ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಹಾನಗಲ್ಲ ತಾಲ್ಲೂಕಿನ ಅಕ್ಕಿಆಲೂರು ಗ್ರಾಮ ಗೀತಾ ಎಂಬುವವರನ್ನು 23 ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದೆ. ಕಳೆದ ಒಂದು ವರ್ಷದಿಂದ ಕೆಲವರ ಕುಮ್ಮಕ್ಕಿನಿಂದಾಗಿ ನನ್ನ ಪತ್ನಿ ನನ್ನಿಂದ ದೂರವಾಗಿ ಅಕ್ಕಿಆಲೂರಿಗೆ ಬಂದು ವಾಸವಾಗಿದ್ದಾಳೆ. ಅಲ್ಲದೇ ನ್ಯಾಯಾಲಯದ ಮೂಲಕ ನನ್ನಿಂದ ಜೀವನಾಂಶವನ್ನು ಪಡೆಯುತ್ತಿದ್ದಾರೆ. ಹೀಗಿದ್ದರೂ ಸಹ ಕೆಲವರ ಕುಮ್ಮಕ್ಕಿನಿಂದ ನನ್ನ ಇಬ್ಬರು ಮಕ್ಕಳನ್ನು ನೋಡಲು ಅವಕಾಶ ನೀಡುತ್ತಿಲ್ಲ. ಮಕ್ಕಳನ್ನು ನೋಡಲು ಅಕ್ಕಿಆಲೂರಿಗೆ ಬಂದ ವೇಳೆ ನನ್ನ ಮೇಲೆ ಹಲ್ಲೆ ಮಾಡಲು ಮುಂದಾಗುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರು ನನಗೆ ರಕ್ಷಣೆ ನೀಡುವ ಮೂಲಕ ನನ್ನ ಮಕ್ಕಳ ಭೇಟಿಗೆ ಮಾಡಲು ಅವಕಾಶ ಮಾಡಿಕೊಡಬೇಕು ಎಂದು ಅವರು ಮನವಿ ಮಾಡಿದರು.