<p><strong>ಹಿರೇಕೆರೂರ:</strong> ‘ಬ್ಯಾಂಕ್ ಉನ್ನತ ಸ್ಥಾನದಲ್ಲಿದ್ದು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಆಡಳಿತ ಮಂಡಳಿಯ ಪಾತ್ರ ಪ್ರಮುಖವಾಗಿದ್ದು, ತಾಲ್ಲೂಕಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಉತ್ತಮ ಆಡಳಿತ ನಡೆಸಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.</p>.<p>ಪಟ್ಟಣದ ಪಿಎಲ್ಡಿ ಬ್ಯಾಂಕ್ ಬಿ.ಜಿ. ಬಣಕಾರ ಸಹಕಾರಿ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಅವರು ಮಾತನಾಡಿದರು.</p>.<p>ಪಿ ಎಲ್ ಡಿ ಬ್ಯಾಂಕ್ನ ನೂತನ ಅಧ್ಯಕ್ಷ ಸುರೇಶ ಮಡಿವಾಳರ ಮಾತನಾಡಿ, ‘ರೈತರಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ತಂದು ಬ್ಯಾಂಕ್ ಆದಾಯ ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು. ರೈತರು ತಾವು ಪಡೆದ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿದರೆ ಬ್ಯಾಂಕ್ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಮ್ಮ ಬ್ಯಾಂಕ್ ಯೋಜನೆಗಳ ಜಾರಿಗೆ ಶ್ರಮಿಸಲಾಗುವುದು’ ಎಂದರು.</p>.<p>ಅಧ್ಯಕ್ಷರಾಗಿ ಹಿರೇಕೆರೂರು ಪಟ್ಟಣದ ಸುರೇಶ ಮಡಿವಾಳರ ಹಾಗೂ ಉಪಾಧ್ಯಕ್ಷರಾಗಿ ಹಾದ್ರಿಹಳ್ಳಿ ಗ್ರಾಮದ ಸವಿತಾ ರಾಜು ಬಣಕಾರ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಮಲ್ಲನಗೌಡ್ರು ನಾಗಪ್ಪನವರ ,ರಮೇಶ ಮಾಳಮ್ಮನವರ , ಷಣ್ಮುಖಯ್ಯ ಮಳಿಮಠ , ಮಲ್ಲಿಕಾರ್ಜುನ ಬುರುಡಿಕಟ್ಟಿ , ಭೀಮಣ್ಣ ದೊಡ್ಡಗೌಡ್ರ , ನಾಗಣ್ಯ ಮುತ್ತಗಿ, ಮಹೇಶ ಆಗಸನಳ್ಳಿ, ಮಹೇಶ ಪಾಳ್ಯದ , ತಿರಕಮ್ಮ ಸಪ್ಪಾಳೆ, ಮೋಹನಗೌಡ ಪಾಟೀಲ್, ಮಹೇಂದ್ರ ಬಡಳ್ಳಿ, ರವಿ ಸಿದ್ದಪಗೌಡ್ರ, ರವಿ ಚಿಂದಿ, ಸಿದ್ದು ನರೇಗೌಡ್ರ, ಶಂಭಣ್ಣ ಹಂಸಭಾವಿ, ರಾಮಣ್ಣ ತೆಂಭದ, ಭರಮಪ್ಪ ಹರಿಜನ, ಪ್ರಭು ಮಳವಳ್ಳಿ, ಸನಾವುಲ್ಲಾ ಮಕಾಂದಾರ, ಪಿ.ಎಲ್.ಡಿ ಬ್ಯಾಂಕ್ ವ್ಯವಸ್ಥಾಪಕ ಕರಬಸಪ್ಪ ಭಜಂತ್ರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-22-1301024428</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹಿರೇಕೆರೂರ:</strong> ‘ಬ್ಯಾಂಕ್ ಉನ್ನತ ಸ್ಥಾನದಲ್ಲಿದ್ದು ಪ್ರಗತಿಯತ್ತ ಕೊಂಡೊಯ್ಯುವಲ್ಲಿ ಆಡಳಿತ ಮಂಡಳಿಯ ಪಾತ್ರ ಪ್ರಮುಖವಾಗಿದ್ದು, ತಾಲ್ಲೂಕಿನ ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಉತ್ತಮ ಆಡಳಿತ ನಡೆಸಬೇಕು’ ಎಂದು ಶಾಸಕ ಯು.ಬಿ. ಬಣಕಾರ ಹೇಳಿದರು.</p>.<p>ಪಟ್ಟಣದ ಪಿಎಲ್ಡಿ ಬ್ಯಾಂಕ್ ಬಿ.ಜಿ. ಬಣಕಾರ ಸಹಕಾರಿ ಸಭಾಭವನದಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಅವಿರೋಧವಾಗಿ ಆಯ್ಕೆಯಾದ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಸನ್ಮಾನಿಸಿ ಅವರು ಮಾತನಾಡಿದರು.</p>.<p>ಪಿ ಎಲ್ ಡಿ ಬ್ಯಾಂಕ್ನ ನೂತನ ಅಧ್ಯಕ್ಷ ಸುರೇಶ ಮಡಿವಾಳರ ಮಾತನಾಡಿ, ‘ರೈತರಿಗೆ ಅನುಕೂಲ ಆಗುವಂತಹ ಯೋಜನೆಗಳನ್ನು ತಂದು ಬ್ಯಾಂಕ್ ಆದಾಯ ಹೆಚ್ಚಿಸುವ ಮೂಲಕ ಅಭಿವೃದ್ಧಿಗೆ ಶ್ರಮಿಸಲಾಗುವುದು. ರೈತರು ತಾವು ಪಡೆದ ಸಾಲಗಳನ್ನು ಸಕಾಲಕ್ಕೆ ಮರುಪಾವತಿಸಿದರೆ ಬ್ಯಾಂಕ್ ತನ್ನ ಕಾರ್ಯ ಚಟುವಟಿಕೆಗಳನ್ನು ವಿಸ್ತರಿಸಲು ಸಾಧ್ಯವಾಗುತ್ತದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದಿಂದ ನಮ್ಮ ಬ್ಯಾಂಕ್ ಯೋಜನೆಗಳ ಜಾರಿಗೆ ಶ್ರಮಿಸಲಾಗುವುದು’ ಎಂದರು.</p>.<p>ಅಧ್ಯಕ್ಷರಾಗಿ ಹಿರೇಕೆರೂರು ಪಟ್ಟಣದ ಸುರೇಶ ಮಡಿವಾಳರ ಹಾಗೂ ಉಪಾಧ್ಯಕ್ಷರಾಗಿ ಹಾದ್ರಿಹಳ್ಳಿ ಗ್ರಾಮದ ಸವಿತಾ ರಾಜು ಬಣಕಾರ ಅವಿರೋಧವಾಗಿ ಆಯ್ಕೆಯಾದರು. ಮಾಜಿ ಅಧ್ಯಕ್ಷ ಮಲ್ಲನಗೌಡ್ರು ನಾಗಪ್ಪನವರ ,ರಮೇಶ ಮಾಳಮ್ಮನವರ , ಷಣ್ಮುಖಯ್ಯ ಮಳಿಮಠ , ಮಲ್ಲಿಕಾರ್ಜುನ ಬುರುಡಿಕಟ್ಟಿ , ಭೀಮಣ್ಣ ದೊಡ್ಡಗೌಡ್ರ , ನಾಗಣ್ಯ ಮುತ್ತಗಿ, ಮಹೇಶ ಆಗಸನಳ್ಳಿ, ಮಹೇಶ ಪಾಳ್ಯದ , ತಿರಕಮ್ಮ ಸಪ್ಪಾಳೆ, ಮೋಹನಗೌಡ ಪಾಟೀಲ್, ಮಹೇಂದ್ರ ಬಡಳ್ಳಿ, ರವಿ ಸಿದ್ದಪಗೌಡ್ರ, ರವಿ ಚಿಂದಿ, ಸಿದ್ದು ನರೇಗೌಡ್ರ, ಶಂಭಣ್ಣ ಹಂಸಭಾವಿ, ರಾಮಣ್ಣ ತೆಂಭದ, ಭರಮಪ್ಪ ಹರಿಜನ, ಪ್ರಭು ಮಳವಳ್ಳಿ, ಸನಾವುಲ್ಲಾ ಮಕಾಂದಾರ, ಪಿ.ಎಲ್.ಡಿ ಬ್ಯಾಂಕ್ ವ್ಯವಸ್ಥಾಪಕ ಕರಬಸಪ್ಪ ಭಜಂತ್ರಿ ಇದ್ದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260514-22-1301024428</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>