‘ಈ ಜಗತ್ತಿನಲ್ಲಿ ಹೆಣ್ಣು, ಮಣ್ಣು, ಹೊನ್ನಿಗಾಗಿ ಸತ್ತು ಹುಟ್ಟಿ ಕೆಟ್ಟವರು ಅನೇಕರುಂಟು. ಆದರೆ ಶಿವಭಕ್ತರಾಗಿ ಏಕಲಿಂಗ ನಿಷ್ಠೆಯುಳ್ಳವರಾಗಿದ್ದರೆ ಆತನಿಗೆ ಈ ಜನ್ಮವೇ ಕಡೆಯದು. ಅದೇ ಮುಕ್ತಿ ಎಂದು ತಿಳಿಸಿದ್ದಾರೆ. ಮಾಚಯ್ಯ ಶರಣರಲ್ಲಿಯೇ ಧೀರ. ದಿಟ್ಟ ವ್ಯಕ್ತಿಯಾಗಿ ವಚನ ಸಾಹಿತ್ಯವನ್ನು ರಕ್ಷಿಸಿದವನು ಮಾಚಯ್ಯ. ಕಲ್ಯಾಣ ಕ್ರಾಂತಿಯ ಮುಂಚೂಣಿಯಲ್ಲಿ ನಿಂತು ಹೋರಾಡಿದ ವ್ಯಕ್ತಿ ಈತ’ ಎಂದು ಗುಣಗಾನ ಮಾಡಿದರು.