ಪ್ರಜಾಪ್ರಭುತ್ವದ ರೀತಿಯಲ್ಲಿ ಬೇರೆಯವರ ಮಾತುಗಳನ್ನು ಕೇಳುವುದು ಮತ್ತು ಸಂಯಮದಿಂದ ನಮ್ಮ ಮಾತುಗಳನ್ನು ಹೇಳುವುದನ್ನು ಬಂಡಾಯ ಕಲಿಸಿ ಕೊಟ್ಟಿದೆ. ಜಾತಿಯ ಮಿತಿಗಳ ದಾಟಿ ಸಾಮಾಜಿಕ ಸಾಮರಸ್ಯಗಳನ್ನು ಕಾಪಾಡಿಕೊಳ್ಳುವುದು ಇಂದಿನ ಅಗತ್ಯವಾಗಿದ್ದು, ಹೊಡಿಬಡಿ ಅಂದರೆ ಬಂಡಾಯವಲ್ಲ, ಎಲ್ಲ ತಾರತಮ್ಯಗಳನ್ನು ಎದುರಿಸಿ ಮಾನಸಿಕ ಸಿದ್ಧತಾ ಕ್ರಮಗಳನ್ನು ರೂಢಿಸುವುದೇ ಬಂಡಾಯ. ಕ್ರಾಂತಿ ಗೀತೆಗಳೇ ಬಂಡಾಯ ಸಾಹಿತ್ಯದ ಪ್ರಮುಖ ಅಸ್ತ್ರಗಳು ಎಂದರು.