ಮೀಸಲಾತಿ ಬಗ್ಗೆ ಪಂಚಮಸಾಲಿ ಪೀಠಗಳ ಮಧ್ಯೆಯೇ ಭಿನ್ನಾಭಿಪ್ರಾಯವಿದೆಯಲ್ಲ ಎಂಬ ಪ್ರಶ್ನೆಗೆ, ‘ಆ ಸ್ವಾಮೀಜಿ (ಹರಿಹರ ಪೀಠದ ವಚನಾನಂದ ಸ್ವಾಮೀಜಿ) ಸುಖದ ಸುಪ್ಪತ್ತಿಗೆಯಲ್ಲಿದ್ದಾರೆ. ಅವರಿಗೆ ಮೀಸಲಾತಿ ಬೇಡದೇ ಇರಬಹುದು. ಮೀಸಲಾತಿ ರಾಜಕಾರಣಿಗಳಿಗಲ್ಲ, ಮಠಾಧೀಶರಿಗಲ್ಲ, ಸಮಾಜದ ಕಟ್ಟ ಕಡೆಯ ವ್ಯಕ್ತಿಗಾಗಿ ಬೇಕಿದೆ ಎಂದರು. ಮೂರನೇ ಪೀಠ ಉದಯದ ಬಗ್ಗೆ ಪ್ರತಿಕ್ರಿಯಿಸಿ, ‘ನನಗೆ ಯಾವ ಪೀಠವೂ ಗೊತ್ತಿಲ್ಲ. ನನ್ನ ಚಿತ್ತ ಮೀಸಲಾತಿಯತ್ತ’ ಎಂದರು.