<p>ಹಾವೇರಿ: ಜಿಲ್ಲೆಯ ಶಿಗ್ಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ 250 ಹಾಸಿಗೆಗಳ ಆಸ್ಪತ್ರೆಯು ಕಟ್ಟಡದ ಉದ್ಘಾಟನೆಗಷ್ಟೇ ಸೀಮಿತವಾಗಿದ್ದು, ತಮ್ಮ ಆರೋಗ್ಯ ಸೇವೆಗೆ ಆಸ್ಪತ್ರೆಯು ಲಭ್ಯವಾಗದಿದ್ದರಿಂದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.</p>.<p>2022ರ ಅಕ್ಟೋಬರ್ 7ರಿಂದ ಆರಂಭಗೊಂಡಿದ್ದ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾಮಗಾರಿಯು 2024ಕ್ಕೆ ಮುಗಿಯಬೇಕಿತ್ತು. ಆದರೆ, ಗುತ್ತಿಗೆ ದಾರನ ನಿರ್ಲಕ್ಷ್ಯದಿಂದಾಗಿ ಕಟ್ಟಡ ನಿರ್ಮಾಣ ಕೆಲಸ ಎರಡು ವರ್ಷ ತಡವಾಗಿದೆ. ಇದೇ ಕಟ್ಟಡವನ್ನು ಏಪ್ರಿಲ್ 27ರಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಉದ್ಘಾಟಿಸಿದ್ದಾರೆ.</p>.<p>ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದ ಸಂದರ್ಭದಲ್ಲಿ, ‘₹50 ಕೋಟಿ ವೆಚ್ಚದ ವೈದ್ಯಕೀಯ ಸಲಕರಣೆಗಳು, ಲ್ಯಾಬ್, ಹಾಸಿಗೆ, ಶಸ್ತ್ರಚಿಕಿತ್ಸೆ ಕೊಠಡಿ ಒದಗಿಸಬೇಕು’ ಎಂಬ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ, ಒಂದೇ ಒಂದು ಉಪಕರಣವಿಲ್ಲದೇ ಆಸ್ಪತ್ರೆಯ ಕಟ್ಟಡವನ್ನು ಮಾತ್ರ ನಿರ್ಮಿಸಲಾಗಿದೆ. ₹50 ಕೋಟಿ ಬದಲು ₹14 ಕೋಟಿ ಮೊತ್ತದ ಉಪಕರಣ ಖರೀದಿಗೆ ಟೆಂಡರ್ ನೀಡಲಾಗಿದೆ. ‘ಈ ಹಣದಲ್ಲಿ ಎಷ್ಟು ಹಾಸಿಗೆ ಹಾಗೂ ಉಪಕರಣ ಬರುತ್ತವೆ. ಪುನಃ ಕಟ್ಟಡ ಖಾಲಿಯೇ ಇರುತ್ತದೆ’ ಎಂದು ಜನರು ಹೇಳುತ್ತಿದ್ದಾರೆ.</p>.<p>ಕಟ್ಟಡವಾದರೆ, ಆಸ್ಪತ್ರೆ ಆಗೊಲ್ಲ: ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶಿಗ್ಗಾವಿಗೆ ಬಂದು 250 ಹಾಸಿಗೆಯ ಆಸ್ಪತ್ರೆಯ ಉದ್ಘಾಟಿಸಿದ್ದಾರೆ. ಕಟ್ಟಡ ಉದ್ಘಾಟನೆಯಾದ ಕೂಡಲೇ, ಆಸ್ಪತ್ರೆ ಉದ್ಘಾಟಿಸಿದ್ದೇವೆ ಎಂದು ಬೀಗುವಂತಿಲ್ಲ. ವೈದ್ಯಕೀಯ ಸಲಕರಣೆ, ವೈದ್ಯರ ನೇಮಕಾತಿ ಮಾಡಬೇಕು. ಎಲ್ಲ ಸೌಕರ್ಯಗಳನ್ನು ಕಲ್ಪಿಸಿ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ ಮಾಡಿದರೆ ಮಾತ್ರ, ಜನರಿಗೆ ಅನುಕೂಲವಾಗುತ್ತದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p>.<p>‘ಕೇವಲ ಕಟ್ಟಡ ಉದ್ಘಾಟನೆ ಆಗಿರುವುದು ನಮಗೆ ನಿರಾಸೆ ತಂದಿದೆ. ಮುಂದಿನ ಎರಡು–ಮೂರು ತಿಂಗಳ ಒಳಗಾಗಿ ವೈದ್ಯರ ನೇಮಕಾತಿ ಮಾಡಬೇಕು. ವೈದ್ಯಕೀಯ ಸಲಕರಣೆ, ಹಾಸಿಗೆ ವ್ಯವಸ್ಥೆ ಮಾಡಿ ಆಸ್ಪತ್ರೆ ಸೇವೆ ಆರಂಭಿಸಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>‘ನಾನು ಮುಖ್ಯಮಂತ್ರಿ ಆಗಿದ್ದಾಗ 250 ಹಾಸಿಗೆ ಆಸ್ಪತ್ರೆಗೆ ಮಂಜೂರಾತಿ ನೀಡಿದ್ದೆ. 2022ರ ಜೂನ್ 7ರಂದು ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2022ರ ಅಕ್ಟೋಬರ್ 7ರಂದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಕರಾರಾರಿ ನೊಂದಿಗೆ ₹96.5 ಕೋಟಿ ಮೊತ್ತದ ಕಾಮಗಾರಿಯನ್ನು ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗಿತ್ತು. ಇದರ ಜೊತೆಗೆ ಸುಮಾರು ₹ 50 ಕೋಟಿ ವೆಚ್ಚದ ವೈದ್ಯಕೀಯ ಸಲಕರಣೆಗಳು, ಲ್ಯಾಬ್, ಹಾಸಿಗೆ, ಶಸ್ತ್ರಚಿಕಿತ್ಸೆ ಕೊಠಡಿಗೆ ಬೇಕಾದ ಸಲಕರಣೆಗಳನ್ನು ಮಂಜೂರಾತಿ ನೀಡಿದ್ದೇವು. 2024ಕ್ಕೆ ಮುಗಿಯಬೇಕಿದ್ದ ಕಾಮಗಾರಿಯು 2026ಕ್ಕೆ ಮುಗಿಯುತ್ತಿದೆ. ಎರಡು ವರ್ಷ ತಡವಾಗಿ ಕಾಮಗಾರಿ ಮುಗಿಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಈಗ, ಕಟ್ಟಡ ಖಾಲಿ ಇರುವುದು ಶೋಚನೀಯ’ ಎಂದು ಹೇಳಿದ್ದಾರೆ.</p>.<p>‘ಶಿಗ್ಗಾವಿಯಲ್ಲಿ ಸದ್ಯ ಇರುವ 100 ಹಾಸಿಗೆಯ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೊರತೆಯಿದೆ. ಹೊಸದಾದ 250 ಹಾಸಿಗೆಯ ಆಸ್ಪತ್ರೆಗೆ ಹೊಸ ಹುದ್ದೆಗಳು ಮಂಜೂರಾಗಿಲ್ಲ. ಇಂಥ ಸಂದರ್ಭದಲ್ಲಿ ಕೇವಲ ಕಟ್ಟಡ ಉದ್ಘಾಟನೆಯಾದರೆ, ಶಿಗ್ಗಾವಿ ತಾಲ್ಲೂಕು ಹಾಗೂ ಸುತ್ತಲಿನ ತಾಲ್ಲೂಕಿನ ಜನರಿಗೆ ಏನು ಪ್ರಯೋಜನ ? ಈಗಿರುವ ಆಸ್ಪತ್ರೆಯಿಂದ ವ್ಯವಸ್ಥೆ ಸುಧಾರಣೆ ಆಗಲು ಸಾಧ್ಯವಿಲ್ಲ. ಈಗಾಗಲೇ ವೈದ್ಯಕೀಯ ಸೇವೆಯ ಕೊರತೆಯಿಂದ ಜನರು ನರಳುತ್ತಿದ್ದಾರೆ’ ಎಂದು ದೂರಿದ್ದಾರೆ.</p>.<p>‘ದಿನೇಶ ಗುಂಡೂರಾವ್ ಒಬ್ಬ ಸಮರ್ಥ ಆರೋಗ್ಯ ಸಚಿವರೆಂದು ನಂಬಿದ್ದೇವೆ. ಅವರು ತಿಳಿವಳಿಕೆ ಇದ್ದವರು. ಅವರು ಸಕಲ ವ್ಯವಸ್ಥೆ ಮಾಡಿ, ಆಸ್ಪತ್ರೆಯನ್ನು ಉದ್ಘಾಟಿಸಬೇಕಿತ್ತು. ಆದರೆ, ಕಟ್ಟಡ ಮಾತ್ರ ಉದ್ಘಾಟಿಸಿದ್ದಾರೆ’ ಎಂದಿದ್ದಾರೆ.</p>.<div><blockquote>ಶಿಗ್ಗಾವಿಯ ನೂತನ ತಾಲ್ಲೂಕು ಆಸ್ಪತ್ರೆಯ ಉಪಕರಣ ಖರೀದಿಗೆ ₹ 14 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಅದು ಪೂರ್ಣಗೊಂಡ ಬಳಿಕವೇ ಉಪಕರಣ ಅಳವಡಿಸಿ, ಆಸ್ಪತ್ರೆ ಸೇವೆ ಆರಂಭಿಸಲಾಗುವುದು</blockquote><span class="attribution"> ದಿನೇಶ ಗುಂಡೂರಾವ್, ಆರೋಗ್ಯ ಸಚಿವ</span></div>.<p><strong>ಕಾರ್ಯಕರ್ತರ ನಡುವೆ ಮಾರಾಮಾರಿ</strong></p><p>ಶಿಗ್ಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ಆಸ್ಪತ್ರೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ದಿನೇಶ ಗುಂಡೂರಾವ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಂದಿದ್ದರು. ಸ್ಥಳೀಯ ಕಾಂಗ್ರೆಸ್ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಹಾಗೂ ಪರಾಜಿತ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಸಹ ಹಾಜರಿದ್ದರು. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದರು.</p><p>ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು. ಸಚಿವರು ಕಟ್ಟಡದೊಳಗೆ ಹೋಗುತ್ತಿದ್ದಂತೆ, ಅವರ ಹಿಂದೆಯೇ ಒಳಗೆ ಹೋಗಲು ಕಾರ್ಯಕರ್ತರು ಮುಗಿಬಿದ್ದರು. ಪೊಲೀಸರು ಎಲ್ಲರನ್ನೂ ತಡೆದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು.</p><p>ಬಿಜೆಪಿ ಕಾರ್ಯಕರ್ತರೊಬ್ಬರು, ‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಆಸ್ಪತ್ರೆ ಮಂಜೂರು ಮಾಡಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಅವರನ್ನು ಆಹ್ವಾನಿಸಿಲ್ಲ. ಸ್ಥಳೀಯ ಕಾಂಗ್ರೆಸ್ ಶಾಸಕ, ತಮ್ಮದೇ ಸರ್ಕಾರದ ಸಾಧನೆ ರೀತಿಯಲ್ಲಿ ಬಿಂಬಿಸಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಹೇಳಿದರು.</p><p>ಅದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ವಾದಕ್ಕೆ ಇಳಿದರು. ಪರಸ್ಪರ ಗಲಾಟೆ ಶುರುವಾಗಿ, ತಳ್ಳಾಟವಾಯಿತು. ಮಧ್ಯಪ್ರವೇಶಿದ ಪೊಲೀಸರು, ಇಬ್ಬರನ್ನು ಎರಡು ಬದಿಯಲ್ಲಿ ಸರಿಸಿ ಪರಿಸ್ಥಿತಿ ತಿಳಿಗೊಳಿಸಿದರು.</p><p>‘ಆಸ್ಪತ್ರೆ ಕಟ್ಟಡ ನಿರ್ಮಾಣದ ನಂತರ, ಕ್ರೆಡಿಟ್ ಪಡೆಯಲು ಕಾಂಗ್ರೆಸ್–ಬಿಜೆಪಿ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ಇದರ ಭಾಗವಾಗಿಯೇ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಮಾರಾಮಾರಿ ನಡೆದಿದೆ’ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹಾವೇರಿ: ಜಿಲ್ಲೆಯ ಶಿಗ್ಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ 250 ಹಾಸಿಗೆಗಳ ಆಸ್ಪತ್ರೆಯು ಕಟ್ಟಡದ ಉದ್ಘಾಟನೆಗಷ್ಟೇ ಸೀಮಿತವಾಗಿದ್ದು, ತಮ್ಮ ಆರೋಗ್ಯ ಸೇವೆಗೆ ಆಸ್ಪತ್ರೆಯು ಲಭ್ಯವಾಗದಿದ್ದರಿಂದ ಜನರು ಆಕ್ರೋಶ ಹೊರಹಾಕುತ್ತಿದ್ದಾರೆ.</p>.<p>2022ರ ಅಕ್ಟೋಬರ್ 7ರಿಂದ ಆರಂಭಗೊಂಡಿದ್ದ ಆಸ್ಪತ್ರೆಯ ಕಟ್ಟಡ ನಿರ್ಮಾಣದ ಕಾಮಗಾರಿಯು 2024ಕ್ಕೆ ಮುಗಿಯಬೇಕಿತ್ತು. ಆದರೆ, ಗುತ್ತಿಗೆ ದಾರನ ನಿರ್ಲಕ್ಷ್ಯದಿಂದಾಗಿ ಕಟ್ಟಡ ನಿರ್ಮಾಣ ಕೆಲಸ ಎರಡು ವರ್ಷ ತಡವಾಗಿದೆ. ಇದೇ ಕಟ್ಟಡವನ್ನು ಏಪ್ರಿಲ್ 27ರಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಉದ್ಘಾಟಿಸಿದ್ದಾರೆ.</p>.<p>ತಾಲ್ಲೂಕು ಆಸ್ಪತ್ರೆ ನಿರ್ಮಾಣದ ಬಗ್ಗೆ ಪ್ರಸ್ತಾಪಿಸಿದ್ದ ಸಂದರ್ಭದಲ್ಲಿ, ‘₹50 ಕೋಟಿ ವೆಚ್ಚದ ವೈದ್ಯಕೀಯ ಸಲಕರಣೆಗಳು, ಲ್ಯಾಬ್, ಹಾಸಿಗೆ, ಶಸ್ತ್ರಚಿಕಿತ್ಸೆ ಕೊಠಡಿ ಒದಗಿಸಬೇಕು’ ಎಂಬ ಬಗ್ಗೆ ತೀರ್ಮಾನಿಸಲಾಗಿತ್ತು. ಆದರೆ, ಒಂದೇ ಒಂದು ಉಪಕರಣವಿಲ್ಲದೇ ಆಸ್ಪತ್ರೆಯ ಕಟ್ಟಡವನ್ನು ಮಾತ್ರ ನಿರ್ಮಿಸಲಾಗಿದೆ. ₹50 ಕೋಟಿ ಬದಲು ₹14 ಕೋಟಿ ಮೊತ್ತದ ಉಪಕರಣ ಖರೀದಿಗೆ ಟೆಂಡರ್ ನೀಡಲಾಗಿದೆ. ‘ಈ ಹಣದಲ್ಲಿ ಎಷ್ಟು ಹಾಸಿಗೆ ಹಾಗೂ ಉಪಕರಣ ಬರುತ್ತವೆ. ಪುನಃ ಕಟ್ಟಡ ಖಾಲಿಯೇ ಇರುತ್ತದೆ’ ಎಂದು ಜನರು ಹೇಳುತ್ತಿದ್ದಾರೆ.</p>.<p>ಕಟ್ಟಡವಾದರೆ, ಆಸ್ಪತ್ರೆ ಆಗೊಲ್ಲ: ‘ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಶಿಗ್ಗಾವಿಗೆ ಬಂದು 250 ಹಾಸಿಗೆಯ ಆಸ್ಪತ್ರೆಯ ಉದ್ಘಾಟಿಸಿದ್ದಾರೆ. ಕಟ್ಟಡ ಉದ್ಘಾಟನೆಯಾದ ಕೂಡಲೇ, ಆಸ್ಪತ್ರೆ ಉದ್ಘಾಟಿಸಿದ್ದೇವೆ ಎಂದು ಬೀಗುವಂತಿಲ್ಲ. ವೈದ್ಯಕೀಯ ಸಲಕರಣೆ, ವೈದ್ಯರ ನೇಮಕಾತಿ ಮಾಡಬೇಕು. ಎಲ್ಲ ಸೌಕರ್ಯಗಳನ್ನು ಕಲ್ಪಿಸಿ ಸುಸಜ್ಜಿತ ಆಸ್ಪತ್ರೆ ಉದ್ಘಾಟನೆ ಮಾಡಿದರೆ ಮಾತ್ರ, ಜನರಿಗೆ ಅನುಕೂಲವಾಗುತ್ತದೆ’ ಎಂದು ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.</p>.<p>‘ಕೇವಲ ಕಟ್ಟಡ ಉದ್ಘಾಟನೆ ಆಗಿರುವುದು ನಮಗೆ ನಿರಾಸೆ ತಂದಿದೆ. ಮುಂದಿನ ಎರಡು–ಮೂರು ತಿಂಗಳ ಒಳಗಾಗಿ ವೈದ್ಯರ ನೇಮಕಾತಿ ಮಾಡಬೇಕು. ವೈದ್ಯಕೀಯ ಸಲಕರಣೆ, ಹಾಸಿಗೆ ವ್ಯವಸ್ಥೆ ಮಾಡಿ ಆಸ್ಪತ್ರೆ ಸೇವೆ ಆರಂಭಿಸಬೇಕು’ ಎಂದು ಆಗ್ರಹಿಸಿದ್ದಾರೆ.</p>.<p>‘ನಾನು ಮುಖ್ಯಮಂತ್ರಿ ಆಗಿದ್ದಾಗ 250 ಹಾಸಿಗೆ ಆಸ್ಪತ್ರೆಗೆ ಮಂಜೂರಾತಿ ನೀಡಿದ್ದೆ. 2022ರ ಜೂನ್ 7ರಂದು ಆಡಳಿತಾತ್ಮಕ ಅನುಮೋದನೆ ಸಿಕ್ಕಿತ್ತು. 2022ರ ಅಕ್ಟೋಬರ್ 7ರಂದು, 24 ತಿಂಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಕರಾರಾರಿ ನೊಂದಿಗೆ ₹96.5 ಕೋಟಿ ಮೊತ್ತದ ಕಾಮಗಾರಿಯನ್ನು ಗುತ್ತಿಗೆದಾರನಿಗೆ ಗುತ್ತಿಗೆ ನೀಡಲಾಗಿತ್ತು. ಇದರ ಜೊತೆಗೆ ಸುಮಾರು ₹ 50 ಕೋಟಿ ವೆಚ್ಚದ ವೈದ್ಯಕೀಯ ಸಲಕರಣೆಗಳು, ಲ್ಯಾಬ್, ಹಾಸಿಗೆ, ಶಸ್ತ್ರಚಿಕಿತ್ಸೆ ಕೊಠಡಿಗೆ ಬೇಕಾದ ಸಲಕರಣೆಗಳನ್ನು ಮಂಜೂರಾತಿ ನೀಡಿದ್ದೇವು. 2024ಕ್ಕೆ ಮುಗಿಯಬೇಕಿದ್ದ ಕಾಮಗಾರಿಯು 2026ಕ್ಕೆ ಮುಗಿಯುತ್ತಿದೆ. ಎರಡು ವರ್ಷ ತಡವಾಗಿ ಕಾಮಗಾರಿ ಮುಗಿಯುತ್ತಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಎದ್ದು ಕಾಣಿಸುತ್ತಿದೆ. ಈಗ, ಕಟ್ಟಡ ಖಾಲಿ ಇರುವುದು ಶೋಚನೀಯ’ ಎಂದು ಹೇಳಿದ್ದಾರೆ.</p>.<p>‘ಶಿಗ್ಗಾವಿಯಲ್ಲಿ ಸದ್ಯ ಇರುವ 100 ಹಾಸಿಗೆಯ ಆಸ್ಪತ್ರೆಯಲ್ಲಿ ವೈದ್ಯರು ಮತ್ತು ಪ್ಯಾರಾ ಮೆಡಿಕಲ್ ಸಿಬ್ಬಂದಿ ಕೊರತೆಯಿದೆ. ಹೊಸದಾದ 250 ಹಾಸಿಗೆಯ ಆಸ್ಪತ್ರೆಗೆ ಹೊಸ ಹುದ್ದೆಗಳು ಮಂಜೂರಾಗಿಲ್ಲ. ಇಂಥ ಸಂದರ್ಭದಲ್ಲಿ ಕೇವಲ ಕಟ್ಟಡ ಉದ್ಘಾಟನೆಯಾದರೆ, ಶಿಗ್ಗಾವಿ ತಾಲ್ಲೂಕು ಹಾಗೂ ಸುತ್ತಲಿನ ತಾಲ್ಲೂಕಿನ ಜನರಿಗೆ ಏನು ಪ್ರಯೋಜನ ? ಈಗಿರುವ ಆಸ್ಪತ್ರೆಯಿಂದ ವ್ಯವಸ್ಥೆ ಸುಧಾರಣೆ ಆಗಲು ಸಾಧ್ಯವಿಲ್ಲ. ಈಗಾಗಲೇ ವೈದ್ಯಕೀಯ ಸೇವೆಯ ಕೊರತೆಯಿಂದ ಜನರು ನರಳುತ್ತಿದ್ದಾರೆ’ ಎಂದು ದೂರಿದ್ದಾರೆ.</p>.<p>‘ದಿನೇಶ ಗುಂಡೂರಾವ್ ಒಬ್ಬ ಸಮರ್ಥ ಆರೋಗ್ಯ ಸಚಿವರೆಂದು ನಂಬಿದ್ದೇವೆ. ಅವರು ತಿಳಿವಳಿಕೆ ಇದ್ದವರು. ಅವರು ಸಕಲ ವ್ಯವಸ್ಥೆ ಮಾಡಿ, ಆಸ್ಪತ್ರೆಯನ್ನು ಉದ್ಘಾಟಿಸಬೇಕಿತ್ತು. ಆದರೆ, ಕಟ್ಟಡ ಮಾತ್ರ ಉದ್ಘಾಟಿಸಿದ್ದಾರೆ’ ಎಂದಿದ್ದಾರೆ.</p>.<div><blockquote>ಶಿಗ್ಗಾವಿಯ ನೂತನ ತಾಲ್ಲೂಕು ಆಸ್ಪತ್ರೆಯ ಉಪಕರಣ ಖರೀದಿಗೆ ₹ 14 ಕೋಟಿ ಮೊತ್ತದ ಟೆಂಡರ್ ಕರೆಯಲಾಗಿದೆ. ಅದು ಪೂರ್ಣಗೊಂಡ ಬಳಿಕವೇ ಉಪಕರಣ ಅಳವಡಿಸಿ, ಆಸ್ಪತ್ರೆ ಸೇವೆ ಆರಂಭಿಸಲಾಗುವುದು</blockquote><span class="attribution"> ದಿನೇಶ ಗುಂಡೂರಾವ್, ಆರೋಗ್ಯ ಸಚಿವ</span></div>.<p><strong>ಕಾರ್ಯಕರ್ತರ ನಡುವೆ ಮಾರಾಮಾರಿ</strong></p><p>ಶಿಗ್ಗಾವಿಯಲ್ಲಿ ನೂತನವಾಗಿ ನಿರ್ಮಿಸಿರುವ ತಾಲ್ಲೂಕು ಆಸ್ಪತ್ರೆಯ ಕಟ್ಟಡ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಚಿವ ದಿನೇಶ ಗುಂಡೂರಾವ್ ಹಾಗೂ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಬಂದಿದ್ದರು. ಸ್ಥಳೀಯ ಕಾಂಗ್ರೆಸ್ ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ ಹಾಗೂ ಪರಾಜಿತ ಬಿಜೆಪಿ ಅಭ್ಯರ್ಥಿ ಭರತ್ ಬೊಮ್ಮಾಯಿ ಸಹ ಹಾಜರಿದ್ದರು. ಹೀಗಾಗಿ, ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳದಲ್ಲಿ ಸೇರಿದ್ದರು.</p><p>ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ನೂಕುನುಗ್ಗಲು ಉಂಟಾಯಿತು. ಸಚಿವರು ಕಟ್ಟಡದೊಳಗೆ ಹೋಗುತ್ತಿದ್ದಂತೆ, ಅವರ ಹಿಂದೆಯೇ ಒಳಗೆ ಹೋಗಲು ಕಾರ್ಯಕರ್ತರು ಮುಗಿಬಿದ್ದರು. ಪೊಲೀಸರು ಎಲ್ಲರನ್ನೂ ತಡೆದರು. ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ತಳ್ಳಾಟ ನಡೆಯಿತು.</p><p>ಬಿಜೆಪಿ ಕಾರ್ಯಕರ್ತರೊಬ್ಬರು, ‘ಬಸವರಾಜ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿದ್ದಾಗ, ಆಸ್ಪತ್ರೆ ಮಂಜೂರು ಮಾಡಿದ್ದಾರೆ. ಉದ್ಘಾಟನೆ ಸಂದರ್ಭದಲ್ಲಿ ಸೌಜನ್ಯಕ್ಕಾದರೂ ಅವರನ್ನು ಆಹ್ವಾನಿಸಿಲ್ಲ. ಸ್ಥಳೀಯ ಕಾಂಗ್ರೆಸ್ ಶಾಸಕ, ತಮ್ಮದೇ ಸರ್ಕಾರದ ಸಾಧನೆ ರೀತಿಯಲ್ಲಿ ಬಿಂಬಿಸಿ ಪ್ರಚಾರ ಪಡೆಯುತ್ತಿದ್ದಾರೆ’ ಎಂದು ಹೇಳಿದರು.</p><p>ಅದಕ್ಕೆ ಸಿಟ್ಟಿಗೆದ್ದ ಕಾಂಗ್ರೆಸ್ ಕಾರ್ಯಕರ್ತರು, ವಾದಕ್ಕೆ ಇಳಿದರು. ಪರಸ್ಪರ ಗಲಾಟೆ ಶುರುವಾಗಿ, ತಳ್ಳಾಟವಾಯಿತು. ಮಧ್ಯಪ್ರವೇಶಿದ ಪೊಲೀಸರು, ಇಬ್ಬರನ್ನು ಎರಡು ಬದಿಯಲ್ಲಿ ಸರಿಸಿ ಪರಿಸ್ಥಿತಿ ತಿಳಿಗೊಳಿಸಿದರು.</p><p>‘ಆಸ್ಪತ್ರೆ ಕಟ್ಟಡ ನಿರ್ಮಾಣದ ನಂತರ, ಕ್ರೆಡಿಟ್ ಪಡೆಯಲು ಕಾಂಗ್ರೆಸ್–ಬಿಜೆಪಿ ಪಕ್ಷಗಳ ನಡುವೆ ಜಿದ್ದಾಜಿದ್ದಿ ನಡೆಯುತ್ತಿದೆ. ಸಾಮಾಜಿಕ ಮಾಧ್ಯಮಗಳಲ್ಲಿ ಪರಸ್ಪರ ಪೋಸ್ಟ್ಗಳನ್ನು ಹಾಕಲಾಗುತ್ತಿದೆ. ಇದರ ಭಾಗವಾಗಿಯೇ ಕಟ್ಟಡ ಉದ್ಘಾಟನೆ ಸಂದರ್ಭದಲ್ಲಿ ಮಾರಾಮಾರಿ ನಡೆದಿದೆ’ ಎಂದು ಸ್ಥಳೀಯ ಮುಖಂಡರೊಬ್ಬರು ಹೇಳಿದರು.</p> .<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>