ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ‘2010ರಿಂದ 2022ರವರೆಗೆ 12 ವರ್ಷಗಳ ಕಾಲ ಪ್ರಾಂಶುಪಾಲನಾಗಿ ಹಾವೇರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಕರ್ತವ್ಯ ನಿರ್ವಹಿಸಿದ್ದೇನೆ. ಎರಡು ಮೂರು ಸಿಬ್ಬಂದಿ ಕಾಲೇಜು ಹಣವನ್ನು ದೋಚಿ, ಕಟ್ಟಿ ಬೆಳೆಸಿದ್ದ ಸೌಧವೇ ಕುಸಿಯುವಂತೆ ಮಾಡಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ವರದಿಗಳು ಪ್ರಕಟವಾಗಿದ್ದು, ₹3 ಕೋಟಿ ಅಲ್ಲ, ಆಡಿಟ್ ಮಾಡಿದರೆ ಇನ್ನೂ ಹೆಚ್ಚಿನ ಹಣ ಲೂಟಿಯಾಗಿರುವುದು ಗೊತ್ತಾಗುತ್ತದೆ’ ಎಂದು ಹೇಳಿದರು.