ವಿದೇಶದಲ್ಲಿ ಇರುವ ಕಪ್ಪು ಹಣವನ್ನು ತರುತ್ತೇನೆ ಆ ಹಣವನ್ನು ಪ್ರತಿಯೊಬ್ಬರ ಖಾತೆಗಳಿಗೆ ₹15 ಲಕ್ಷ ಹಾಕುತ್ತೇನೆ ಎಂದು ಭರವಸೆ ನೀಡಿದ್ದರು, ಖಾತೆಗೆ ಹಣ ಬಂದಿದಿಯಾ ಎಂದು ಪ್ರಶ್ನಿಸಿದರು. ಮೂರೂವರೇ ವರ್ಷದಿಂದ ಮಾನೆ ಅವರು ಕ್ಷೇತ್ರವನ್ನು ಬಿಟ್ಟು ಹೋಗದೆ ಜನರ ಕಷ್ಟ ನೋವುಗಳಿಗೆ ಸ್ಪಂದಿಸಿದ್ದಾರೆ ಆದ್ದರಿಂದ ಮಾನೆ ಅವರನ್ನು 25 ಸಾವಿರ ಮತಗಳಿಂದ ಗೆಲ್ಲಿಸಬೇಕು ಎಂದರು. ಮಾಜಿ ಶಾಸಕ ರುದ್ರಪ್ಪ ಲಮಾಣಿ ಮಾತನಾಡಿ, ಸಿದ್ದರಾಮಯ್ಯನವರು ಮುಖ್ಯಮಂತ್ರಿ ಆಗಿದ್ದ ಬಡ ಜನರಿಗೆ ಅನುಕುಲ ಮಾಡಿಕೊಟ್ಟಿದ್ದಾರೆ ಎಂದರು. ಮುಖಂಡರಾದ ಹರೀಶ್, ಸಂಜಯ ಗೌಡ, ಯಲ್ಲಪ್ಪ ಕಲ್ಲೇರ, ಫಯಾಜ್ ಲೋಹಾರ, ಚಂದ್ರಪ್ಪ ಜಾಲಗಾರ, ಆರೀಫ್ ಲೋಹಾರ, ಶಿವಯೋಗಿ ವಡೆಯರ, ಸಮದ್ ಮೂಡಿ, ವಾಸೀಮ್ ಪಠಣ, ಬಸವರಾಜ ಜೋಗಿ, ರಾಮಣ್ಣ ಶೇಷಗಿರಿ, ಗಣೇಶ ಹುಳ್ಳೇರ, ಸತೀಶ ತಳವಾರ ಇದ್ದರು.