ಪ್ರತಿ ವರ್ಷದಂತೆ ಬೆತ್ತಸೇವೆ, ಬನ್ನಿ ಮುಡಿದು ನಂದಿಕೋಲು ಹಾಗೂ ಸಮ್ಯಾಳ ಮೆರವಣಿಗೆ ಮೂಲಕ ರಥ ಬೀದಿಯಲ್ಲಿ ಹಾಯ್ದು ಪಾದಗಟ್ಟಿ ತುದಿಯಲ್ಲಿ ನಿಂತ ಈರಣ್ಣ ಅವರು ಕಾರ್ಣಿಕ ನುಡಿದರು. ಒಳಿತು ಹಾಗೂ ಕೆಡಕುಗಳು ಸರಿಸಮನಾಗಿ ಹಂಚಿಕೆಯಾಗಲಿವೆ. ಮಳೆ ಮುಂದುವರಿಯುವ ಲಕ್ಷಣಗಳನ್ನು ವೀರಭದ್ರೇಶ್ವರ ದೇವರ ಕಾರ್ಣಿಕ ತಿಳಿಸುತ್ತದೆ ಎಂದು ಕಾರ್ಣಿಕವನ್ನು ಭಕ್ತರು ವಿಶ್ಲೇಷಿಸಿದರು. ದೇವಸ್ಥಾನ ಆಡಳಿತ ಮಂಡಳಿ ನಿರ್ದೇಶಕರು, ಗ್ರಾಮಸ್ಥರು, ಭಕ್ತರು ಪಾಲ್ಗೊಂಡಿದ್ದರು.