ಹಾನಗಲ್: ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ಇಲ್ಲಿನ ನ್ಯಾಯಾಲಯ ಹತ್ತಿರದ ಶಂಕರ ವಿಷನ್ ಸೆಂಟರ್ನಲ್ಲಿ ಫೆ.7ರಂದು ಮಂಗಳವಾರ ಬೆಳಿಗ್ಗೆ ಉಚಿತ ನೇತ್ರ ತಪಾಸಣೆ, ಶಸ್ತ್ರಚಿಕಿತ್ಸೆ ಮತ್ತು ನೇತ್ರದಾನ ಜಾಗೃತಿ ಶಿಬಿರವನ್ನು ಆಯೋಜಿಸಲಾಗಿದೆ.
ಶಿವಮೊಗ್ಗದ ಶಂಕರ ಕಣ್ಣಿನ ಆಸ್ಪತ್ರೆ, ಹಾನಗಲ್ ಶಂಕರ ವಿಷನ್ ಸೆಂಟರ್, ಅಕ್ಕಿಆಲೂರಿನ ಸ್ನೇಹಮೈತ್ರಿ ನೇತ್ರದಾನಿಗಳ ಬಳಗದ ಸಹಯೋಗದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
ಅಂದು ಬೆಳಿಗ್ಗೆ 9.30ರಿಂದ ನೇತ್ರ ತಪಾಸಣೆ ಆರಂಭಗೊಳ್ಳಲಿದೆ. ಶಿವಮೊಗ್ಗ ಶಂಕರ ಕಣ್ಣಿನ ಆಸ್ಪತ್ರೆ ನೇತ್ರ ತಜ್ಞ ಡಾ.ಮಹೇಶ ಭಟ್ ಮತ್ತು 6 ತಾಂತ್ರಿಕ ಸಿಬ್ಬಂದಿ ಭಾಗವಹಿಸಲಿದ್ದಾರೆ.
‘ನೇತ್ರ ತಪಾಸಣೆಗೆ ಆಗಮಿಸುವವರು ಒಬ್ಬರು ಸಹಾಯಕರನ್ನು ಕರೆದುಕೊಂಡು ಬರಬೇಕು. ಒಂದು ಭಾವಚಿತ್ರ ಮತ್ತು ಆಧಾರ್ ಕಾರ್ಡ್ ತರಬೇಕು. ತಪಾಸಣೆಯ ನೋಂದಣಿಗಾಗಿ ಹಾನಗಲ್ನ ಶಂಕರ ವಿಷನ್ ಸೆಂಟರ್ನ ಪ್ರಕಾಶ (9880438221) ಅವರನ್ನು ಸಂಪರ್ಕಿಸಬೇಕು’ ಎಂದು ಆಯೋಜಕ ಕರಬಸಪ್ಪ ಗೊಂದಿ ತಿಳಿಸಿದ್ದಾರೆ.