<p>ರಾಣೆಬೆನ್ನೂರು: ತಾಲ್ಲೂಕಿನ ಆರೇಮಲ್ಲಾಪುರ ಮತ್ತು ಐರಣಿ ಗ್ರಾಮದ ಸಮೀಪದಲ್ಲಿರುವ ಪ್ರವಾಸಿ ತಾಣವಾಗಿರುವ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಗುಡ್ಡದ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಅರಣ್ಯ ಪ್ರದೇಶ ಸಂಪೂರ್ಣ ಸುಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.</p>.<p>ಸರ್ಕಾರ ಈಚೆಗೆ ಪ್ರವಾಸಿ ತಾಣವನ್ನಾಗಿಸಿತ್ತು. ಅಷ್ಟರಲ್ಲಿಯೇ ಅರಣ್ಯಧಾಮಕ್ಕೆ ಬೆಂಕಿಯ ಜ್ವಾಲೆ ಆವರಿಸಿದೆ.</p>.<p>ಕೃಷ್ಣಮೃಗ ಅಭಯಾರಣ್ಯ ಪ್ರದೇಶದಲ್ಲಿನ ಪ್ರಾಣಿ, ಪಕ್ಷಿಗಳು ಬೆಂಕಿಯಲ್ಲಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಿಲ್ಲ.</p>.<p>ಗುಡ್ಡಕ್ಕೆ ಹೋಗಲು ಕಡಿದಾದ ರಸ್ತೆಯಿದ್ದು ಪೈರ್ ವಾಹನ ಅಲ್ಲಿಗೆ ಹೋಗಲು ಆಗದೇ ಅವರು ಕೂಡ ಕೈ ಚೆಲ್ಲಿದ್ದಾರೆ. ಬೈಕ್, ಸಣ್ಣ ಜೀಪ್ ಅಥವಾ ಕಾರು ಹೋಗಲು ಮಾತ್ರ ಅವಕಾಶವಿದೆ.</p>.<p>ಸಂಪದ್ಭರಿತ ಆಯುರ್ವೇದ ಸಸ್ಯಗಳು ಗುಡ್ಡದಲ್ಲಿ ಇದ್ದವು. ಸಂಜೆ ಬೆಂಕಿಯಿಂದ ಧಗ ಧಗಿಸುತ್ತಿರುವ ಕೆನ್ನಾಲಿಗೆ ಬಿದ್ದಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಭಯಭೀತರಾಗಿ ಓಡಿ ಗ್ರಾಮ ಸೇರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-22-1972271910</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ತಾಲ್ಲೂಕಿನ ಆರೇಮಲ್ಲಾಪುರ ಮತ್ತು ಐರಣಿ ಗ್ರಾಮದ ಸಮೀಪದಲ್ಲಿರುವ ಪ್ರವಾಸಿ ತಾಣವಾಗಿರುವ ಬೆಟ್ಟದ ಮಲ್ಲಿಕಾರ್ಜುನ ದೇವಸ್ಥಾನದ ಗುಡ್ಡದ ಅರಣ್ಯ ಪ್ರದೇಶಕ್ಕೆ ಯಾರೋ ಕಿಡಿಗೇಡಿಗಳು ಬೆಂಕಿ ಹಾಕಿದ್ದರಿಂದ ಅರಣ್ಯ ಪ್ರದೇಶ ಸಂಪೂರ್ಣ ಸುಟ್ಟ ಘಟನೆ ಶನಿವಾರ ರಾತ್ರಿ ನಡೆದಿದೆ.</p>.<p>ಸರ್ಕಾರ ಈಚೆಗೆ ಪ್ರವಾಸಿ ತಾಣವನ್ನಾಗಿಸಿತ್ತು. ಅಷ್ಟರಲ್ಲಿಯೇ ಅರಣ್ಯಧಾಮಕ್ಕೆ ಬೆಂಕಿಯ ಜ್ವಾಲೆ ಆವರಿಸಿದೆ.</p>.<p>ಕೃಷ್ಣಮೃಗ ಅಭಯಾರಣ್ಯ ಪ್ರದೇಶದಲ್ಲಿನ ಪ್ರಾಣಿ, ಪಕ್ಷಿಗಳು ಬೆಂಕಿಯಲ್ಲಿ ಸುಟ್ಟಿರುವ ಶಂಕೆ ವ್ಯಕ್ತವಾಗಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಘಟನಾ ಸ್ಥಳಕ್ಕೆ ಧಾವಿಸಿದರೂ ಪ್ರಯೋಜನವಾಗಿಲ್ಲ.</p>.<p>ಗುಡ್ಡಕ್ಕೆ ಹೋಗಲು ಕಡಿದಾದ ರಸ್ತೆಯಿದ್ದು ಪೈರ್ ವಾಹನ ಅಲ್ಲಿಗೆ ಹೋಗಲು ಆಗದೇ ಅವರು ಕೂಡ ಕೈ ಚೆಲ್ಲಿದ್ದಾರೆ. ಬೈಕ್, ಸಣ್ಣ ಜೀಪ್ ಅಥವಾ ಕಾರು ಹೋಗಲು ಮಾತ್ರ ಅವಕಾಶವಿದೆ.</p>.<p>ಸಂಪದ್ಭರಿತ ಆಯುರ್ವೇದ ಸಸ್ಯಗಳು ಗುಡ್ಡದಲ್ಲಿ ಇದ್ದವು. ಸಂಜೆ ಬೆಂಕಿಯಿಂದ ಧಗ ಧಗಿಸುತ್ತಿರುವ ಕೆನ್ನಾಲಿಗೆ ಬಿದ್ದಿದೆ. ಸುತ್ತಮುತ್ತಲಿನ ಗ್ರಾಮಗಳ ರೈತರು ಭಯಭೀತರಾಗಿ ಓಡಿ ಗ್ರಾಮ ಸೇರಿದ್ದಾರೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260323-22-1972271910</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>