ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿಭಟನೆ ವೇಳೆ ಅವಘಡ: ಮೂವರಿಗೆ ಗಾಯ

Last Updated 1 ಜುಲೈ 2022, 12:53 IST
ಅಕ್ಷರ ಗಾತ್ರ

ಹಾವೇರಿ: ಉದಯಪುರದ ಟೈಲರ್ ಕನ್ಹಯ್ಯ ಲಾಲ್‍ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಯಿತು. ಈ ಸಂದರ್ಭ ಪೆಟ್ರೋಲ್‌ ಸುರಿದು ಟೈರ್‌ಗೆ ಬೆಂಕಿ ಹಚ್ಚುವಾಗ ಮೂವರು ಪ್ರತಿಭಟನಾಕಾರರಿಗೆ ಬೆಂಕಿ ತಗುಲಿ ಸಣ್ಣ ಪುಟ್ಟ ಗಾಯಗಳಾದವು.

ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನಾ ವೇಳೆ ಉದ್ರಿಕ್ತ ಯುವಕರ ಗುಂಪು ಟೈರ್‌ ಸುಡಲು ಮುಂದಾದರು. ಆಗ ಪೊಲೀಸ್‌ ಸಿಬ್ಬಂದಿ ಟೈರ್‌ ಕಿತ್ತುಕೊಂಡು ದೂರ ಎಸೆದರು.

ಇದರಿಂದ ಕುಪಿತರಾದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಹರಿಹಾಯ್ದರು. ಕೆಲ ನಿಮಿಷಗಳ ನಂತರ ಪ್ರತಿಭಟನಾಕಾರರು ಮತ್ತೆ ಪೆಟ್ರೋಲ್‌ ಸುರಿದು ಟೈರ್‌ಗೆ ಬೆಂಕಿ ಹಚ್ಚಿದರು. ಈ ವೇಳೆ ಮೂವರು ಪ್ರತಿಭಟನಾಕಾರರ ಬಟ್ಟೆಗೆ ಬೆಂಕಿ ತಗುಲಿ ಆತಂಕದ ವಾತಾವರಣ ಉಂಟಾಯಿತು. ತಕ್ಷಣ ಅಲ್ಲಿ ನೆರೆದಿದ್ದವರು ಬೆಂಕಿಯನ್ನು ನಂದಿಸಿದ ಪರಿಣಾಮ ದೊಡ್ಡ ಅವಘಡ ತಪ್ಪಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT