<p><strong>ರಟ್ಟೀಹಳ್ಳಿ:</strong> ಪಟ್ಟಣದಲ್ಲಿ ಜನತೆ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಣ್ಣ ಎರಚಿ ಸಂಭ್ರಮಿಸಿ ಬಣ್ಣದಲ್ಲಿ ಮಿಂದೆದ್ದರು.</p>.<p>ಪಟ್ಟಣದ ಕೋಟೆಯಲ್ಲಿ ಗುರುವಾರ ಪ್ರತಿಷ್ಠಾಪಿಸಲಾದ ಕಾಮೇಶ್ವರನಿಗೆ ಬೆಳಿಗ್ಗೆ ಯುವಕರು ಬಂಡಿಯಲ್ಲಿ ಮೆರವಣಿಗೆ ನಡೆಸಿದರು. ಹಳೆಯ ಬಸ್ ನಿಲ್ದಾಣ. ಕುರಬಗೇರಿ ಕ್ರಾಸ್, ಬಸವೇಶ್ವರ ದೇವಸ್ಥಾನ ವೃತ್ತ, ಶಿವಾಜಿ ಸರ್ಕಲ್, ಶಾಲಾ ಮೈದಾನ, ಭಗತಸಿಂಗ ಸರ್ಕಲ್, ಹೊಸ ಬಸ್ ನಿಲ್ದಾಣ, ಸೇರಿದಂತೆ ಹಲವೆಡೆ ಕಾಮದಹನ ಅಂಗವಾಗಿ ರಾಶಿ,ರಾಶಿ ಕಟ್ಟಿಗೆ, ಕುಳ್ಳು ಸಂಗ್ರಹಿಸಲಾಗಿತ್ತು.</p>.<p>ಗುರುವಾರ ಬೆಳಿಗ್ಗೆ ಯುವಕರು ಹಲಗೆ ಸದ್ದಿಗೆ ಹೆಜ್ಜೆ ಹಾಕುತ್ತಾ ಬೆಂಕಿ ತರುವ ಕಾರ್ಯಮಾಡಿದರು. ಮಧ್ಯಾಹ್ನ 2 ಗಂಟೆಗೆ ಎಲ್ಲಡೆ ಕಾಮದೇವನಿಗೆ ಪೂಜೆ ಸಲ್ಲಿಸಿ ಉತ್ತಮ ಮೆಳೆ,ಬೆಳೆಗಾಗಿ ಪ್ರಾರ್ಥಿಸಿ ಅಗ್ನಿಸ್ಪರ್ಶ ಮಾಡಲಾಯಿತು.</p>.<p>ಪಟ್ಟಣದಲ್ಲಿ ಯುವಕರು, ಯುವತಿಯರು ಸೇರಿದಂತೆ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಕುರಬಗೇರಿ ಕ್ರಾಸ್ ಬಳಿ ಡಿಜೆ ಸದ್ದಿಗೆ ಯುವಕರು ನೃತ್ಯ ಪ್ರದರ್ಶನ ಮಾಡಿದರು. ಎಲ್ಲಡೆ ಬಿಗಿ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪಟ್ಟಣದಲ್ಲಿ ಶಾಂತರೀತಿಯಾಗಿ ಹೋಳಿ ಶ್ರದ್ಧಾ ಭಕ್ತಿಯಿಂದ ಜನತೆ ಹೋಳಿಹಬ್ಬ ಆಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ರಟ್ಟೀಹಳ್ಳಿ:</strong> ಪಟ್ಟಣದಲ್ಲಿ ಜನತೆ ಪರಸ್ಪರ ಸ್ನೇಹ, ಪ್ರೀತಿ, ವಿಶ್ವಾಸದಿಂದ ಬಣ್ಣ ಎರಚಿ ಸಂಭ್ರಮಿಸಿ ಬಣ್ಣದಲ್ಲಿ ಮಿಂದೆದ್ದರು.</p>.<p>ಪಟ್ಟಣದ ಕೋಟೆಯಲ್ಲಿ ಗುರುವಾರ ಪ್ರತಿಷ್ಠಾಪಿಸಲಾದ ಕಾಮೇಶ್ವರನಿಗೆ ಬೆಳಿಗ್ಗೆ ಯುವಕರು ಬಂಡಿಯಲ್ಲಿ ಮೆರವಣಿಗೆ ನಡೆಸಿದರು. ಹಳೆಯ ಬಸ್ ನಿಲ್ದಾಣ. ಕುರಬಗೇರಿ ಕ್ರಾಸ್, ಬಸವೇಶ್ವರ ದೇವಸ್ಥಾನ ವೃತ್ತ, ಶಿವಾಜಿ ಸರ್ಕಲ್, ಶಾಲಾ ಮೈದಾನ, ಭಗತಸಿಂಗ ಸರ್ಕಲ್, ಹೊಸ ಬಸ್ ನಿಲ್ದಾಣ, ಸೇರಿದಂತೆ ಹಲವೆಡೆ ಕಾಮದಹನ ಅಂಗವಾಗಿ ರಾಶಿ,ರಾಶಿ ಕಟ್ಟಿಗೆ, ಕುಳ್ಳು ಸಂಗ್ರಹಿಸಲಾಗಿತ್ತು.</p>.<p>ಗುರುವಾರ ಬೆಳಿಗ್ಗೆ ಯುವಕರು ಹಲಗೆ ಸದ್ದಿಗೆ ಹೆಜ್ಜೆ ಹಾಕುತ್ತಾ ಬೆಂಕಿ ತರುವ ಕಾರ್ಯಮಾಡಿದರು. ಮಧ್ಯಾಹ್ನ 2 ಗಂಟೆಗೆ ಎಲ್ಲಡೆ ಕಾಮದೇವನಿಗೆ ಪೂಜೆ ಸಲ್ಲಿಸಿ ಉತ್ತಮ ಮೆಳೆ,ಬೆಳೆಗಾಗಿ ಪ್ರಾರ್ಥಿಸಿ ಅಗ್ನಿಸ್ಪರ್ಶ ಮಾಡಲಾಯಿತು.</p>.<p>ಪಟ್ಟಣದಲ್ಲಿ ಯುವಕರು, ಯುವತಿಯರು ಸೇರಿದಂತೆ ಮಕ್ಕಳು ಪರಸ್ಪರ ಬಣ್ಣ ಹಚ್ಚಿ ಸಂಭ್ರಮಿಸಿದರು. ಕುರಬಗೇರಿ ಕ್ರಾಸ್ ಬಳಿ ಡಿಜೆ ಸದ್ದಿಗೆ ಯುವಕರು ನೃತ್ಯ ಪ್ರದರ್ಶನ ಮಾಡಿದರು. ಎಲ್ಲಡೆ ಬಿಗಿ ಪೋಲೀಸ್ ಬಂದೋಬಸ್ತ್ ವ್ಯವಸ್ಥೆ ಕೈಗೊಳ್ಳಲಾಗಿತ್ತು. ಪಟ್ಟಣದಲ್ಲಿ ಶಾಂತರೀತಿಯಾಗಿ ಹೋಳಿ ಶ್ರದ್ಧಾ ಭಕ್ತಿಯಿಂದ ಜನತೆ ಹೋಳಿಹಬ್ಬ ಆಚರಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>