ಎಸ್ಎಸ್ಎಂಆರ್ ವಿ ಕಾಲೇಜು ಬಳಿ ಜಮಾವಣೆಗೊಂಡದ್ದ ಬಿಜೆಪಿ ಕಾರ್ಯಕರ್ತರು ಅಶೋಕ್, ರವಿಸುಬ್ರಮಣ್ಯ, ಸತೀಶ್ ರೆಡ್ಡಿ, ಸೋಮಣ್ಣ ಪರ ಘೋಷಣೆ ಕೂಗಿದರು. ಮುಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಎಂದು ಜಯಘೋಷ ಮೊಳಗಿಸಿದರು. ಒಂದು ರುಪಾಯಿ ಟೀ ಪುಡಿ ಕಾಂಗ್ರೆಸ್ ಪುಡಿ ಪುಡಿ, ಹರ ಹರ ಮೋದಿ, ಘರ್ ಘರ್ ಮೋದಿ ಎನ್ನುವ ಘೋಷಣೆ ಕೂಗಿ ಕಾಂಗ್ರೆಸ್ನನ್ನು ಕಾಲೆಳದರು.