ಮನುಷ್ಯ ವಿನಯ ಸೌಜನ್ಯದ ಆಗರವನ್ನು ತನ್ನಲ್ಲಿ ಇಟ್ಟುಕೊಂಡಷ್ಟುಆತ್ಮ ತೃಪ್ತಿ ಎನಿಸುವುದು. ತನ್ನ ಅಜ್ಞಾನವನ್ನು ಯಾರು ತಿಳಿಯುತ್ತಾರೆಯೋ ಅವನೇ ಜ್ಞಾನಿ,ಸ್ವಜ್ಞಾನ ಜ್ಞಾನಿನೋ ವಿರತಃ ತನ್ನ ಅಜ್ಞಾನವನ್ನು ತಿಳಿಯದ ವ್ಯಕ್ತಿಗಳು ತೀರ ವಿರಳ. ಎನಗಿಂತ ಕಿರಿಯರಿಲ್ಲ, ಶಿವಭಕ್ತರಿಗಿಂತ ಹಿರಿಯರಿಲ್ಲ ಎಂಬ ನಿರಹಂಕಾರ ಭಾವವನ್ನು ವ್ಯಕ್ತ ಮಾಡಿದ್ದು ಬಸವಣ್ಣನವರ ಸುಜ್ಞಾನವಾಗಿದೆ.