ಬೇಸಿಯಾಗಿದ್ದರಿಂದ ಪ್ರಾಣಿ ಪಕ್ಷಿಗಳು ಸಾಕಷ್ಟು ತೊಂದರೆ ಅನುಭವಿಸುತ್ತವೆ. ಮನೆಯ ತಾರಸಿ ಕಚೇರಿ ಕಟ್ಟಡ ಸೇರಿದಂತೆ ತೂಗುತಟ್ಟೆಯಲ್ಲಿ ಕುಡಿಯುವ ನೀರು ಹಣ್ಣು ಆಹಾರ ಧಾನ್ಯ ಇರಿಸಬೇಕು.
- ಡಾ.ಎಸ್.ಎಲ್.ಪವಾರ, ಸಮಾಜ ಪರಿವರ್ತನ ಮುಖಂಡ
ಬೇಸಿಗೆ ದಿನಗಳಲ್ಲಿ ನಿರ್ಜಲೀಕರಣ ಆಗದಂತೆ ನೋಡಿಕೊಳ್ಳಿ. ನಿಮ್ಮ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ನೀರಿನ ಅಂಶ ಇರುವ ಪಾನೀಯಗಳನ್ನು ಸೇವಿಸಬೇಕು
ಡಾ.ರಾಜು ಶಿರೂರ, ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ
ದಿನದಿಂದ ದಿನಕ್ಕೆ ಬಿಸಲು ಹೆಚ್ಚಾಗುತ್ತಿದ್ದು ಅಧಿಕ ಉಷ್ಣಾಂಶ ದಾಖಲಾಗುತ್ತಿದೆ. ಮಧ್ಯಾಹ್ನ 12ರಿಂದ 3 ಗಂಟೆವರೆಗೆ ಬಿಸಿನ ತಾಪ ಹೆಚ್ಚಿರುತ್ತದೆ. ಸಾರ್ವಜನಿಕರು ಮುಂಜಾಗೃತಾ ಕ್ರಮ ಕೈಗೊಳ್ಳಬೇಕು.
ಎಫ್.ವೈ.ಇಂಗಳಗಿ, ನಗರಸಭೆ ಪೌರಾಯುಕ್ತ
ರಾಣೆಬೆನ್ನೂರಿನ ಹಳೆ ಪಿ.ಬಿ.ರಸ್ತೆಯ ಎಸ್ಬಿಐ ಬ್ಯಾಂಕಿನ ಎದುರುಗಡೆ ರಸ್ತೆಯಲ್ಲಿ ಮಾರಾಟಕ್ಕೆ ಇಟ್ಟಿದ್ದ ಬಣ್ಣಬಣ್ಣದ ಮಣ್ಣಿನ ಹೂಜಿ