ಮೈಲಾರ ಶ್ರೀಗಳ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ‘ಸ್ವಾಮಿಗಳು ಕೊರೊನಾ ಬಗ್ಗೆ ಭವಿಷ್ಯ ಹೇಳಲಿ ನೋಡೋಣ. ಗಡ್ಡದಾರಿಯೊಬ್ಬರು ಸಿ.ಎಂ ಆಗುತ್ತಾರೆ ಅಂತ ಮೈಲಾರದ ಸ್ವಾಮೀಜಿ ಹೇಳಿರಬಹುದು. ಆದರೆ, ಭವಿಷ್ಯ ನಿರ್ಧಾರ ಮಾಡೋದು ರಾಜ್ಯದ ಪ್ರಜೆಗಳು. ದೇವೇಗೌಡರನ್ನು ಬೊಮ್ಮಾಯಿ ಭೇಟಿ ಮಾಡಿದ್ದಾರೆ. ಹಿರಿಯರನ್ನು ಭೇಟಿ ಮಾಡೋದು ಸಂಸ್ಕೃತಿ. ಇದಕ್ಕೆ ರಾಜಕೀಯ ಅರ್ಥ ಕಲ್ಪಿಸುವ ಅಗತ್ಯ ಇಲ್ಲ’ ಎಂದರು.