<p><strong>ಬ್ಯಾಡಗಿ</strong>: ತಾಲ್ಲೂಕಿನಲ್ಲಿ ಹಾದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ (136) ಸಾಕಷ್ಟು ಇಕ್ಕಟ್ಟಾಗಿದ್ದು, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.</p>.<p>ತಾಲ್ಲೂಕಿನ ಕೆಂಗೊಂಡ ಕ್ರಾಸ್, ಅರಬಗೊಂಡ, ಮೋಟೆಬೆನ್ನೂರು, ಬ್ಯಾಡಗಿ ಪಟ್ಟಣ, ಶಿಡೇನೂರ, ಕೆರವಡಿ ಕ್ರಾಸ್, ಬಿದರಕಟ್ಟಿ ಕ್ರಾಸ್, ತಡಸ ಗ್ರಾಮಗಳ ಮೂಲಕ ಹೆದ್ದಾರಿ ಹಾದು ಹೋಗುತ್ತದೆ.</p>.<p>ಈ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದಾಗಿ 15 ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಭರವಸೆ ಈಡೇರಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣವಾಗಿದೆ.</p>.<p>ಪಟ್ಟಣದ ಮಿತಿಯಲ್ಲಿ 20 ಮೀಟರ್ ಅಗಲ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 10 ಮೀಟರ್ ಅಗಲದ ರಸ್ತೆ ಇರಬೇಕೆಂಬ ನಿಯಮವಿದೆ. ಆದರೆ, ಹೆದ್ದಾರಿಯಲ್ಲಿ ಹಲವು ನಿಯಮಗಳು ಉಲ್ಲಂಘನೆಯಾಗಿದೆ.</p>.<p>ಕೆಂಗೊಂಡ ಕ್ರಾಸ್ನಿಂದ ಮೋಟೆಬೆನ್ನೂರವರೆಗೆ ರಸ್ತೆಯನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಆದರೆ, ಹಲವು ಕಡೆ 10 ಮೀಟರ್ ಅಗಲ ರಸ್ತೆ ನಿರ್ಮಿಸಿಲ್ಲವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.</p>.<p>ಕೆಂಗೊಂಡ ಕ್ರಾಸ್ನಿಂದ ಮೋಟೆಬೆನ್ನೂರವರೆಗಿನ ರಸ್ತೆ ನಿರ್ವಹಣೆ ಕೊರತೆಯಿಂದ ಸೊರಗಿದೆ. ಬ್ಯಾಡಗಿ ಪಟ್ಟಣದ ಅಗಸನಹಳ್ಳಿಯಿಂದ ಶಿಡೇನೂರವರೆಗಿನ 4.5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಸಾಗಿದೆ. ಆದರೆ ಶಿಡೇನೂರ ಗ್ರಾಮದಿಂದ ತಡಸ ಗ್ರಾಮದವರೆಗಿನ ರಸ್ತೆ ಇನ್ನೂ ಅಭಿವೃದ್ಧಿ ಕಂಡಿಲ್ಲ.</p>.<p>ರಾಜ್ಯ ಹೆದ್ದಾರಿಯ ಬದಿಯಲ್ಲಿ ಎರಡು ಕೆರೆಗಳಿವೆ. ಅವುಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಬಿದರಕಟ್ಟಿ ಕೆರೆ ದಡದ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಸ್ಥಳವನ್ನು ಅಪಘಾತ ವಲಯವೆಂದು ಪೊಲೀಸರು ಗುರುತಿಸಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲವೆಂದು ಜನರು ದೂರುತ್ತಿದ್ದಾರೆ.</p>.<p>‘ರಾಜ್ಯ ಹೆದ್ದಾರಿ ಇಕ್ಕಟ್ಟಾಗಿದ್ದು, ರಸ್ತೆ ಅಲ್ಲಲ್ಲಿ ಕುಸಿದಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತವಾಗುವ ಅಪಾಯ ಹೆಚ್ಚಿದೆ. ಎರಡ್ಮೂರು ವರ್ಷಗಳ ಹಿಂದೆ ಅಪಘಾತಗಳಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ’ ಎಂದು ಜನರು ಹೇಳಿದರು.</p>.<p>‘ಸಾರಿಗೆ ವಾಹನ ಹಾಗೂ ಕೃಷಿ ಉತ್ಪನ್ನ ಸಾಗಣೆ ಲಾರಿಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಹಲವು ಬಾರಿ ಅಪಘಾತಗಳು ಸಂಭವಿಸಿ, ವಾಹನಗಳು ಉರುಳಿಬಿದ್ದಿವೆ. ಇಕ್ಕಟ್ಟಾಗಿ ಅಂಕುಡೊಂಕಾಗಿರುವ ರಸ್ತೆಯನ್ನು ನೇರವಾಗಿ ನಿರ್ಮಿಸಬೇಕೆಂದು ಹಲವು ಬಾರಿ ಒತ್ತಾಯಿಸಲಾಗಿದೆ. ಆದರೆ, ಯಾರೊಬ್ಬರೂ ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದರು.</p>.<p>‘ಹಲವು ವರ್ಷಗಳ ಹಿಂದೆ ಕೆರೆಯ ನೀರು ಹರಿಯುವ ಕೋಡಿ ಜಾಗದಲ್ಲಿ ಕಾಲುವೆಯನ್ನು ದುರಸ್ತಿ ಮಾಡಲಾಗಿತ್ತು. ಆದರೆ, ರಸ್ತೆ ಕುಸಿದಿರುವುದು ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ. ರಸ್ತೆ ತಿರುವು ಪಡೆದುಕೊಂಡಿದ್ದರಿಂದ ಎದುರಿಗೆ ಬರುವ ವಾಹನಗಳು ಗೋಚರಿಸದೆ ಅಪಘಾತಗಳು ಹೆಚ್ಚುತ್ತಿವೆ’ ಎಂದು ರೈತ ಮುಖಂಡ ಮಲ್ಲೇಶಪ್ಪ ಡಂಬಳ ದೂರಿದರು.</p>.<p>‘ಹಂಸಬಾವಿಯಿಂದ ಬ್ಯಾಡಗಿಗೆ ಹೋಗುವಾಗ ಕೆರೆ ದಡದ ಮೇಲಿನ ರಸ್ತೆ ಒಮ್ಮೆಲೆ ತಿರುವು ಪಡೆದುಕೊಂಡಿದ್ದರಿಂದ ವಾಹನಗಳು ಉರುಳಿ ಬೀಳುವ ಸಾಧ್ಯತೆ ಹೆಚ್ಚಿವೆ. ಈ ಭಾಗದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಎರಡೂ ಬದಿಗೂ ತಡೆಗೋಡೆ ನಿರ್ಮಿಸಬೇಕು’ ಎಂದು ಅವರು ಆಗ್ರಹಿಸಿದರು.</p>.<p>ರೈತ ಕಿರಣ ಗಡಿಗೋಳ, ‘ಬಿದರಕಟ್ಟಿ ಕೆರೆಯ ದಡದ ಮೇಲೆ ಎರಡೂ ಕಡೆ ಮಣ್ಣು ಹಾಕಲಾಗಿದೆ. ಅದು ಕುಸಿಯುವ ಸಾಧ್ಯತೆ ಹೆಚ್ಚಿದೆ’ ಎಂದರು.</p>.<p>ಬೈಕ್ ಸವಾರ ಸಚಿನ, ‘ಶಿಡೇನೂರ ಗ್ರಾಮದಿಂದ ತಡಸ ನಡುವಿನ ರಸ್ತೆಯಲ್ಲಿರುವ ಬಿದರಕಟ್ಟೆ ಕೆರೆ ದಡದಲ್ಲಿ ಎಲ್ ಆಕಾರದಲ್ಲಿ ತಿರುವು ಇದೆ. ವೇಗವಾಗಿ ಬರುವ ವಾಹನಗಳು, ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕೆರೆಯ ದಡದಲ್ಲಿ ನೇರವಾದ ಹೊಸ ರಸ್ತೆ ನಿರ್ಮಿಸಬೇಕು. ಅಪಘಾತ ತಡೆಯಬೇಕು’ ಎಂದು ಆಗ್ರಹಿಸಿದರು.</p>.<div><blockquote>ಮೋಟೆಬೆನ್ನೂರನಿಂದ ಅರಬಗೊಂಡ ಗ್ರಾಮದವರೆಗಿನ ರಸ್ತೆಯಲ್ಲಿ ಸಾಕಷ್ಟು ತಿರುವುಗಳಿವೆ. ತಿರುವುಗಳನ್ನು ನೇರ ರಸ್ತೆಯಾಗಿ ಅಭಿವೃದ್ದಿಪಡಿಸಬೇಕು</blockquote><span class="attribution">ನಿಂಗಪ್ಪ ಅಂಗಡಿ ಮೋಟೆಬೆನ್ನೂರ ನಿವಾಸಿ</span></div>.<div><blockquote>ಶಿಡೇನೂರ–ತಡಸವರೆಗಿನ ರಸ್ತೆ ಅಭಿವೃದ್ಧಿಪಡಿಸಲು ₹ 2 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆರೆ ದಡದ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗುವುದು</blockquote><span class="attribution">ಉಮೇಶ ನಾಯ್ಕ್ ಎಇಇ ಲೋಕೋಪಯೋಗಿ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬ್ಯಾಡಗಿ</strong>: ತಾಲ್ಲೂಕಿನಲ್ಲಿ ಹಾದು ಹೋಗಿರುವ ಸೊರಬ–ಗಜೇಂದ್ರಗಡ ರಾಜ್ಯ ಹೆದ್ದಾರಿ (136) ಸಾಕಷ್ಟು ಇಕ್ಕಟ್ಟಾಗಿದ್ದು, ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿರುವುದು ಜನರ ಆತಂಕಕ್ಕೆ ಕಾರಣವಾಗಿದೆ.</p>.<p>ತಾಲ್ಲೂಕಿನ ಕೆಂಗೊಂಡ ಕ್ರಾಸ್, ಅರಬಗೊಂಡ, ಮೋಟೆಬೆನ್ನೂರು, ಬ್ಯಾಡಗಿ ಪಟ್ಟಣ, ಶಿಡೇನೂರ, ಕೆರವಡಿ ಕ್ರಾಸ್, ಬಿದರಕಟ್ಟಿ ಕ್ರಾಸ್, ತಡಸ ಗ್ರಾಮಗಳ ಮೂಲಕ ಹೆದ್ದಾರಿ ಹಾದು ಹೋಗುತ್ತದೆ.</p>.<p>ಈ ರಾಜ್ಯ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದಾಗಿ 15 ವರ್ಷಗಳ ಹಿಂದೆಯೇ ರಾಜ್ಯ ಸರ್ಕಾರ ಹೇಳಿತ್ತು. ಆದರೆ, ಇದುವರೆಗೂ ಭರವಸೆ ಈಡೇರಿಲ್ಲ. ರಾಜಕೀಯ ಇಚ್ಛಾಶಕ್ತಿಯ ಕೊರತೆ ಕಾರಣವಾಗಿದೆ.</p>.<p>ಪಟ್ಟಣದ ಮಿತಿಯಲ್ಲಿ 20 ಮೀಟರ್ ಅಗಲ ಹಾಗೂ ಗ್ರಾಮಾಂತರ ಪ್ರದೇಶದಲ್ಲಿ 10 ಮೀಟರ್ ಅಗಲದ ರಸ್ತೆ ಇರಬೇಕೆಂಬ ನಿಯಮವಿದೆ. ಆದರೆ, ಹೆದ್ದಾರಿಯಲ್ಲಿ ಹಲವು ನಿಯಮಗಳು ಉಲ್ಲಂಘನೆಯಾಗಿದೆ.</p>.<p>ಕೆಂಗೊಂಡ ಕ್ರಾಸ್ನಿಂದ ಮೋಟೆಬೆನ್ನೂರವರೆಗೆ ರಸ್ತೆಯನ್ನು ಮಾತ್ರ ಅಭಿವೃದ್ಧಿಪಡಿಸಲಾಗಿದೆ. ಆದರೆ, ಹಲವು ಕಡೆ 10 ಮೀಟರ್ ಅಗಲ ರಸ್ತೆ ನಿರ್ಮಿಸಿಲ್ಲವೆಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.</p>.<p>ಕೆಂಗೊಂಡ ಕ್ರಾಸ್ನಿಂದ ಮೋಟೆಬೆನ್ನೂರವರೆಗಿನ ರಸ್ತೆ ನಿರ್ವಹಣೆ ಕೊರತೆಯಿಂದ ಸೊರಗಿದೆ. ಬ್ಯಾಡಗಿ ಪಟ್ಟಣದ ಅಗಸನಹಳ್ಳಿಯಿಂದ ಶಿಡೇನೂರವರೆಗಿನ 4.5 ಕಿ.ಮೀ. ರಸ್ತೆಯನ್ನು ಅಭಿವೃದ್ಧಿಪಡಿಸುವ ಕಾರ್ಯ ಸಾಗಿದೆ. ಆದರೆ ಶಿಡೇನೂರ ಗ್ರಾಮದಿಂದ ತಡಸ ಗ್ರಾಮದವರೆಗಿನ ರಸ್ತೆ ಇನ್ನೂ ಅಭಿವೃದ್ಧಿ ಕಂಡಿಲ್ಲ.</p>.<p>ರಾಜ್ಯ ಹೆದ್ದಾರಿಯ ಬದಿಯಲ್ಲಿ ಎರಡು ಕೆರೆಗಳಿವೆ. ಅವುಗಳಿಗೆ ತಡೆಗೋಡೆ ನಿರ್ಮಿಸಿಲ್ಲ. ಬಿದರಕಟ್ಟಿ ಕೆರೆ ದಡದ ಮೇಲಿನ ರಸ್ತೆ ಸಂಪೂರ್ಣ ಹಾಳಾಗಿದೆ. ಈ ಸ್ಥಳವನ್ನು ಅಪಘಾತ ವಲಯವೆಂದು ಪೊಲೀಸರು ಗುರುತಿಸಿದ್ದಾರೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿಲ್ಲವೆಂದು ಜನರು ದೂರುತ್ತಿದ್ದಾರೆ.</p>.<p>‘ರಾಜ್ಯ ಹೆದ್ದಾರಿ ಇಕ್ಕಟ್ಟಾಗಿದ್ದು, ರಸ್ತೆ ಅಲ್ಲಲ್ಲಿ ಕುಸಿದಿದೆ. ವಾಹನಗಳ ಸುಗಮ ಸಂಚಾರಕ್ಕೆ ತೊಂದರೆಯಾಗಿದೆ. ಅಪಘಾತವಾಗುವ ಅಪಾಯ ಹೆಚ್ಚಿದೆ. ಎರಡ್ಮೂರು ವರ್ಷಗಳ ಹಿಂದೆ ಅಪಘಾತಗಳಾಗಿ ಹಲವರು ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ’ ಎಂದು ಜನರು ಹೇಳಿದರು.</p>.<p>‘ಸಾರಿಗೆ ವಾಹನ ಹಾಗೂ ಕೃಷಿ ಉತ್ಪನ್ನ ಸಾಗಣೆ ಲಾರಿಗಳು ಹೆದ್ದಾರಿಯಲ್ಲಿ ಸಂಚರಿಸುತ್ತಿವೆ. ಹಲವು ಬಾರಿ ಅಪಘಾತಗಳು ಸಂಭವಿಸಿ, ವಾಹನಗಳು ಉರುಳಿಬಿದ್ದಿವೆ. ಇಕ್ಕಟ್ಟಾಗಿ ಅಂಕುಡೊಂಕಾಗಿರುವ ರಸ್ತೆಯನ್ನು ನೇರವಾಗಿ ನಿರ್ಮಿಸಬೇಕೆಂದು ಹಲವು ಬಾರಿ ಒತ್ತಾಯಿಸಲಾಗಿದೆ. ಆದರೆ, ಯಾರೊಬ್ಬರೂ ಸ್ಪಂದಿಸುತ್ತಿಲ್ಲ’ ಎಂದು ತಿಳಿಸಿದರು.</p>.<p>‘ಹಲವು ವರ್ಷಗಳ ಹಿಂದೆ ಕೆರೆಯ ನೀರು ಹರಿಯುವ ಕೋಡಿ ಜಾಗದಲ್ಲಿ ಕಾಲುವೆಯನ್ನು ದುರಸ್ತಿ ಮಾಡಲಾಗಿತ್ತು. ಆದರೆ, ರಸ್ತೆ ಕುಸಿದಿರುವುದು ಕಳಪೆ ಕಾಮಗಾರಿಗೆ ನಿದರ್ಶನವಾಗಿದೆ. ರಸ್ತೆ ತಿರುವು ಪಡೆದುಕೊಂಡಿದ್ದರಿಂದ ಎದುರಿಗೆ ಬರುವ ವಾಹನಗಳು ಗೋಚರಿಸದೆ ಅಪಘಾತಗಳು ಹೆಚ್ಚುತ್ತಿವೆ’ ಎಂದು ರೈತ ಮುಖಂಡ ಮಲ್ಲೇಶಪ್ಪ ಡಂಬಳ ದೂರಿದರು.</p>.<p>‘ಹಂಸಬಾವಿಯಿಂದ ಬ್ಯಾಡಗಿಗೆ ಹೋಗುವಾಗ ಕೆರೆ ದಡದ ಮೇಲಿನ ರಸ್ತೆ ಒಮ್ಮೆಲೆ ತಿರುವು ಪಡೆದುಕೊಂಡಿದ್ದರಿಂದ ವಾಹನಗಳು ಉರುಳಿ ಬೀಳುವ ಸಾಧ್ಯತೆ ಹೆಚ್ಚಿವೆ. ಈ ಭಾಗದಲ್ಲಿ ಸೂಚನಾ ಫಲಕಗಳನ್ನು ಅಳವಡಿಸಬೇಕು. ಎರಡೂ ಬದಿಗೂ ತಡೆಗೋಡೆ ನಿರ್ಮಿಸಬೇಕು’ ಎಂದು ಅವರು ಆಗ್ರಹಿಸಿದರು.</p>.<p>ರೈತ ಕಿರಣ ಗಡಿಗೋಳ, ‘ಬಿದರಕಟ್ಟಿ ಕೆರೆಯ ದಡದ ಮೇಲೆ ಎರಡೂ ಕಡೆ ಮಣ್ಣು ಹಾಕಲಾಗಿದೆ. ಅದು ಕುಸಿಯುವ ಸಾಧ್ಯತೆ ಹೆಚ್ಚಿದೆ’ ಎಂದರು.</p>.<p>ಬೈಕ್ ಸವಾರ ಸಚಿನ, ‘ಶಿಡೇನೂರ ಗ್ರಾಮದಿಂದ ತಡಸ ನಡುವಿನ ರಸ್ತೆಯಲ್ಲಿರುವ ಬಿದರಕಟ್ಟೆ ಕೆರೆ ದಡದಲ್ಲಿ ಎಲ್ ಆಕಾರದಲ್ಲಿ ತಿರುವು ಇದೆ. ವೇಗವಾಗಿ ಬರುವ ವಾಹನಗಳು, ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಿದೆ. ಕೆರೆಯ ದಡದಲ್ಲಿ ನೇರವಾದ ಹೊಸ ರಸ್ತೆ ನಿರ್ಮಿಸಬೇಕು. ಅಪಘಾತ ತಡೆಯಬೇಕು’ ಎಂದು ಆಗ್ರಹಿಸಿದರು.</p>.<div><blockquote>ಮೋಟೆಬೆನ್ನೂರನಿಂದ ಅರಬಗೊಂಡ ಗ್ರಾಮದವರೆಗಿನ ರಸ್ತೆಯಲ್ಲಿ ಸಾಕಷ್ಟು ತಿರುವುಗಳಿವೆ. ತಿರುವುಗಳನ್ನು ನೇರ ರಸ್ತೆಯಾಗಿ ಅಭಿವೃದ್ದಿಪಡಿಸಬೇಕು</blockquote><span class="attribution">ನಿಂಗಪ್ಪ ಅಂಗಡಿ ಮೋಟೆಬೆನ್ನೂರ ನಿವಾಸಿ</span></div>.<div><blockquote>ಶಿಡೇನೂರ–ತಡಸವರೆಗಿನ ರಸ್ತೆ ಅಭಿವೃದ್ಧಿಪಡಿಸಲು ₹ 2 ಕೋಟಿ ಅನುದಾನಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಕೆರೆ ದಡದ ಅಭಿವೃದ್ಧಿಗೆ ಪ್ರಸ್ತಾವ ಸಲ್ಲಿಸಲಾಗುವುದು</blockquote><span class="attribution">ಉಮೇಶ ನಾಯ್ಕ್ ಎಇಇ ಲೋಕೋಪಯೋಗಿ ಇಲಾಖೆ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>