‘ಕಾರ್ಡ್ ಪಡೆದವರಿಗೆ 60 ವರ್ಷ ದಾಟಿದ ಬಳಿಕ ಮಾಸಿಕ ಪಿಂಚಣಿ, ತರಬೇತಿ ಮತ್ತು ಉಪಕರಣಗಳ ಸೌಲಭ್ಯ, ಅಂತ್ಯಕ್ರಿಯೆಗೆ ಸಹಾಯಧನ, ಮಹಿಳಾ ಫಲಾನುಭವಿಗಳಿಗೆ ಹೆರಿಗೆ ಭತ್ಯೆ, ಕಾರ್ಮಿಕರ ಮಕ್ಕಳಿಗೆ ವಿದ್ಯಾರ್ಥಿ ವೇತನ, ಪ್ರೋತ್ಸಾಹ ಧನ ಸೇರಿದಂತೆ ಹಲವು ಸೌಲಭ್ಯಗಳು ಸಿಗುತ್ತವೆ. ಹೀಗಾಗಿ, ಪ್ರತಿಯೊಬ್ಬರಿಗೂ ಸ್ಮಾರ್ಟ್ ಕಾರ್ಡ್ನ ಅಗತ್ಯವಿದೆ. ಹೀಗಾಗಿ, ಕಾರ್ಮಿಕರ ಅನುಕೂಲಕ್ಕಾಗಿ ತುರ್ತಾಗಿ ಅಧಿಕಾರಿಗಳ ನೇಮಕವಾಗಬೇಕು. ನಾನು ಮಕ್ಕಳ ವಿದ್ಯಾರ್ಥಿ ವೇತನಕ್ಕಾಗಿಮೂರು ಬಾರಿ ಅರ್ಜಿ ಸಲ್ಲಿಸಿದ್ದೇನೆ. ಈವರೆಗೂ ಹಣ ಬಂದಿಲ್ಲ’ ಎಂದು ಚಿಕ್ಕಲಿಂಗದಹಳ್ಳಿಯ ಕಾರ್ಮಿಕ ರಾಜೇಸಾಬ್ ಬೇಸರ ವ್ಯಕ್ತಪಡಿಸಿದರು.