ಸಣ್ಣ ರೈತರು, ಕೂಲಿಕಾರರು, ಮಹಿಳೆಯರು ಹಾಗೂ ಇತರರು ಹೈನುಗಾರಿಕೆಯ ಮೂಲಕ ತಮ್ಮ ಬದುಕು ಕಟ್ಟಿಕೊಂಡು ಆರ್ಥಿಕವಾಗಿ ಸಶಕ್ತರಾಗಲಿ ಎನ್ನುವ ಸದುದ್ದೇಶದಿಂದ ಸರ್ಕಾರ ಪಶುಭಾಗ್ಯ ಯೋಜನೆ ಜಾರಿಗೊಳಿಸಿ, ಹಸು ಕೊಳ್ಳಲು ಸಬ್ಸಿಡಿ ಒದಗಿಸುತ್ತಿತ್ತು. ಯೋಜನೆಯ ಪ್ರಯೋಜನ ಪಡೆದ ಅನೇಕ ರೈತರು ಆರ್ಥಿಕ ಸಬಲತೆಯ ದಾರಿ ಕಂಡುಕೊಂಡಿದ್ದರು.