ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತೋಂಟದ ಸಿದ್ಧಲಿಂಗಶ್ರೀ ಆಧುನಿಕ ಬಸವಣ್ಣ: ಡಿ.ಎಸ್. ಮಾಳಗಿ

Last Updated 16 ಅಕ್ಟೋಬರ್ 2021, 14:22 IST
ಅಕ್ಷರ ಗಾತ್ರ

ಹಾವೇರಿ: ಮಾದಿಗ ಸಮಾಜದ ಬಗ್ಗೆ ಅಂತಃಕರಣ ಹೊಂದಿದ್ದ ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ‘ಆಧುನಿಕ ಬಸವಣ್ಣ’ ಎಂದರೆ ತಪ್ಪಾಗಲಾರದು ಎಂದುಅಖಿಲ ಕರ್ನಾಟಕ ಆದಿ ಜಾಂಬವ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಡಿ.ಎಸ್. ಮಾಳಗಿ ಅಭಿಪ್ರಾಯಪಟ್ಟರು.

ನಗರದ ಮುರುಘರಾಜೇಂದ್ರಮಠದಲ್ಲಿ ಶನಿವಾರ ಜಿಲ್ಲಾ ಡಿ.ಎಸ್.ಎಸ್ ಹಾಗೂ ಮಾದಿಗರ ಮಾಹಾಸಭಾ ಸಂಯುಕ್ತ ಆಶ್ರಯದಲ್ಲಿ ನಡೆದ ಗದುಗಿನ ತೋಂಟದಾರ್ಯ ಮಠದ ತೋಂಟದ ಸಿದ್ಧಲಿಂಗ ಸ್ವಾಮೀಜಿಯವರ 3ನೇ ವರ್ಷದ ಪುಣ್ಯ ಸ್ಮರಣೋತ್ಸವದಲ್ಲಿ ಅವರು ಮಾತನಾಡಿದರು.

ಪರಮಪುಜ್ಯರು 30 ವರ್ಷಗಳಿಂದ ಅವಿಭಾಜ್ಯ ಧಾರವಾಡ ಜಿಲ್ಲೆಯಾದ್ಯಂತ ಮಾದಿಗ ಸಮಾವೇಶ ಮತ್ತು ಜಾಗೃತಿ ಕಾರ್ಯಕ್ರಮಗಳ ಸಾನ್ನಿಧ್ಯವಹಿಸಿ ನಮ್ಮ ಸಮಾಜವನ್ನು ಜಾಗೃತಿಗೊಳಿಸಿದ್ದಾರೆ. ಶ್ರೀಗಳು ಹೋರಾಟಗಾರರು, ತಳ ಸಮುದಾಯದ ಹಿತಚಿಂತಕರು ಎಂದು ಬಣ್ಣಿಸಿದರು.

ಸಾಮಾಜಿಕ ನ್ಯಾಯದ ಹರಿಕಾರರಾಗಿ, ಬಡವರ, ರೈತರ, ಅಲ್ಪಸಂಖ್ಯಾತರ ಪರವಾಗಿ ಗಟ್ಟಿ ಧ್ವನಿಯಲ್ಲಿ ಮಾತನಾಡುತ್ತಿದ್ದ ಸ್ವಾಮೀಜಿಗಳಾಗಿದ್ದರು.12ನೇ ಶತಮಾನದಲ್ಲಿ ಕೊಂಡಿ ಮಂಚಣ್ಣನಂಥ ಜಾತಿವಾದಿಗಳು ವಿಶ್ವಗುರು ಬಸವಣ್ಣನವರಿಗೆ
ಕಿರುಕುಳ ಕೊಟ್ಟ ಹಾಗೆ ಸಿದ್ಧಲಿಂಗ ಶ್ರೀಗಳಿಗೆಕೆಲವೊಂದು ಜನರು ತೊಂದರೆ ಕೊಟ್ಟಾಗ ಅವಿಭಾಜ್ಯ ಧಾರವಾಡ ಜಿಲ್ಲೆಯ ಮಾದಿಗ ಜನಾಂಗದವರು ಪೂಜ್ಯರ ಪರವಾಗಿ ಕೈಜೋಡಿಸಿದ್ದೇವೆ ಎಂದರು.

ಸಭೆಯಲ್ಲಿ ಡಿ.ಎಸ್.ಎಸ್ ರಾಜ್ಯ ಸಮಿತಿ ಸದಸ್ಯ ಉಡಚಪ್ಪ ಮಾಳಗಿ, ಮಹಾಸಭಾದ ರಾಜ್ಯ ಉಪಾಧ್ಯಕ್ಷ ನಾಗರಾಜ ಮಾಳಗಿ, ಬಿ.ಎಸ್.ಪಿ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಮರೆಣ್ಣನವರ, ರೈತಸಂಘಧ ಅಧ್ಯಕ್ಷ ಮಾದೇವಪ್ಪ ಮಾಳಮ್ಮನವರ, ಡಿ.ಎಸ್. ಎಸ್ ಸಂಚಾಲಕರಾದ ಮಾಲತೇಶಯಲ್ಲಾಪುರ, ಮಂಜಪ್ಪ ಮರೋಳ, ರಾಮುಗಾಳೆಪ್ಪನವರ, ಗುಡ್ಡಪ್ಪ ಚಿಕ್ಕಪ್ಪನವರ, ಶ್ರೀಕಾಂತಗಡ್ಡಿ, ಭೀಮಣ್ಣ ಯಲ್ಲಾಪುರ, ಶೆಟ್ಟಿ ವಿಭೂತಿ, ಕಾಳಪ್ಪ ಬಡಿಗೇರ, ಮಲ್ಲೇಶ ಕಡಕೋಳ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT