‘ಅಲ್ಲಲ್ಲಿ ಡಾಂಬರು ಕಿತ್ತು ಹೋಗಿ ರಸ್ತೆ ಹಾಳಾಗಿದೆ. ಕೆಲವು ಮಳೆಯ ನೀರಿನಿಂದ ಮಣ್ಣು ಕೊಚ್ಚಿಕೊಂಡು ಹೋಗಿದ್ದು ವಾಹನಗಳ ಸುಗಮ ಸಂಚಾರಕ್ಕೆ ತೊಡಕುಂಟಾಗಿದೆ. ಇದೇ ರಸ್ತೆಯಲ್ಲಿ ಹೊಳೆ ಆನ್ವೇರಿ, ಕೋಟಿಹಾಳ, ನಿಟಪಳ್ಳಿ, ನಾಗೇನಹಳ್ಳಿ, ಕೃಷ್ಣಾಪುರ, ಮಾಕನೂರು, ಮುದೇನೂರ, ಇಟಗಿ, ಮುಷ್ಟೂರ, ಮಣಕೂರ, ಮಾಳನಾಯಕನಹಳ್ಳಿ ಮುಂತಾದ ಗ್ರಾಮಗಳಿಗೆ ಹೋಗುವ ಗ್ರಾಮಸ್ಥರು ನರಕಯಾತನೆ ಅನುಭವಿಸುವಂತಾಗಿದೆ’ ಎನ್ನುತ್ತಾರೆ ಹೊಳೆ ಆನ್ವೇರಿಯ ಹಾಲಪ್ಪ ಬುಳ್ಳಾಪುರ, ಹೊನ್ನಪ್ಪ ಕೆಳಗಿನಮನಿ ಹಾಗೂ ಪ್ರಶಾಂತ ಎಂ.