ಜಮೀನಿಗೆ ಬೇಕಾದ ಗೊಬ್ಬರ ತಯಾರಿಸಲು ಜೀವಾಮೃತ ತೊಟ್ಟಿ, ಜೀವಸಾರ ಘಟಕ ಇದೆ. ಸರ್ಕಾರದ ಸಹಾಯಧನ ಪಡೆದು ಎರಡು ಕೃಷಿ ಹೊಂಡ ನಿರ್ಮಿಸಿದ್ದು, ತುಂಗಾ ಮೇಲ್ದಂಡೆ ಕಾಲುವೆಯಲ್ಲಿ ನೀರು ಹರಿಯುವಾಗ ಹೊಂಡದಲ್ಲಿ ನೀರು ಸಂಗ್ರಹ ಮಾಡಿಕೊಂಡು ಅಡಿಕೆ ತೋಟಕ್ಕೆ ಬಿಡಲಾಗುತ್ತದೆ. ಕಾಲುವೆಯಲ್ಲಿ ನೀರು ಇಲ್ಲದಿದ್ದಾಗ ಕೊಳವೆ ಬಾವಿಗಳ ಮೂಲಕ ನೀರು ಸಂಗ್ರಹಿಸಲಾಗುತ್ತದೆ. ಒಟ್ಟು 10 ಕೊಳವೆ ಬಾವಿಗಳಿವೆ. ಎರಡು ಕಡೆ ಸೌರ ವಿದ್ಯುತ್ ಸಕ್ತಿ ಘಟಕ ಅಳವಡಿಸಿಕೊಂಡಿದ್ದು, ಹಗಲಿನಲ್ಲಿ ಇದರ ಮೂಲಕ ನೀರು ಹಾಯಿಸಲಾಗುತ್ತದೆ ಎಂದು ವಿವರಿಸಿದರು.