<p>ರಾಣೆಬೆನ್ನೂರು: ಅನುಸೂಚಿತವಲ್ಲದ ಮಾರುಕಟ್ಟೆ ಪ್ರದೇಶವಾದ ನೆಹರು ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ನಿಯಂತ್ರಿತ ಕೃಷಿ ಉತ್ಪನ್ನ ಗಳ ಸಗಟು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಬೇಕು. ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬಾರದು. ಮುಖ್ಯ ಮಾರುಕಟ್ಟೆಯಲ್ಲಿಯೇ ವ್ಯಾಪಾರ ವಹಿ ವಾಟು ಮಾಡಬೇಕು ಎಂದು ಹಲವು ಬಾರಿ ನೋಟಿಸ್ ನೀಡಿದರೂ, ಅಲ್ಲಿನ ವರ್ತಕರು ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>ಏ.6 ರವರೆಗೆ ಮಾರುಕಟ್ಟೆ ಸ್ಥಳಾಂತರ ಮಾಡಬಾರದು ಎಂದು ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ನ್ಯಾಯಾಲಯವು ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು. ಅವರ ಅವಧಿ ಮುಗಿದಿದ್ದರಿಂದ ನೆಹರು ಮಾರುಕಟ್ಟೆಯಲ್ಲಿನ ವರ್ತಕರು ಅನಧಿ ಕೃತವಾಗಿ ರೈತರ ಹುಟ್ಟುವಳಿಗಳನ್ನು ವ್ಯಾಪಾರ ವಹಿವಾಟು ಮಾಡುವದನ್ನು ಗಮನಿಸಿ ಶನಿವಾರ ಕಾರ್ಯಾಚರಣೆ ನಡೆಸಿ ಒಟ್ಟು 9 ಅಂಗಡಿ ಸೀಜ್ ಮಾಡ ಲಾಗಿದೆ. ಕಾರ್ಯಾಚರಣೆ ವೇಳೆ ಕೆಲ ಅಂಗಡಿಗಳು ಮುಚ್ಚಲ್ಪಟ್ಟಿರು ವುದನ್ನು ಗಮನಿಸಲಾಗಿ ಇನ್ನು ಮುಂದೆ ಈ ಸ್ಥಳದಲ್ಲಿ ಕೃಷಿ ಹುಟ್ಟುವಳಿಗಳ ಸಗಟು ವ್ಯಾಪಾರ ಮಾಡುವುದನ್ನು ನಿಷೇಧಿ ಸಲಾಗಿದೆ ಎಂದು ಸ್ಟಿಕರ್ ಅಂಟಿಸಲಾಗಿದೆ.</p>.<p>ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಮತ್ತು ಹಿರೇಕೆರೂರು ತಾಲ್ಲೂಕಿನ ಕಾನೂನು ಜಾರಿ ಕೋಶದ ತಂಡ, ಧಾರವಾಡ ಎಪಿಎಂಸಿ ಡೆಪ್ಯೂಟಿ ಡೈರೆಕ್ಟರ್ ವಿರುಪಾಕ್ಷಪ್ಪ, ಹಾವೇರಿ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬೇರಹಳ್ಳಿ ಮತ್ತು ರಾಣೆಬೆನ್ನೂರು ಮತ್ತು ಹರಿಹರ ತಾಲ್ಲೂಕಿನ ಎಪಿಎಂಸಿ ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗವಹಿಸಿದ್ದರು. ನಗರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.</p>.<p>ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಎಪಿಎಂಸಿ ಅಧಿಕಾರಿಗಳಾದ ವಿರುಪಾಕ್ಷ ಲಮಾಣಿ, ರಾಜವರ್ಧನ ಅರಳಿಕಟ್ಟಿ, ಸಹಾಯಕ ಕಾರ್ಯದರ್ಶಿ ಪರಮೇಶ್ವರ ನಾಯಕ, ಪ್ರಸನ್ನಕುಮಾರ, ಲಿಂಗರಾಜ, ಕೊಟ್ರೇಶ, ಎಂ.ಎನ್.ಬೆಣ್ಣಿ. ಎ.ಕೆ.ಮಲ್ಲಿಕಾರ್ಜುನ, ವಿ.ಬಿ.ಅಣ್ಣಪ್ಪ, ಸಿ.ಕೆ.ವಿಕಾಸ ಇದ್ದರು.</p>.<p>ವರ್ತಕ ಜಿ.ಜಿ.ಹೊಟ್ಟಿಗೌಡ್ರ ಮಾತ ನಾಡಿ, ಎಪಿಎಂಸಿ ಅಧಿಕಾರಿಗಳ ತಂಡದ ವರು ಇಂದು ನೆಹರು ಮಾರುಕಟ್ಟೆಯ 9 ಅಂಗಡಿ ಸೀಜ್ ಮಾಡಿ ದ್ದಾರೆ. ಕೆಲ ಅಂಗಡಿಗಳಿಗೆ ನೋಟಿಸ್ ಅಂಟಿಸಿದ್ದಾರೆ. ನಮಗೆ ಇಂದಿನಿಂದ ನೆಹರು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡು ವುದಿಲ್ಲ ಎಂದು ಬರೆದುಕೊಡಿ ಎಂದು ಕಾರ್ಯದರ್ಶಿ ತಾಕೀತು ಮಾಡಿದರು.</p>.<p>ಅದಕ್ಕೆ ನಮ್ಮ ವ್ಯಾಪಾರಸ್ಥರು ಒಪ್ಪಿಕೊಂಡಿಲ್ಲ. ನಮಗೆ ಎಪಿಎಂಸಿ ಮುಖ್ಯ ಮಾರುಕಟ್ಟೆಗೆ ಸ್ಥಳಾಂತರ ಬೇಡ, ಅಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತದೆ. ನಮಗೆ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ತಾಲ್ಲೂಕಿನ ಹುಲಿಹಳ್ಳಿ-ಕೂನಬೇವು ಬಳಿ ಇರುವ ಮೆಗಾ ಮಾರುಕಟ್ಟೆಗೆ ಸ್ಥಳಾಂತರ ಮಾಡಿ ಎಂದು ನೆಹರು ಮಾರುಕಟ್ಟೆ ವರ್ತಕರು ಮನವಿ ಮಾಡಿದರೂ ಎಪಿಎಂಸಿ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದರು.</p>.<p>ಮೆಗಾ ಮಾರುಕಟ್ಟೆ ಸ್ಥಳಾಂತರದ ವ್ಯವಸ್ಥೆ ಅದು ಬೇರೆ, ಸದ್ಯಕ್ಕೆ ಮೊದಲು ಇಲ್ಲಿ ಎಪಿಎಂಸಿ ಮುಖ್ಯಮಾರುಕಟ್ಟೆಗೆ ಬನ್ನಿ ಎಂದಿದ್ದಕ್ಕೆ ಎಪಿಎಂಸಿ ಸಭಾಂಗಣದಲ್ಲಿ ಮಧ್ಯಾಹ್ನ ಎಲ್ಲ ಅಧಿಕಾರಿಗಳು ಮತ್ತು 113 ನೆಹರು ಮಾರುಕಟ್ಟೆ ವರ್ತಕರ ಮಧ್ಯೆ ಸಭೆ ನಡೆಸಿದರು.</p>.<p>ಅಧಿಕಾರಿಗಳ ಆದೇಶದ ಮೇರೆಗೆ ಎಪಿಎಂಸಿ ಮುಖ್ಯಮಾರುಕಟ್ಟೆಯಲ್ಲಿ ಬರಲು ನಾವೆಲ್ಲರೂ ತೀರ್ಮಾನಿಸಿದ್ದೇವೆ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-22-1576714339</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ಅನುಸೂಚಿತವಲ್ಲದ ಮಾರುಕಟ್ಟೆ ಪ್ರದೇಶವಾದ ನೆಹರು ಮಾರುಕಟ್ಟೆ ಪ್ರದೇಶದಲ್ಲಿ ಅನಧಿಕೃತವಾಗಿ ನಡೆಸುತ್ತಿರುವ ನಿಯಂತ್ರಿತ ಕೃಷಿ ಉತ್ಪನ್ನ ಗಳ ಸಗಟು ವ್ಯಾಪಾರ ವಹಿವಾಟು ಸ್ಥಗಿತಗೊಳಿಸಬೇಕು. ರೈತರಿಂದ ನೇರವಾಗಿ ಉತ್ಪನ್ನ ಖರೀದಿಸಬಾರದು. ಮುಖ್ಯ ಮಾರುಕಟ್ಟೆಯಲ್ಲಿಯೇ ವ್ಯಾಪಾರ ವಹಿ ವಾಟು ಮಾಡಬೇಕು ಎಂದು ಹಲವು ಬಾರಿ ನೋಟಿಸ್ ನೀಡಿದರೂ, ಅಲ್ಲಿನ ವರ್ತಕರು ನ್ಯಾಯಾಲಯದ ಮೊರೆ ಹೋಗಿದ್ದರು.</p>.<p>ಏ.6 ರವರೆಗೆ ಮಾರುಕಟ್ಟೆ ಸ್ಥಳಾಂತರ ಮಾಡಬಾರದು ಎಂದು ಜಿಲ್ಲಾಧಿಕಾರಿ ಹೊರಡಿಸಿದ ಆದೇಶಕ್ಕೆ ನ್ಯಾಯಾಲಯವು ತಾತ್ಕಾಲಿಕವಾಗಿ ತಡೆಯಾಜ್ಞೆ ನೀಡಿತ್ತು. ಅವರ ಅವಧಿ ಮುಗಿದಿದ್ದರಿಂದ ನೆಹರು ಮಾರುಕಟ್ಟೆಯಲ್ಲಿನ ವರ್ತಕರು ಅನಧಿ ಕೃತವಾಗಿ ರೈತರ ಹುಟ್ಟುವಳಿಗಳನ್ನು ವ್ಯಾಪಾರ ವಹಿವಾಟು ಮಾಡುವದನ್ನು ಗಮನಿಸಿ ಶನಿವಾರ ಕಾರ್ಯಾಚರಣೆ ನಡೆಸಿ ಒಟ್ಟು 9 ಅಂಗಡಿ ಸೀಜ್ ಮಾಡ ಲಾಗಿದೆ. ಕಾರ್ಯಾಚರಣೆ ವೇಳೆ ಕೆಲ ಅಂಗಡಿಗಳು ಮುಚ್ಚಲ್ಪಟ್ಟಿರು ವುದನ್ನು ಗಮನಿಸಲಾಗಿ ಇನ್ನು ಮುಂದೆ ಈ ಸ್ಥಳದಲ್ಲಿ ಕೃಷಿ ಹುಟ್ಟುವಳಿಗಳ ಸಗಟು ವ್ಯಾಪಾರ ಮಾಡುವುದನ್ನು ನಿಷೇಧಿ ಸಲಾಗಿದೆ ಎಂದು ಸ್ಟಿಕರ್ ಅಂಟಿಸಲಾಗಿದೆ.</p>.<p>ಬೆಂಗಳೂರು, ಹುಬ್ಬಳ್ಳಿ, ದಾವಣಗೆರೆ ಮತ್ತು ಹಿರೇಕೆರೂರು ತಾಲ್ಲೂಕಿನ ಕಾನೂನು ಜಾರಿ ಕೋಶದ ತಂಡ, ಧಾರವಾಡ ಎಪಿಎಂಸಿ ಡೆಪ್ಯೂಟಿ ಡೈರೆಕ್ಟರ್ ವಿರುಪಾಕ್ಷಪ್ಪ, ಹಾವೇರಿ ಸಹಾಯಕ ನಿರ್ದೇಶಕ ಜಿ.ಬಿ.ಕಬ್ಬೇರಹಳ್ಳಿ ಮತ್ತು ರಾಣೆಬೆನ್ನೂರು ಮತ್ತು ಹರಿಹರ ತಾಲ್ಲೂಕಿನ ಎಪಿಎಂಸಿ ಅಧಿಕಾರಿಗಳ ತಂಡ ದಾಳಿಯಲ್ಲಿ ಭಾಗವಹಿಸಿದ್ದರು. ನಗರ ಠಾಣೆ ಪೊಲೀಸರು ಸೂಕ್ತ ಬಂದೋಬಸ್ತ್ ಒದಗಿಸಿದ್ದರು.</p>.<p>ವಿವಿಧ ಜಿಲ್ಲೆ ಮತ್ತು ತಾಲ್ಲೂಕುಗಳ ಎಪಿಎಂಸಿ ಅಧಿಕಾರಿಗಳಾದ ವಿರುಪಾಕ್ಷ ಲಮಾಣಿ, ರಾಜವರ್ಧನ ಅರಳಿಕಟ್ಟಿ, ಸಹಾಯಕ ಕಾರ್ಯದರ್ಶಿ ಪರಮೇಶ್ವರ ನಾಯಕ, ಪ್ರಸನ್ನಕುಮಾರ, ಲಿಂಗರಾಜ, ಕೊಟ್ರೇಶ, ಎಂ.ಎನ್.ಬೆಣ್ಣಿ. ಎ.ಕೆ.ಮಲ್ಲಿಕಾರ್ಜುನ, ವಿ.ಬಿ.ಅಣ್ಣಪ್ಪ, ಸಿ.ಕೆ.ವಿಕಾಸ ಇದ್ದರು.</p>.<p>ವರ್ತಕ ಜಿ.ಜಿ.ಹೊಟ್ಟಿಗೌಡ್ರ ಮಾತ ನಾಡಿ, ಎಪಿಎಂಸಿ ಅಧಿಕಾರಿಗಳ ತಂಡದ ವರು ಇಂದು ನೆಹರು ಮಾರುಕಟ್ಟೆಯ 9 ಅಂಗಡಿ ಸೀಜ್ ಮಾಡಿ ದ್ದಾರೆ. ಕೆಲ ಅಂಗಡಿಗಳಿಗೆ ನೋಟಿಸ್ ಅಂಟಿಸಿದ್ದಾರೆ. ನಮಗೆ ಇಂದಿನಿಂದ ನೆಹರು ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಾಡು ವುದಿಲ್ಲ ಎಂದು ಬರೆದುಕೊಡಿ ಎಂದು ಕಾರ್ಯದರ್ಶಿ ತಾಕೀತು ಮಾಡಿದರು.</p>.<p>ಅದಕ್ಕೆ ನಮ್ಮ ವ್ಯಾಪಾರಸ್ಥರು ಒಪ್ಪಿಕೊಂಡಿಲ್ಲ. ನಮಗೆ ಎಪಿಎಂಸಿ ಮುಖ್ಯ ಮಾರುಕಟ್ಟೆಗೆ ಸ್ಥಳಾಂತರ ಬೇಡ, ಅಲ್ಲಿ ಟ್ರಾಫಿಕ್ ಸಮಸ್ಯೆಯಾಗುತ್ತದೆ. ನಮಗೆ ಮೂಲ ಸೌಲಭ್ಯಗಳ ಕೊರತೆ ಎದ್ದು ಕಾಣುತ್ತಿದೆ. ಹಾಗಾಗಿ ತಾಲ್ಲೂಕಿನ ಹುಲಿಹಳ್ಳಿ-ಕೂನಬೇವು ಬಳಿ ಇರುವ ಮೆಗಾ ಮಾರುಕಟ್ಟೆಗೆ ಸ್ಥಳಾಂತರ ಮಾಡಿ ಎಂದು ನೆಹರು ಮಾರುಕಟ್ಟೆ ವರ್ತಕರು ಮನವಿ ಮಾಡಿದರೂ ಎಪಿಎಂಸಿ ಅಧಿಕಾರಿಗಳು ಒಪ್ಪುತ್ತಿಲ್ಲ ಎಂದರು.</p>.<p>ಮೆಗಾ ಮಾರುಕಟ್ಟೆ ಸ್ಥಳಾಂತರದ ವ್ಯವಸ್ಥೆ ಅದು ಬೇರೆ, ಸದ್ಯಕ್ಕೆ ಮೊದಲು ಇಲ್ಲಿ ಎಪಿಎಂಸಿ ಮುಖ್ಯಮಾರುಕಟ್ಟೆಗೆ ಬನ್ನಿ ಎಂದಿದ್ದಕ್ಕೆ ಎಪಿಎಂಸಿ ಸಭಾಂಗಣದಲ್ಲಿ ಮಧ್ಯಾಹ್ನ ಎಲ್ಲ ಅಧಿಕಾರಿಗಳು ಮತ್ತು 113 ನೆಹರು ಮಾರುಕಟ್ಟೆ ವರ್ತಕರ ಮಧ್ಯೆ ಸಭೆ ನಡೆಸಿದರು.</p>.<p>ಅಧಿಕಾರಿಗಳ ಆದೇಶದ ಮೇರೆಗೆ ಎಪಿಎಂಸಿ ಮುಖ್ಯಮಾರುಕಟ್ಟೆಯಲ್ಲಿ ಬರಲು ನಾವೆಲ್ಲರೂ ತೀರ್ಮಾನಿಸಿದ್ದೇವೆ ಎಂದರು.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260524-22-1576714339</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>