ಕೋಡಿಹಳ್ಳಿ ಶ್ರೀಗಳ ರಾಜಕೀಯ ವಿಪ್ಲವ ಹೇಳಿಕೆಗೆ ಪ್ರತಿಕ್ರಿಯಿಸಿ, ‘ಒಮ್ಮೆ ಕೋಡಿಹಳ್ಳಿ ಶ್ರೀಗಳು ನನಗೆ ಭವಿಷ್ಯ ಹೇಳಿದ್ದರು. ‘ನೀವುರಾಜಕೀಯಕ್ಕೆ ಬರಬೇಡಿ, ನಿಮಗೆ ಭವಿಷ್ಯವಿಲ್ಲ’ ಅಂದಿದ್ರು. ಆದರೆ, ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ, ಈಗ ಸಚಿವನಾಗಿದ್ದೇನೆ. ಹಾಗಾದರೆ ಅವರು ಹೇಳಿದ ಭವಿಷ್ಯ ಏನಾಯ್ತು? ಎಲ್ಲವೂ ಭವಿಷ್ಯದ ಮೇಲೆ ನಿರ್ಧಾರವಾಗುವುದಿಲ್ಲ. ಮಾಟ–ಮಂತ್ರ ಮಾಡಿ ಚುನಾವಣೆ ಗೆಲ್ಲಲು ಸಾಧ್ಯವಿಲ್ಲ. ಜನಸೇವೆ, ಜನಸಂಪರ್ಕದಿಂದ ಚುನಾವಣೆ ಗೆಲ್ಲಬಹುದು ಎಂದು ಹೇಳಿದರು.