ರಕ್ಷಣಾ ವೇದಿಕೆ ಕಾರ್ಯದರ್ಶಿ ಸುಭಾಸ ಗಡ್ಡದ ಮಾತನಾಡಿ, ಯಾವ ಕಾರಣಕ್ಕಾಗಿ ಬಿ.ಕೆ.ಮೋಹನಕುಮಾರ ಅವರಿಗೆ ಕಾಂಗ್ರೆಸ್ ಬಾಗಿಲು ತೆರೆಯುತ್ತಿಲ್ಲ ಎಂಬುದನ್ನು ಸ್ಪಷ್ಟಪಡಿಸಬೇಕು. ನಮ್ಮದು ಕಾಂಗ್ರೆಸ್ ಪಕ್ಷದ ವಿರುದ್ಧ ಹೋರಾಟವಲ್ಲ. ಮೋಹನಕುಮಾರ ಅವರಿಗೆ ಗೌರವ ನೀಡಬೇಕು ಎಂದು ಆಗ್ರಹಿಸಿದರು. ರವಿ ನಿಂಬಕ್ಕನವರ, ಭೀಮಣ್ಣ ಬಾರ್ಕಿ, ಹೊನ್ನಪ್ಪ ಬಾಸೂರ, ಫಕ್ಕೀರೇಶ ಕರೆಣ್ಣನವರ, ಕೃಷ್ಣ ಮರಡಿ, ಬಸವರಾಜ ಮಲ್ನಾಡದ, ಸುರೇಶ ಜಾಡರ, ಶಂಕರ ಗಾಜಿ ಮತ್ತು ಮಹಿಳಾ ಅಭಿಮಾನಿಗಳು ಇದ್ದರು.