ಕೃಷಿ ಕೆಲಸದಲ್ಲಿ ನಿರತರಾಗಿರುವವಿದ್ಯಾರ್ಥಿ ತಂದೆ ಉಮೇಶ ಸಂಶಿ ಮಾತನಾಡಿ, ಪತ್ನಿ ಸರಸ್ವತಿ ಕಳೆದ ಎಂಟು ದಿನಗಳ ಹಿಂದೆ ತಲೆಯಪಾರ್ಶಿ ರೋಗದಿಂದ ಬಳಲುತ್ತಿದ್ದರು. ಅದರ ಜತೆಗೆ ಮಂಗಳವಾರ ಸಂಜೆ ಹೃದಯಾಘಾತ ಸಂಭವಿಸಿ ನಿಧನರಾದರು. ಮಗ ಯಶವಂತ ಎಸ್ಸೆಸ್ಸೆಲ್ಸಿ, ಮಗಳು ಆಶ್ವಿನಿ 6ನೇ ತರಗತಿ ಓದುತ್ತಿದ್ದಾರೆ. ಮಗನ ವ್ಯಾಸಂಗಹಾಳಾಗಬಾರದು ಎಂಬ ಉದ್ದೇಶದಿಂದ ಪರೀಕ್ಷೆ ಬರೆಯಲು ಹೋಗುವಂತೆ ಮನವರಿಕೆ ಮಾಡಿದ್ದೇನೆ. ಅದರಂತೆ ಮಗ ಪರೀಕ್ಷೆ ಬರೆಯಲು ಹೋಗಿದ್ದಾನೆ ಎಂದುಭಾವುಕರಾಗಿ ನುಡಿದರು.