<p>ರಾಣೆಬೆನ್ನೂರು: ನಗರದ ಯರೇಕುಪ್ಪಿ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಯಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.</p>.<p>ಸಿದ್ದೇಶ್ವರನಗರದ ನಿವಾಸಿ ಶರತ್ ಷಣ್ಮುಖಪ್ಪ ಶಿಗ್ಲಿ (26) ಮೃತಪಟ್ಟವ. ಬೈಕ್ ಸಮೇತ ನೀರಿನ ಗುಂಡಿಯಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ.</p>.<p>‘ರಸ್ತೆಯ ನಿರ್ವಹಣಾಧಿಕಾರಿ ಎನ್.ಎಚ್. 48ರ ಮಧ್ಯದಲ್ಲಿರುವ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಯನ್ನು ಸರಿಯಾಗಿ ಮುಚ್ಚದಿರುವುದರಿಂದ ಹಾಗೂ ಆ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಯರೇಕುಪ್ಪಿ ಸೇತುವೆ ಕಡೆಯಿಂದ ಹಾವೇರಿ ಸೇತುವೆ ಕಡೆ ಬೈಕ್ ಚಲಾಯಿಸಿಕೊಂಡು ಬಂದ ಮಗ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಈ ರಸ್ತೆಯ ನಿರ್ವಹಣಾಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ತಂದೆ ಷಣ್ಮುಖಪ್ಪ ದೂರು ಸಲ್ಲಿಸಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲೊಕೇಶ ಜೆ., ಗ್ರಾಮೀಣ ಸಿಪಿಐ ಎನ್.ಸಿ. ಕಾಡದೇವರ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಸಾರ್ವಜನಿಕರು ಮಾಹಿತಿ ನೀಡಿದ ಮೇಲೆ ಪೊಲೀಸರು ಕ್ರೇನ್ ಮತ್ತು ಜೆಸಿಬಿ ಮೂಲಕ ಸ್ಲ್ಯಾಬ್ ತೆರವುಗೊಳಿಸಿ ಶವವನ್ನು ಹೊರ ತೆಗೆದರು.</p>.<p>‘ಯರೇಕುಪ್ಪಿ ಸೇತುವೆ ಸಮೀಪ ಎನ್.ಎಚ್. 48ರ ಬಳಿ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಗೆ ಸರಿಯಾಗಿ ಸಿಮೆಂಟ್ ಸ್ಲ್ಯಾಬ್ ಹಾಕಿ ಮುಚ್ಚಿರಲಿಲ್ಲ. ಇಲ್ಲಿ ಸಾಕಷ್ಟು ಬೆಳಕು ಇಲ್ಲ. ಈ ಬಗ್ಗೆ ಯಾವುದೇ ನಾಮಫಲಕಗಳೂ ಇಲ್ಲಿ ಇರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-22-774624175</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ರಾಣೆಬೆನ್ನೂರು: ನಗರದ ಯರೇಕುಪ್ಪಿ ಸೇತುವೆಯ ಬಳಿ ರಾಷ್ಟ್ರೀಯ ಹೆದ್ದಾರಿ 48ರ ಬಳಿ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಯಲ್ಲಿ ಯುವಕನೊಬ್ಬ ಬಿದ್ದು ಮೃತಪಟ್ಟಿರುವ ಘಟನೆ ಭಾನುವಾರ ನಡೆದಿದೆ.</p>.<p>ಸಿದ್ದೇಶ್ವರನಗರದ ನಿವಾಸಿ ಶರತ್ ಷಣ್ಮುಖಪ್ಪ ಶಿಗ್ಲಿ (26) ಮೃತಪಟ್ಟವ. ಬೈಕ್ ಸಮೇತ ನೀರಿನ ಗುಂಡಿಯಲ್ಲಿ ಬಿದ್ದು ಮುಳುಗಿ ಮೃತಪಟ್ಟಿದ್ದಾನೆ.</p>.<p>‘ರಸ್ತೆಯ ನಿರ್ವಹಣಾಧಿಕಾರಿ ಎನ್.ಎಚ್. 48ರ ಮಧ್ಯದಲ್ಲಿರುವ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಯನ್ನು ಸರಿಯಾಗಿ ಮುಚ್ಚದಿರುವುದರಿಂದ ಹಾಗೂ ಆ ಜಾಗದಲ್ಲಿ ಯಾವುದೇ ಸುರಕ್ಷತಾ ಕ್ರಮ ಕೈಗೊಳ್ಳದ ಕಾರಣ ಯರೇಕುಪ್ಪಿ ಸೇತುವೆ ಕಡೆಯಿಂದ ಹಾವೇರಿ ಸೇತುವೆ ಕಡೆ ಬೈಕ್ ಚಲಾಯಿಸಿಕೊಂಡು ಬಂದ ಮಗ ಗುಂಡಿಯಲ್ಲಿ ಬಿದ್ದು ಮೃತಪಟ್ಟಿದ್ದಾನೆ. ಈ ರಸ್ತೆಯ ನಿರ್ವಹಣಾಧಿಕಾರಿ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮೃತರ ತಂದೆ ಷಣ್ಮುಖಪ್ಪ ದೂರು ಸಲ್ಲಿಸಿದ್ದಾರೆ.</p>.<p>ಘಟನಾ ಸ್ಥಳಕ್ಕೆ ಡಿವೈಎಸ್ಪಿ ಲೊಕೇಶ ಜೆ., ಗ್ರಾಮೀಣ ಸಿಪಿಐ ಎನ್.ಸಿ. ಕಾಡದೇವರ ಹಾಗೂ ಸಿಬ್ಬಂದಿ ಭೇಟಿ ನೀಡಿದರು. ಸಾರ್ವಜನಿಕರು ಮಾಹಿತಿ ನೀಡಿದ ಮೇಲೆ ಪೊಲೀಸರು ಕ್ರೇನ್ ಮತ್ತು ಜೆಸಿಬಿ ಮೂಲಕ ಸ್ಲ್ಯಾಬ್ ತೆರವುಗೊಳಿಸಿ ಶವವನ್ನು ಹೊರ ತೆಗೆದರು.</p>.<p>‘ಯರೇಕುಪ್ಪಿ ಸೇತುವೆ ಸಮೀಪ ಎನ್.ಎಚ್. 48ರ ಬಳಿ ನೀರಿನ ಪೈಪ್ಲೈನ್ ವಾಲ್ವ್ ಚೇಂಬರ್ ಗುಂಡಿಗೆ ಸರಿಯಾಗಿ ಸಿಮೆಂಟ್ ಸ್ಲ್ಯಾಬ್ ಹಾಕಿ ಮುಚ್ಚಿರಲಿಲ್ಲ. ಇಲ್ಲಿ ಸಾಕಷ್ಟು ಬೆಳಕು ಇಲ್ಲ. ಈ ಬಗ್ಗೆ ಯಾವುದೇ ನಾಮಫಲಕಗಳೂ ಇಲ್ಲಿ ಇರಲಿಲ್ಲ. ಹೀಗಾಗಿ ಈ ದುರ್ಘಟನೆ ನಡೆದಿದೆ’ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><em>ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ</em><br />260414-22-774624175</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>