ತರಳಬಾಳು ಬೃಹನ್ಮಠದ ಬೈಲಾ ತಿದ್ದುಪಡಿ ಮಾಡಿ ಶ್ರೀಮಠದ ಪೀಠಾಧಿಪತಿಗೆ ಸರ್ವಾಧಿಕಾರ ನೀಡಿದ್ದನ್ನು ಪ್ರಶ್ನಿಸಿ ಎಸ್.ಎಸ್. ಪಾಟೀಲ ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ಇವರು, ಮಠದ ಕಾರ್ಯದರ್ಶಿಯಾಗಿದ್ದ ಸಿದ್ದಯ್ಯ ಎಂಬುವವರ ಪರವಾಗಿದ್ದಾರೆ ಎಂಬುದು ಸ್ವಾಮೀಜಿ ಪರವಿರುವ ಭಕ್ತರ ಆರೋಪ. ಸಿದ್ದಯ್ಯ ಅವರ ವಿರುದ್ಧ ಕೂಡ ಮಠದಿಂದ ಪ್ರಕರಣ ದಾಖಲಾಗಿದೆ. ‘ಸಮಾಜದ ಹಿತದೃಷ್ಟಿಯಿಂದ ಎರಡೂ ಪ್ರಕರಣಗಳನ್ನು ವಾಪಸ್ ಪಡೆಯಲು ನಮ್ಮ ಬೆಂಬಲವಿದೆ’ ಎಂದು ಪಾಟೀಲರ ಬೆಂಬಲಿಗರು ತಿಳಿಸಿದರು.