ಸವಣೂರ ಪಟ್ಟಣದಲ್ಲಿ ಹಾನಿಯಾದ 89 ಮನೆಗಳನ್ನು ಗುರುತಿಸಿ, ನಂತರ ಅವುಗಳನ್ನು ಬ್ಲಾಕ್ ಪಟ್ಟಿಯಲ್ಲಿ ಸೇರಿಸಲಾಗಿತ್ತು. ಸಂಘಟನೆ ಮನವಿ ಮೇರೆಗೆ ಅನ್ಬ್ಲಾಕ್ ಮಾಡಲಾಗಿದೆ. ಮೊದಲೇ ಹಂತದ ಸಹಾಯಧನವನ್ನು ಸರ್ಕಾರ ನೀಡಿದ್ದು, ಕಳೆದ ತಿಂಗಳಿನಲ್ಲಿ ಎರಡನೇ ಕಂತನ್ನು ಖಾತೆಗಳಿಗೆ ಜಮಾ ಮಾಡಿ, ಮಾರನೇ ದಿನ ವಾಪಸ್ ತೆಗೆದುಕೊಳ್ಳಲಾಗಿದೆ. ಮತ್ತೆ ಸಹಾಯಧನ ನೀಡಿರುವುದಿಲ್ಲ ಎಂದು ಆರೋಪಿಸಿದ್ದಾರೆ.