<p>ಹಾನಗಲ್: ನನೆಗುದಿಗೆ ಬಿದ್ದಿರುವ ನಾಲ್ಕರ್ಕ್ರಾಸ್ ಮತ್ತು ಶಿರಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಭೇಟಿ ನೀಡಿದರು. ರಸ್ತೆ ಕಾಮಗಾರಿಯಿಂದ ಮುಕ್ತಿ ಕೊಡಿಸುವಂತೆ ಈ ವೇಳೆ ಹೆದ್ದಾರಿಗೆ ಹೊಂದಿಕೊಂಡ ಗ್ರಾಮಗಳ ಜನರು ಆಗ್ರಹಿಸಿದರು.</p>.<p>ಸಾಗಾರಮಾಲಾ ಯೋಜನೆಯಲ್ಲಿ ಸುಧಾರಣೆ ಮಾಡುತ್ತಿರುವ ಈ ರಸ್ತೆಗೆ ಹೊಂದಿಕೊಂಡ ತಾಲ್ಲೂಕಿನ ನಾಲ್ಕರ್ಕ್ರಾಸ್, ಹನುಮನಕೊಪ್ಪ, ಬಾಳಿಹಳ್ಳಿ, ಸಮ್ಮಸಗಿ ಗ್ರಾಮಗಳ ಜನರ ಸಮಸ್ಯೆಗಳನ್ನು ಆಲಿಸಿದ ಸಂಸದ ಬೊಮ್ಮಾಯಿ, ಸ್ಥಳದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದರು.</p>.<p>‘ಸುಮಾರು ನಾಲ್ಕು ವರ್ಷಗಳಿಂದ ಈ ರಸ್ತೆ ಕಾಮಗಾರಿಯ ದುಷ್ಟರಿಣಾಮಗಳನ್ನು ಅನುಭವಿಸುತಿದ್ದೇವೆ. ಕಾಮಗಾರಿ ವೇಗ ಪಡೆಯುತ್ತಿಲ್ಲ. ಇದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಗ್ರಾಮಗಳ ಭಾಗದಲ್ಲಿ ಚರಂಡಿ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಲಾಗಿದೆ’ ಎಂದು ಜನರು ಅಳಲು ತೋಡಿಕೊಂಡರು.</p>.<p>‘ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ಏಳುವ ದೂಳು ಮಕ್ಕಳು, ವೃದ್ಧರಿಗೆ ಕಾಯಿಲೆ ತರುತ್ತಿದೆ. ಅವೈಜ್ಞಾನಿಕವಾದ ಚರಂಡಿ ಕಾಮಗಾರಿ ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುತ್ತಿದೆ’ ಎಂದು ಹನುಮನಕೊಪ್ಪ, ಬಾಳಿಹಳ್ಳಿ, ಸಮ್ಮಸಗಿ ಗ್ರಾಮಸ್ಥರು ಸಮಸ್ಯೆ ತೆರೆದಿಟ್ಟರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.</p>.<p>ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ಬೊಮ್ಮಾಯಿ, ಒಂದು ತಿಂಗಳ ಒಳಗಾಗಿ ರಸ್ತೆ ಸಮತಟ್ಟು ಮಾಡಿ ಸಂಚಾರಕ್ಕೆ ಯೋಗ್ಯ ಮಾಡಬೇಕು. ನಿತ್ಯ ಎರಡು ಬಾರಿ ರಸ್ತೆಗೆ ನೀರು ಹಾಕಿ ದೂಳು ಏಳದಂತೆ ಎಚ್ಚರಿಕೆ ವಹಿಸಬೇಕು ಎಂದರು.</p>.<p>ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಹೊನ್ನಾವರ ವಿಭಾಗದ ಅಧಿಕಾರಿಗಳಾದ ಎಂ.ಶಿವಕುಮಾರ, ವಿನಾಯಕ ಸೊಂಟಗೆ, ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ರಾಘವೇಂದ್ರ ತಹಸೀಲ್ದಾರ್, ಕೃಷ್ಣ ಈಳಿಗೇರ, ಅಣ್ಣಪ್ಪ ಚಾಕಾಪೂರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-22-1585248170</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾನಗಲ್: ನನೆಗುದಿಗೆ ಬಿದ್ದಿರುವ ನಾಲ್ಕರ್ಕ್ರಾಸ್ ಮತ್ತು ಶಿರಸಿ ರಸ್ತೆ ಕಾಮಗಾರಿ ಸ್ಥಳಕ್ಕೆ ಸಂಸದ ಬಸವರಾಜ ಬೊಮ್ಮಾಯಿ ಶುಕ್ರವಾರ ಭೇಟಿ ನೀಡಿದರು. ರಸ್ತೆ ಕಾಮಗಾರಿಯಿಂದ ಮುಕ್ತಿ ಕೊಡಿಸುವಂತೆ ಈ ವೇಳೆ ಹೆದ್ದಾರಿಗೆ ಹೊಂದಿಕೊಂಡ ಗ್ರಾಮಗಳ ಜನರು ಆಗ್ರಹಿಸಿದರು.</p>.<p>ಸಾಗಾರಮಾಲಾ ಯೋಜನೆಯಲ್ಲಿ ಸುಧಾರಣೆ ಮಾಡುತ್ತಿರುವ ಈ ರಸ್ತೆಗೆ ಹೊಂದಿಕೊಂಡ ತಾಲ್ಲೂಕಿನ ನಾಲ್ಕರ್ಕ್ರಾಸ್, ಹನುಮನಕೊಪ್ಪ, ಬಾಳಿಹಳ್ಳಿ, ಸಮ್ಮಸಗಿ ಗ್ರಾಮಗಳ ಜನರ ಸಮಸ್ಯೆಗಳನ್ನು ಆಲಿಸಿದ ಸಂಸದ ಬೊಮ್ಮಾಯಿ, ಸ್ಥಳದಲ್ಲಿ ಹಾಜರಿದ್ದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಂದ ಮಾಹಿತಿ ಪಡೆದರು.</p>.<p>‘ಸುಮಾರು ನಾಲ್ಕು ವರ್ಷಗಳಿಂದ ಈ ರಸ್ತೆ ಕಾಮಗಾರಿಯ ದುಷ್ಟರಿಣಾಮಗಳನ್ನು ಅನುಭವಿಸುತಿದ್ದೇವೆ. ಕಾಮಗಾರಿ ವೇಗ ಪಡೆಯುತ್ತಿಲ್ಲ. ಇದ್ದ ರಸ್ತೆಯನ್ನು ಅಗೆದು ಹಾಕಲಾಗಿದೆ. ಗ್ರಾಮಗಳ ಭಾಗದಲ್ಲಿ ಚರಂಡಿ ಕಾಮಗಾರಿಯನ್ನು ಅರ್ದಕ್ಕೆ ನಿಲ್ಲಿಸಲಾಗಿದೆ’ ಎಂದು ಜನರು ಅಳಲು ತೋಡಿಕೊಂಡರು.</p>.<p>‘ರಸ್ತೆಯಲ್ಲಿ ವಾಹನಗಳ ಸಂಚಾರದಿಂದ ಏಳುವ ದೂಳು ಮಕ್ಕಳು, ವೃದ್ಧರಿಗೆ ಕಾಯಿಲೆ ತರುತ್ತಿದೆ. ಅವೈಜ್ಞಾನಿಕವಾದ ಚರಂಡಿ ಕಾಮಗಾರಿ ಮಳೆಗಾಲದಲ್ಲಿ ಅವಾಂತರ ಸೃಷ್ಟಿಸುತ್ತಿದೆ’ ಎಂದು ಹನುಮನಕೊಪ್ಪ, ಬಾಳಿಹಳ್ಳಿ, ಸಮ್ಮಸಗಿ ಗ್ರಾಮಸ್ಥರು ಸಮಸ್ಯೆ ತೆರೆದಿಟ್ಟರು. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲು ಒತ್ತಾಯಿಸಿದರು.</p>.<p>ಸ್ಥಳದಲ್ಲಿ ಹಾಜರಿದ್ದ ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚನೆ ನೀಡಿದ ಸಂಸದ ಬೊಮ್ಮಾಯಿ, ಒಂದು ತಿಂಗಳ ಒಳಗಾಗಿ ರಸ್ತೆ ಸಮತಟ್ಟು ಮಾಡಿ ಸಂಚಾರಕ್ಕೆ ಯೋಗ್ಯ ಮಾಡಬೇಕು. ನಿತ್ಯ ಎರಡು ಬಾರಿ ರಸ್ತೆಗೆ ನೀರು ಹಾಕಿ ದೂಳು ಏಳದಂತೆ ಎಚ್ಚರಿಕೆ ವಹಿಸಬೇಕು ಎಂದರು.</p>.<p>ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಿದ ಹೊನ್ನಾವರ ವಿಭಾಗದ ಅಧಿಕಾರಿಗಳಾದ ಎಂ.ಶಿವಕುಮಾರ, ವಿನಾಯಕ ಸೊಂಟಗೆ, ಮಾಜಿ ಶಾಸಕ ಶಿವರಾಜ ಸಜ್ಜನರ, ಮುಖಂಡರಾದ ರಾಘವೇಂದ್ರ ತಹಸೀಲ್ದಾರ್, ಕೃಷ್ಣ ಈಳಿಗೇರ, ಅಣ್ಣಪ್ಪ ಚಾಕಾಪೂರ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260425-22-1585248170</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>