<p>ಸವಣೂರು: ಸಾಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಮೆರವಣಿಗೆ ಸೋಮವಾರ ನೆರವೇರಿತು.</p>.<p>ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸಾಲಿ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ದ್ವಿತೀಯ ವರ್ಷದ ಅಂಗವಾಗಿ ಪ್ರಾಥಃಕಾಲದಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತಿಭಾವದ ವಾತಾವರಣ ಮನೆ ಮಾಡಿತ್ತು.</p>.<p>ಮುತೈದೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಶೃದ್ಧೆ ಹಾಗೂ ಭಕ್ತಿಭಾವದಿಂದ ನೆರವೇರಿತು. ದೇವಿಯ ಮುಂದೆ ಸಾಲಾಗಿ ನಿಂತ ಮುತೈದೆಯರು ತಮ್ಮ ಕುಟುಂಬದ ಕಲ್ಯಾಣ, ಸಂತಾನಸೌಭಾಗ್ಯ ಹಾಗೂ ಶಾಂತಿ–ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.</p>.<p>ಪಲ್ಲಕ್ಕಿ ಮೆರವಣಿಗೆ ಹಾಗೂ ಕುಂಭ ಮೆರವಣಿಗೆಗೆ ಆರಕ್ಷಕ ನಿರೀಕ್ಷಕ ತಿಮ್ಮಣ್ಣ ಎಸ್. ಚಾಮನೂರ ಚಾಲನೆ ನೀಡಿದರು.</p>.<p>ಕುಂಭ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಹೆಜ್ಜೆ ಹಾಕಿದರು.</p>.<p>ಭಟ್ಕಳ ಚಂಡೆ ವಾದ್ಯಗಳ ಘೋಷ ಧ್ವನಿಗಳು ಹಾಗೂ ಪಟ್ಟಣದ ಯುವಕರ ಜಾಂಜ್ ಮೇಳಗಳ ನಾದ ಮಾಧುರ್ಯಗಳಿಂದ ಆಕಾಶವನ್ನೇ ಕದಲಿಸುವಂತಾಯಿತು.</p>.<p>ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಶುಕ್ರವಾರ ಪೇಟೆ, ಭರಮಲಿಂಗೇಶ್ವರ ವೃತ್ತ, ಮುಖ್ಯ ಮಾರುಕಟ್ಟೆ, ಸಿಂಪಿಗಲ್ಲಿ ಹಾಗೂ ದಂಡಿನ ಪೇಟೆ ಮಾರ್ಗಗಳಿಂದ ಸಾಗಿದ ಮೆರವಣಿಗೆ ಎಲ್ಲೆಡೆ ಭಕ್ತಜನರಿಂದ ಅದ್ದೂರಿ ಸ್ವಾಗತ ನೀಡದರು.</p>.<p>ಮಾರ್ಗಮಧ್ಯೆ ಭಕ್ತರು ಹೂಮಾಲೆಗಳು ಅರ್ಪಿಸಿ, ಆರತಿಗಳು ಬೆಳಗಿಸಿ ದೇವಿಯ ದರ್ಶನ ಪಡೆದರು.</p>.<p>ಕೆ.ಇ.ಬಿ ಗಣೇಶ ದೇವಸ್ಥಾನದಿಂದ ಸಾಗಿದ ಮೆರವಣಿಗೆ ಅಂತಿಮವಾಗಿ ಡಾ. ವಿ.ಕೆ ಗೋಕಾಕ ವೃತ್ತದ ಸಮೀಪವಿರುವ ಶ್ರೀ ಸಾಲಿ ದುರ್ಗಾದೇವಿ ದೈವ ಸನ್ನಿಧಿ ಆವರಣದಲ್ಲಿ ಸಮಾಪ್ತಿಯಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260325-22-905904780</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಸವಣೂರು: ಸಾಲಿ ದುರ್ಗಾದೇವಿ ಜಾತ್ರಾ ಮಹೋತ್ಸವದ ಮೆರವಣಿಗೆ ಸೋಮವಾರ ನೆರವೇರಿತು.</p>.<p>ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಸಾಲಿ ದುರ್ಗಾ ದೇವಿಯ ಜಾತ್ರಾ ಮಹೋತ್ಸವದ ದ್ವಿತೀಯ ವರ್ಷದ ಅಂಗವಾಗಿ ಪ್ರಾಥಃಕಾಲದಿಂದಲೇ ದೇವಸ್ಥಾನ ಆವರಣದಲ್ಲಿ ಭಕ್ತಿಭಾವದ ವಾತಾವರಣ ಮನೆ ಮಾಡಿತ್ತು.</p>.<p>ಮುತೈದೆಯರಿಂದ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ಶೃದ್ಧೆ ಹಾಗೂ ಭಕ್ತಿಭಾವದಿಂದ ನೆರವೇರಿತು. ದೇವಿಯ ಮುಂದೆ ಸಾಲಾಗಿ ನಿಂತ ಮುತೈದೆಯರು ತಮ್ಮ ಕುಟುಂಬದ ಕಲ್ಯಾಣ, ಸಂತಾನಸೌಭಾಗ್ಯ ಹಾಗೂ ಶಾಂತಿ–ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು.</p>.<p>ಪಲ್ಲಕ್ಕಿ ಮೆರವಣಿಗೆ ಹಾಗೂ ಕುಂಭ ಮೆರವಣಿಗೆಗೆ ಆರಕ್ಷಕ ನಿರೀಕ್ಷಕ ತಿಮ್ಮಣ್ಣ ಎಸ್. ಚಾಮನೂರ ಚಾಲನೆ ನೀಡಿದರು.</p>.<p>ಕುಂಭ ಮೆರವಣಿಗೆಯಲ್ಲಿ ನೂರಕ್ಕೂ ಹೆಚ್ಚು ಮಹಿಳೆಯರು ಹೆಜ್ಜೆ ಹಾಕಿದರು.</p>.<p>ಭಟ್ಕಳ ಚಂಡೆ ವಾದ್ಯಗಳ ಘೋಷ ಧ್ವನಿಗಳು ಹಾಗೂ ಪಟ್ಟಣದ ಯುವಕರ ಜಾಂಜ್ ಮೇಳಗಳ ನಾದ ಮಾಧುರ್ಯಗಳಿಂದ ಆಕಾಶವನ್ನೇ ಕದಲಿಸುವಂತಾಯಿತು.</p>.<p>ಡಾ. ಬಿ.ಆರ್ ಅಂಬೇಡ್ಕರ್ ವೃತ್ತ, ಬಸ್ ನಿಲ್ದಾಣ ಮಾರ್ಗವಾಗಿ ಶುಕ್ರವಾರ ಪೇಟೆ, ಭರಮಲಿಂಗೇಶ್ವರ ವೃತ್ತ, ಮುಖ್ಯ ಮಾರುಕಟ್ಟೆ, ಸಿಂಪಿಗಲ್ಲಿ ಹಾಗೂ ದಂಡಿನ ಪೇಟೆ ಮಾರ್ಗಗಳಿಂದ ಸಾಗಿದ ಮೆರವಣಿಗೆ ಎಲ್ಲೆಡೆ ಭಕ್ತಜನರಿಂದ ಅದ್ದೂರಿ ಸ್ವಾಗತ ನೀಡದರು.</p>.<p>ಮಾರ್ಗಮಧ್ಯೆ ಭಕ್ತರು ಹೂಮಾಲೆಗಳು ಅರ್ಪಿಸಿ, ಆರತಿಗಳು ಬೆಳಗಿಸಿ ದೇವಿಯ ದರ್ಶನ ಪಡೆದರು.</p>.<p>ಕೆ.ಇ.ಬಿ ಗಣೇಶ ದೇವಸ್ಥಾನದಿಂದ ಸಾಗಿದ ಮೆರವಣಿಗೆ ಅಂತಿಮವಾಗಿ ಡಾ. ವಿ.ಕೆ ಗೋಕಾಕ ವೃತ್ತದ ಸಮೀಪವಿರುವ ಶ್ರೀ ಸಾಲಿ ದುರ್ಗಾದೇವಿ ದೈವ ಸನ್ನಿಧಿ ಆವರಣದಲ್ಲಿ ಸಮಾಪ್ತಿಯಾಯಿತು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260325-22-905904780</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>