ಭಕ್ತರಲ್ಲಿನ ದೋಷ ನಿವಾರಣೆ ಮಾಡಿ ಅವರಲ್ಲಿ ಹೃದಯ ಶ್ರೀಮಂತಿಕೆ ಬೆಳೆಸುವಲ್ಲಿ ಸಾಧು, ಸಂತರ ಬಹುದೊಡ್ಡ ಜವಾಬ್ದಾರಿಯಾಗಿದೆ. ಆದರೆ, ಈಚೆಗೆ ಕೊಲೆ, ಸುಲಿಗೆ, ವಂಚನೆ, ಅನೈತಿಕತೆ ವಿಚಾರಗಳನ್ನು ಕೇಳಿದಾಗ ಸಾಧು ಸಂತರು ಮಾಡುವ ಕಾರ್ಯದಲ್ಲಿ ಲೋಪವಾಗಿದೆಯೊ ಅಥವಾ ಭಕ್ತರ ತಪ್ಪಿದೆಯೊ ಎಂಬ ಅನುಮಾನಗಳು ಕಾಡುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.