅಷ್ಟಕ್ಕಷ್ಟೇ. ಬಡವರು ವಾಸವಿರುವ ಗ್ರಾಮದಲ್ಲಿ, ಮೂಲ ಸೌಕರ್ಯವಿಲ್ಲ. ಮಳೆ ಬಂದಾಗಲೆಲ್ಲ ಸಮಸ್ಯೆಯಾಗುತ್ತಿದೆ’ ಎಂದು ನಿವಾಸಿಗಳು ದೂರಿದರು.</p>.<p>ಶಿಗ್ಗಾವಿ ಪಟ್ಟಣ, ತಾಲ್ಲೂಕಿನ ಬಂಕಾಪುರ ಹಾಗೂ ಹಲವು ಕಡೆಗಳಲ್ಲಿಯೂ ಉತ್ತಮ ಮಳೆಯಾಯಿತು.</p>.<p>ಗುತ್ತಲ–ಅಗಡಿ ರಸ್ತೆಯಲ್ಲಿ ಸಂಚಾರ ಬಂದ್: ಹಾವೇರಿ ತಾಲ್ಲೂಕಿನ ಅಗಡಿಯಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರವೊಂದು ಬುಧವಾರ ಉರುಳಿಬಿದ್ದಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ತಾತ್ಕಾಲಿಕವಾಗಿ ಬಂದ್ ಆಯಿತು. ಮರ ತೆರವು ಮಾಡಲು ಸ್ಥಳೀಯರು ಹರಸಾಹಸಪಟ್ಟರು.</p>.<p>ರಸ್ತೆ ಹಾಳು: ತಾಲ್ಲೂಕಿನ ಮೇಲ್ಮುರಿ ಹಾಗೂ ಹಂದಿಗನೂರು ಗ್ರಾಮಗಳ ನಡುವಿನ ರಸ್ತೆಯು ಮಳೆಯಿಂದಾಗಿ ಹಾಳಾಗಿದೆ. ನೀರು ನಿಂತುಕೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-23-552165548</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಾವೇರಿ:</strong> ಜಿಲ್ಲೆಯಾದ್ಯಂತ ಹಲವು ಕಡೆಗಳಲ್ಲಿ ಬುಧವಾರ ಜೋರು ಮಳೆಯಾಗಿದೆ. ಸವಣೂರು ತಾಲ್ಲೂಕಿನ ಗಡಿಭಾಗದಲ್ಲಿರುವ ನದಿ ನೀರಲಗಿ ಹಾಗೂ ಸುತ್ತಮುತ್ತ ಮನೆಗಳಿಗೆ ನೀರು ನುಗ್ಗಿದ್ದರಿಂದ ನಿವಾಸಿಗಳು ತೊಂದರೆ ಅನುಭವಿಸಿದರು.</p>.<p>ಹಾವೇರಿ, ಸವಣೂರು, ರಾಣೆಬೆನ್ನೂರು, ಬ್ಯಾಡಗಿ ತಾಲ್ಲೂಕಿನ ಹಲವು ಗ್ರಾಮಗಳಲ್ಲಿ ಮಳೆಯಾಯಿತು. ಹಲವು ಕಡೆಗಳಲ್ಲಿ ಗಾಳಿ ಹಾಗೂ ಗುಡುಗು– ಸಿಡಿಲಿನ ಅಬ್ಬರವೂ ಹೆಚ್ಚಿತ್ತು.ಬುಧವಾರ ಬೆಳಿಗ್ಗೆ ಯಿಂದಲೇ ಬಿಸಿಲು ಹೆಚ್ಚಿತ್ತು. ಕೆಲವು ಕಡೆಗಳಲ್ಲಿ ಮೋಡ ಕವಿದ ವಾತಾವರಣವಿತ್ತು. ಮಧ್ಯಾಹ್ನದಿಂದಲೇ ಜಿಟಿ ಜಿಟಿಯಾಗಿ ಆರಂಭವಾದ ಮಳೆ, ಕ್ರಮೇಣ ಹೆಚ್ಚಾಗಿ ಅಬ್ಬರಿಸಿತು.</p>.<p>ಹಾವೇರಿ ನಗರದಲ್ಲಿ ಮಧ್ಯಾಹ್ನವೇ ಮೋಡ ಕವಿದ ವಾತಾವರಣ ಕಾಣಿಸಿತು. ಸಂಜೆ ವೇಳೆ ಜೋರು ಗಾಳಿ ಸಮೇತ ಶುರುವಾದ ಮಳೆ, ಕೆಲ ಗಂಟೆಗಳವರೆಗೂ ಸುರಿಯಿತು.</p>.<p>ನಿತ್ಯದ ಕೆಲಸಕ್ಕಾಗಿ ಮನೆಯಿಂದ ಸಂಜೆ ಹೊರಗೆ ಬಂದಿದ್ದ ಜನರು, ಮಳೆಯಲ್ಲಿ ಓಡಾಡಿದರು. ಕೆಲವರು, ರಸ್ತೆಯ ಅಕ್ಕ–ಪಕ್ಕದಲ್ಲಿರುವ ಮಳಿಗೆಗಳನ್ನು ಆಶ್ರಯ ಪಡೆದುಕೊಂಡಿದ್ದ ದೃಶ್ಯಗಳು ಕಂಡು ಬಂದವು. ಮಳೆಯ ಅಬ್ಬರ ಜೋರಾಗಿ ದ್ದರಿಂದ ಹಲವು ಕಡೆಗಳಲ್ಲಿ ರಸ್ತೆ ಮೇಲೆ ನೀರು ಹರಿಯಿತು.</p>.<p>ಹಳೇ ಪಿ.ಬಿ. ರಸ್ತೆ, ಹಾನಗಲ್ ರಸ್ತೆ, ಬಸವೇಶ್ವರನಗರದ, ಎಂ.ಜಿ. ರಸ್ತೆ, ಅಶ್ವಿನಿನಗರ, ದಾನೇಶ್ವರಿನಗರ, ಮಂಜುನಾಥ ನಗರ, ಇಜಾರಿ ಲಕಮಾಪುರ, ಗುತ್ತಲ ರಸ್ತೆ, ಮೈಲಾರ ಮಹದೇವಪ್ಪ ವೃತ್ತ, ವಿದ್ಯಾನಗರ ಹಾಗೂ ಸುತ್ತಮುತ್ತ ಪ್ರದೇಶಗಳಲ್ಲಿ ಮಳೆ ಸುರಿಯಿತು.</p>.<p>ನದಿ ನೀರಲಗಿ ಗ್ರಾಮದಲ್ಲಿ ಅವ್ಯವಸ್ಥೆ: ಸವಣೂರು ತಾಲ್ಲೂಕಿನ ಗಡಿ ಗ್ರಾಮವಾದ ನದಿ ನೀರಲಗಿ ಗ್ರಾಮದಲ್ಲಿ, ಬುಧವಾರ ಮಳೆಯಿಂದಾಗಿ ಅವಾಂತರವೇ ಸೃಷ್ಟಿಯಾಯಿತು. ಚರಂಡಿ ಸ್ವಚ್ಛತೆ ಮಾಡದಿದ್ದರಿಮದ, ಚರಂಡಿ ನೀರು ಮನೆಗಳಿಗೆ ನುಗ್ಗಿತ್ತು. ದುರ್ವಾತವೂ ಹೆಚ್ಚಾಗಿ ಸ್ಥಳೀಯರು ಯಾತನೆ ಅನುಭವಿಸಿದರು.</p>.<p>‘ನದಿ ನೀರಲಗಿ ಗ್ರಾಮವನ್ನು ನಿರ್ಲಕ್ಷ್ಯ ಮಾಡಿದ್ದಾರೆ. ಅಭಿವೃದ್ಧಿಯೂ ಅಷ್ಟಕ್ಕಷ್ಟೇ. ಬಡವರು ವಾಸವಿರುವ ಗ್ರಾಮದಲ್ಲಿ, ಮೂಲ ಸೌಕರ್ಯವಿಲ್ಲ. ಮಳೆ ಬಂದಾಗಲೆಲ್ಲ ಸಮಸ್ಯೆಯಾಗುತ್ತಿದೆ’ ಎಂದು ನಿವಾಸಿಗಳು ದೂರಿದರು.</p>.<p>ಶಿಗ್ಗಾವಿ ಪಟ್ಟಣ, ತಾಲ್ಲೂಕಿನ ಬಂಕಾಪುರ ಹಾಗೂ ಹಲವು ಕಡೆಗಳಲ್ಲಿಯೂ ಉತ್ತಮ ಮಳೆಯಾಯಿತು.</p>.<p>ಗುತ್ತಲ–ಅಗಡಿ ರಸ್ತೆಯಲ್ಲಿ ಸಂಚಾರ ಬಂದ್: ಹಾವೇರಿ ತಾಲ್ಲೂಕಿನ ಅಗಡಿಯಿಂದ ಗುತ್ತಲಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರವೊಂದು ಬುಧವಾರ ಉರುಳಿಬಿದ್ದಿತ್ತು. ಇದರಿಂದಾಗಿ ಈ ಮಾರ್ಗದಲ್ಲಿ ವಾಹನಗಳ ಸಂಚಾರ ತಾತ್ಕಾಲಿಕವಾಗಿ ಬಂದ್ ಆಯಿತು. ಮರ ತೆರವು ಮಾಡಲು ಸ್ಥಳೀಯರು ಹರಸಾಹಸಪಟ್ಟರು.</p>.<p>ರಸ್ತೆ ಹಾಳು: ತಾಲ್ಲೂಕಿನ ಮೇಲ್ಮುರಿ ಹಾಗೂ ಹಂದಿಗನೂರು ಗ್ರಾಮಗಳ ನಡುವಿನ ರಸ್ತೆಯು ಮಳೆಯಿಂದಾಗಿ ಹಾಳಾಗಿದೆ. ನೀರು ನಿಂತುಕೊಂಡು ಪ್ರಯಾಣಿಕರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-23-552165548</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>