ಪ್ರಕರಣದ ವಿಚಾರಣೆ ನಡೆದು ಮೃತರ ವಾರಸುದಾರರಿಗೆ ₹ 33 ಲಕ್ಷ ಪರಿಹಾರ ನೀಡಲು ಹಾನಗಲ್ನ ಹೆಚ್ಚುವರಿ ಸಿವಿಲ್ ನ್ಯಾಯಾಲಯವು 20 ಜ.20, 2022 ರಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಸಾರಿಗೆ ಸಂಸ್ಥೆ ಧಾರವಾಡ ಹೈಕೋರ್ಟ್ ಮೆಟ್ಟಿಲೇರಿತ್ತು. ಹಾನಗಲ್ ನ್ಯಾಯಾಲಯದ ಆದೇಶದಂತೆ ಸದ್ಯ ಪರಿಹಾರದ ಅರ್ಧ ಮೊತ್ತವನ್ನು ವಾರಸುದಾರರಿಗೆ ಭರಿಸುವಂತೆ ಮೇ 3 ರಂದು ಹೈಕೋರ್ಟ್ನಿಂದ ಆದೇಶವಾಗಿದೆ ಎಂದು ಪರಿಹಾರ ಕೋರಿರುವ ಅರ್ಜಿದಾರರ ಪರ ವಕೀಲರಾದ ಟಿ.ಬಿ.ಸವಣೂರ, ರಂಗನಾಥ ಲಂಟಗಿ ತಿಳಿಸಿದ್ದಾರೆ.