‘ದುಡಿಮೆ ಇಲ್ಲ ಕೆಲಸ ಕೊಡಿ, ದಿನಸಿ ಸಿಕ್ಕಿಲ್ಲ ಕೊಡಿಸಿ, ರೇಷನ್ ಕಾರ್ಡ್ ಬಂದಿಲ್ಲ, ಹೊರ ಜಿಲ್ಲೆಗೆ ಹೋಗಲು ಪಾಸ್ ಬೇಕಿತ್ತು... ಇಂಥ ಕರೆಗಳೇ ಜಾಸ್ತಿ ಬರುತ್ತಿವೆ. ಕರೆ ಬಂದಾಗ, ಅವರ ಹೆಸರು, ವಿಳಾಸ, ಮೊಬೈಲ್ ಸಂಖ್ಯೆಯನ್ನು ನಮೂದಿಸಿಕೊಂಡು, ಸಂಬಂಧಪಟ್ಟ ಇಲಾಖೆ ಅಧಿಕಾರಿ ಗಮನಕ್ಕೆ ತರುತ್ತೇವೆ’ ಎಂದು ಸಹಾಯವಾಣಿ ಕೇಂದ್ರದ ಮುಖ್ಯಸ್ಥ ಚನ್ನಬಸಪ್ಪ ಚಿಂದಿ ಮಾಹಿತಿ ನೀಡಿದರು.