<p>ಹಾವೇರಿ: ಜಿಲ್ಲೆಯ ಹಲವು ಕಡೆಗಳಲ್ಲಿ ಚಿನ್ನ ಹಾಗೂ ಇತರೆ ನೈಸರ್ಗಿಕ ಖನಿಜ ಸಂಪತ್ತು ಇರುವ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆಹಾಕಿರುವ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ), ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಏರ್ಕ್ರಾಫ್ಟ್ ಉಪಕರಣದ ಮೂಲಕ ಶೋಧ ಕಾರ್ಯ ಶುರು ಮಾಡಿದೆ.</p>.<p>ವಿಶೇಷ ಅಭಿಯಾನದ ಅಂಗವಾಗಿ ಕೇರಳ ರಾಜ್ಯದ ಕೆಲ ಪ್ರದೇಶಗಳಿಂದ ಹುಡುಕಾಟ ಆರಂಭಿಸಿರುವ ಜಿಎಸ್ಐ ಅಧಿಕಾರಿಗಳು, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ಮುಗಿಸಿ ಈಗ ಹಾವೇರಿ ಜಿಲ್ಲೆಗೆ ಪ್ರವೇಶಿಸಿದ್ದಾರೆ.</p>.<p>ಜಿಲ್ಲೆಯ ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಶನಿವಾರ, ಭಾನುವಾರ ಏರ್ಕ್ರಾಫ್ಟ್ ಹಾರಾಟ ನಡೆಸಿದೆ. ಇದನ್ನು ನೋಡಿದ ಸ್ಥಳೀಯರು, ಆತಂಕ ಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೊಂದು ಸಮೀಕ್ಷೆಯ ಹಾರಾಟ. ಆತಂಕಪಡದಂತೆ ಜನರಿಗೆ ತಿಳಿಸಿದ್ದಾರೆ.</p>.<p>ಸ್ಯಾಟ್ಲೈಟ್ ಸಮೀಕ್ಷೆ: ಭೂಮಿಯ ಒಡಲಾಳದಲ್ಲಿರುವ ಖನಿಜಗಳನ್ನು ಪ್ರಾಥಮಿಕವಾಗಿ ಪತ್ತೆ ಮಾಡಲು ಸ್ಯಾಟ್ಲೈಟ್ ವ್ಯವಸ್ಥೆಯಿದೆ. ಅದೇ ಸ್ಯಾಟ್ಲೆಟ್ ನೀಡುವ ಪ್ರಾಥಮಿಕ ಮಾಹಿತಿ ಆಧರಿಸಿ, ಆಯ್ಧ ಜಾಗಗಳಲ್ಲಿ ಇದೀಗ ಸಮೀಕ್ಷೆ ಶುರುವಾಗಿದೆ.</p>.<p>ರಾಣೆಬೆನ್ನೂರು ತಾಲ್ಲೂಕಿನ ಕಾಕೋಳದ ಗುಡ್ಡ ಹಾಗೂ ಹಾನಗಲ್ ತಾಲ್ಲೂಕಿನ ಮಾರಂಬೀಡ ಗುಡ್ಡದ ಬಳಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಈ ಹಿಂದೆ ಸುದ್ದಿಗಳು ಹರಿದಾಡಿದ್ದವು. ಕೆಲ ಸಂಶೋಧಕರು, ಗುಡ್ಡಗಳಲ್ಲಿ ಸಂಶೋಧನೆಯನ್ನೂ ನಡೆಸಿದ್ದರು. ಆದರೆ, ಎಷ್ಟು ಪ್ರಮಾಣದಲ್ಲಿ ಚಿನ್ನವಿದೆ ಎಂಬುದು ಗೊತ್ತಾಗಿರಲಿಲ್ಲ. ಈಗ ಸಮೀಕ್ಷೆ ನಡೆಯುತ್ತಿರುವುದರಿಂದ, ಚಿನ್ನದ ನಿಕ್ಷೇಪದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವ ನಿರೀಕ್ಷೆಯಿದೆ.</p>.<p>ಆತಂಕಪಡದಂತೆ ಎಸ್.ಪಿ. ಕೋರಿಕೆ: ‘ಜಿಲ್ಲೆಯಲ್ಲಿ ಲಭ್ಯವಿರುವ ಖನಿಜ ಸಂಪತ್ತುಗಳ ಶೋಧನೆಗಾಗಿ ಹಲವು ಕಡೆಗಳಲ್ಲಿ ಏರ್ಕ್ರಾಫ್ಟ್ ಹಾರಾಟ ನಡೆಸುತ್ತಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ತಿಳಿಸಿದ್ದಾರೆ.</p>.<p>‘ಜನರು ಆತಂಕಪಡುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ.</p>.<p>‘ಜಿಎಸ್ಐ ಅಧಿಕಾರಿಗಳು ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು ಹಾಗೂ ಹಾವೇರಿ ತಾಲೂಕಿನ ಹಲವು ಕಡೆಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವಿಮಾನವು ಭೂಮಿಯ ಕೆಳಭಾಗದಲ್ಲಿ ಹಾರಾಟ ನಡೆಸುತ್ತದೆ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-22-1626125452</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ಜಿಲ್ಲೆಯ ಹಲವು ಕಡೆಗಳಲ್ಲಿ ಚಿನ್ನ ಹಾಗೂ ಇತರೆ ನೈಸರ್ಗಿಕ ಖನಿಜ ಸಂಪತ್ತು ಇರುವ ಬಗ್ಗೆ ಪ್ರಾಥಮಿಕ ಮಾಹಿತಿ ಕಲೆಹಾಕಿರುವ ಭಾರತೀಯ ಭೂ ಸರ್ವೇಕ್ಷಣಾ ಸಂಸ್ಥೆ (ಜಿಎಸ್ಐ), ಮಾಹಿತಿಯನ್ನು ಖಚಿತಪಡಿಸಿಕೊಳ್ಳಲು ಏರ್ಕ್ರಾಫ್ಟ್ ಉಪಕರಣದ ಮೂಲಕ ಶೋಧ ಕಾರ್ಯ ಶುರು ಮಾಡಿದೆ.</p>.<p>ವಿಶೇಷ ಅಭಿಯಾನದ ಅಂಗವಾಗಿ ಕೇರಳ ರಾಜ್ಯದ ಕೆಲ ಪ್ರದೇಶಗಳಿಂದ ಹುಡುಕಾಟ ಆರಂಭಿಸಿರುವ ಜಿಎಸ್ಐ ಅಧಿಕಾರಿಗಳು, ಉಡುಪಿ, ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆ ಮುಗಿಸಿ ಈಗ ಹಾವೇರಿ ಜಿಲ್ಲೆಗೆ ಪ್ರವೇಶಿಸಿದ್ದಾರೆ.</p>.<p>ಜಿಲ್ಲೆಯ ಹಾನಗಲ್, ಹಿರೇಕೆರೂರು ಹಾಗೂ ಶಿಗ್ಗಾವಿ ತಾಲ್ಲೂಕಿನ ಹಲವು ಕಡೆಗಳಲ್ಲಿ ಶನಿವಾರ, ಭಾನುವಾರ ಏರ್ಕ್ರಾಫ್ಟ್ ಹಾರಾಟ ನಡೆಸಿದೆ. ಇದನ್ನು ನೋಡಿದ ಸ್ಥಳೀಯರು, ಆತಂಕ ಗೊಂಡು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಇದೊಂದು ಸಮೀಕ್ಷೆಯ ಹಾರಾಟ. ಆತಂಕಪಡದಂತೆ ಜನರಿಗೆ ತಿಳಿಸಿದ್ದಾರೆ.</p>.<p>ಸ್ಯಾಟ್ಲೈಟ್ ಸಮೀಕ್ಷೆ: ಭೂಮಿಯ ಒಡಲಾಳದಲ್ಲಿರುವ ಖನಿಜಗಳನ್ನು ಪ್ರಾಥಮಿಕವಾಗಿ ಪತ್ತೆ ಮಾಡಲು ಸ್ಯಾಟ್ಲೈಟ್ ವ್ಯವಸ್ಥೆಯಿದೆ. ಅದೇ ಸ್ಯಾಟ್ಲೆಟ್ ನೀಡುವ ಪ್ರಾಥಮಿಕ ಮಾಹಿತಿ ಆಧರಿಸಿ, ಆಯ್ಧ ಜಾಗಗಳಲ್ಲಿ ಇದೀಗ ಸಮೀಕ್ಷೆ ಶುರುವಾಗಿದೆ.</p>.<p>ರಾಣೆಬೆನ್ನೂರು ತಾಲ್ಲೂಕಿನ ಕಾಕೋಳದ ಗುಡ್ಡ ಹಾಗೂ ಹಾನಗಲ್ ತಾಲ್ಲೂಕಿನ ಮಾರಂಬೀಡ ಗುಡ್ಡದ ಬಳಿ ಚಿನ್ನದ ನಿಕ್ಷೇಪ ಇರುವ ಬಗ್ಗೆ ಈ ಹಿಂದೆ ಸುದ್ದಿಗಳು ಹರಿದಾಡಿದ್ದವು. ಕೆಲ ಸಂಶೋಧಕರು, ಗುಡ್ಡಗಳಲ್ಲಿ ಸಂಶೋಧನೆಯನ್ನೂ ನಡೆಸಿದ್ದರು. ಆದರೆ, ಎಷ್ಟು ಪ್ರಮಾಣದಲ್ಲಿ ಚಿನ್ನವಿದೆ ಎಂಬುದು ಗೊತ್ತಾಗಿರಲಿಲ್ಲ. ಈಗ ಸಮೀಕ್ಷೆ ನಡೆಯುತ್ತಿರುವುದರಿಂದ, ಚಿನ್ನದ ನಿಕ್ಷೇಪದ ಬಗ್ಗೆ ಸ್ಪಷ್ಟ ಮಾಹಿತಿ ಸಿಗುವ ನಿರೀಕ್ಷೆಯಿದೆ.</p>.<p>ಆತಂಕಪಡದಂತೆ ಎಸ್.ಪಿ. ಕೋರಿಕೆ: ‘ಜಿಲ್ಲೆಯಲ್ಲಿ ಲಭ್ಯವಿರುವ ಖನಿಜ ಸಂಪತ್ತುಗಳ ಶೋಧನೆಗಾಗಿ ಹಲವು ಕಡೆಗಳಲ್ಲಿ ಏರ್ಕ್ರಾಫ್ಟ್ ಹಾರಾಟ ನಡೆಸುತ್ತಿದೆ’ ಎಂದು ಜಿಲ್ಲಾ ಎಸ್.ಪಿ. ಯಶೋಧಾ ವಂಟಗೋಡಿ ತಿಳಿಸಿದ್ದಾರೆ.</p>.<p>‘ಜನರು ಆತಂಕಪಡುವ ಅವಶ್ಯಕತೆಯಿಲ್ಲ’ ಎಂದಿದ್ದಾರೆ.</p>.<p>‘ಜಿಎಸ್ಐ ಅಧಿಕಾರಿಗಳು ಜಿಲ್ಲೆಯ ಹಿರೇಕೆರೂರು, ಬ್ಯಾಡಗಿ, ರಾಣೆಬೆನ್ನೂರು ಹಾಗೂ ಹಾವೇರಿ ತಾಲೂಕಿನ ಹಲವು ಕಡೆಗಳಲ್ಲಿ ಸಮೀಕ್ಷೆ ನಡೆಸುತ್ತಿದ್ದಾರೆ. ಈ ವಿಮಾನವು ಭೂಮಿಯ ಕೆಳಭಾಗದಲ್ಲಿ ಹಾರಾಟ ನಡೆಸುತ್ತದೆ. ಈ ಬಗ್ಗೆ ಜನರು ಆತಂಕಪಡುವ ಅಗತ್ಯವಿಲ್ಲ’ ಎಂದಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260504-22-1626125452</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>