ರಾಣೆಬೆನ್ನೂರು: ಅಕ್ರಮ ಗಣಿಗಾರಿಕೆ ನಡೆಸುತ್ತಿರುವ ತಾಲ್ಲೂಕಿನ ಹಿರೇಬಿದರಿ ಮತ್ತು ಐರಣಿ ಗ್ರಾಮಗಳ ಬಳಿ ತುಂಗಭದ್ರಾ ನದಿ ತೀರದ ಪ್ರದೇಶಗಳಿಗೆ ತಹಶೀಲ್ದಾರ್ ಗುರುಬಸವರಾಜ ಹಾಗೂ ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ದಾಳಿ ನಡೆಸಿ ಅಕ್ರಮ ಮರಳು ಗಣಿಗಾರಿಕೆಗೆ ಬಳಸುವ 13 ತೆಪ್ಪಗಳನ್ನು ಈಚೆಗೆ ವಶಪಡಿಸಿಕೊಂಡಿದ್ದಾರೆ.
ಗ್ರಾಮೀಣ ಠಾಣೆಗೆ ದೂರು ದಾಖಲಿಸಿದ್ದಾರೆ. ಗ್ರಾಮ ಜನಸೇವಕರಾದ ಸೋಮಣ್ಣ ತಗ್ಗಿನ, ಹನುಮಂತಪ್ಪ ಓಲೇಕಾರ, ಹಾಲೇಶ್ ತಳವಾರ, ಅಂಜನಿ ತಳವಾರ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನಾಗರಾಜ್ ಎಂ.ಇ, ಕಂದಾಯ ಇಲಾಖೆಯ ವಾಗೀಶ್ ಮಳೇಮಠ, ಯುವರಾಜ್.ಎನ್ ಹಾಗೂ ಪೊಲೀಸ್ ಸಿಬ್ಬಂದಿ ದಾಳಿಯಲ್ಲಿ ಭಾಗವಹಿಸಿದ್ದರು.