ಮಾಹಿತಿ ನೀಡಲು ವೇದಿಕೆಗೆ ಬಂದ ಎಪಿಎಂಸಿ ಅಧಿಕಾರಿ ಜಾವೇದ್ ಅವರನ್ನು ತರಾಟೆಗೆ ತೆಗೆದುಕೊಂಡ ಪಠಾಣ, ನೋಂದಾಯಿತ ಹಮಾಲರಿಗೆ ನಿವೇಶನ, ಮನೆ ಕಟ್ಟಿಸಿಕೊಡಲು ಸಾಧ್ಯವಾಗುತ್ತಿಲ್ಲವೇಕೆ ಎಂದು ಪ್ರಶ್ನಿಸಿದರು. ಈ ಬಗ್ಗೆ ಪ್ರಕ್ರಿಯೆ ಜಾರಿಯಲ್ಲಿದೆ ಎಂದು ಜಾವೇದ್ ಉತ್ತರಿಸಿದರು. ಬಳಿಕ ಇದಕ್ಕೆ ಸಂಬಂಧಿಸಿದ ಕಡತ ಕಚೇರಿಯಿಂದ ತರಿಸಿಕೊಂಡು ಸದಸ್ಯ ಪಠಾಣ ಅವರ ಟೇಬಲ್ ಬಳಿ ಬಂದು ಸಮಜಾಯಿಶಿ ನೀಡಿದರು. ದಾಖಲೆಗಳನ್ನು ನೋಡಿ ಕೆರಳಿದ ಪಠಾಣ, ಈ ಅಂಕಿ– ಸಂಖ್ಯೆಗಳನ್ನು 5 ವರ್ಷದಿಂದ ನೋಡುತ್ತಿದ್ದೇನೆ. ಪ್ರಗತಿ ಕಾರ್ಯರೂಪಕ್ಕೆ ಬಂದಿಲ್ಲ ಎಂದು ಸಿಡಿಮಿಡಿಗೊಂಡರು.