ನಗರದಲ್ಲಿ ಹಂದಿಗಳ ಹಾವಳಿ ವಿಪರೀತವಾಗಿದೆ. ಚರಂಡಿ ತ್ಯಾಜ್ಯವನ್ನು ರಸ್ತೆಗೆ ಹರಡುತ್ತಾ, ಕಸವನ್ನು ಕೆದರುತ್ತಾ, ಅನೈರ್ಮಲ್ಯ ವಾತಾವರಣ ಸೃಷ್ಟಿಸುತ್ತಿರುವ ಹಂದಿಗಳಿಂದ ನಾಗರಿಕರು ರೋಸಿ ಹೋಗಿ ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿಗುರುವಾರ ನಗರಸಭೆಯಲ್ಲಿ ಹಂದಿ ಮಾಲೀಕರ ಸಭೆ ನಡೆಸಿ, ಹಂದಿಗಳನ್ನು ಹೊರಗಡೆ ಸಾಗಿಸಲು ತಾಕೀತು ಮಾಡಲಾಗಿತ್ತು.