ಮಾರ್ಚ್ ಆರಂಭದಲ್ಲಿ ದೆಹಲಿಗೆ ತೆರಳಿದ್ದ 13 ಜನರನ್ನು ಬುಧವಾರ ಪೊಲೀಸ್ ಇಲಾಖೆ ಪತ್ತೆ ಮಾಡಿತ್ತು. ಆರೋಗ್ಯ ಇಲಾಖೆ ತಪಾಸಣೆ ಮಾಡಿತ್ತು. ಗುರುವಾರ ಮೊಬೈಲ್ ಕರೆ ಪರಿಶೀಲಿಸಿ ದೆಹಲಿಗೆ ತೆರಳಿದ್ದ ಇಬ್ಬರ ಪಟ್ಟಿಯನ್ನು ಬೆಂಗಳೂರಿನಿಂದ ಜಿಲ್ಲಾಡಳಿತಕ್ಕೆ ರವಾನಿಸಲಾಗಿದೆ. ಜಿಲ್ಲಾಡಳಿತ ಅವರನ್ನು ವಿಚಾರಣೆ ಮಾಡಿದಾಗ ಇನ್ನೂ 11 ಜನ ತಮ್ಮೊಂದಿಗೆ ಇರುವುದಾಗಿ ತಿಳಿಸಿದ್ದಾರೆ. ಹೀಗೆ ಒಟ್ಟು ಶಿಗ್ಗಾವಿಯ 12 ಜನ, ಹಾವೇರಿಯ ಒಬ್ಬ ದೆಹಲಿಗೆ ತೆರಳಿದ್ದು ದೃಢಪಟ್ಟಿದೆ. ಈ 13 ಹಾಗೂ ರಾಣಿಬೆನ್ನೂರಿನ ವ್ಯಕ್ತಿ ಸೇರಿದಂತೆ ಒಟ್ಟು 14 ಜನರ ರಕ್ತ, ಗಂಟಲು ದ್ರವದ ಮಾದರಿಗಳನ್ನು ಲ್ಯಾಬ್ಗೆ ಕಳುಹಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ತಿಳಿಸಿದ್ದಾರೆ.