‘ಎಲ್ಲರಿಗೂ ಮತದಾನದ ಹಕ್ಕನ್ನು ಸಂವಿಧಾನದತ್ತವಾಗಿ ನೀಡಲಾಗಿದೆ. ನಿರ್ಲಕ್ಷ್ಯ ತೋರಿ ಈ ಹಕ್ಕನ್ನು ಕಳೆದುಕೊಳ್ಳಬೇಡಿ. ಒಂದೊಂದು ಮತವು ದೇಶದ ಭವಿಷ್ಯವನ್ನು ಬದಲಿಸುತ್ತದೆ. ರಾಜಕೀಯ ಪಕ್ಷಗಳ ಓಲೈಕೆಗೆ ಮಾರು ಹೋಗಬೇಡಿ. ಹಣ, ವಸ್ತ್ರ ಇತರೆ ಆಮಿಷಕ್ಕೆ ಒಳಗಾಗಿ ಮತ ಮಾರಿಕೊಳ್ಳಬೇಡಿ’ ಎಂದರು.‘ಅಭಿವೃದ್ದಿಗಾಗಿ ಶ್ರಮಿಸುವವರಿಗೆ, ದೇಶದ ಮತ್ತು ಕ್ಷೇತ್ರದ ಬಗ್ಗೆ ಕಳಕಳಿ ಉಳ್ಳವರಿಗೆ ಮತ ನೀಡುವ ಅಧಿಕಾರ ನಿಮಗಿದೆ. ನಿಮ್ಮ ಮತ ದೇಶದ ಅಭಿವೃದ್ದಿಗೆ ಸಹಕಾರಿಯಾಗುತ್ತದೆ. ಕಾರಣ ಮತದಾನದಿಂದ ವಂಚಿತರಾ ಗಬೇಡಿ’ ಎಂದರು.‘ವಿಶೇಷವಾಗಿ ಮಹಿಳೆಯರು ಮುಂದೆ ಬರಬೇಕು. ಮತದಾನದಲ್ಲಿ ಮುಕ್ತವಾಗಿ ಭಾಗವಹಿಸಬೇಕು. ನಿರ್ಭೀತಿಯಿಂದ ಮತಗಟ್ಟೆಗೆ ತೆರಳಿ ಮತದಾನ ಮಾಡಬೇಕು’ ಎಂದು ಮನವಿ ಮಾಡಿದರು.ಮತದಾನ ಕುರಿತು ಪ್ರಮಾಣ ವಚನ ಬೋಧಿಸಲಾಯಿತು. ವಿವಿಧ ಬಡಾವಣೆಗಳಲ್ಲಿ ಸಂಚರಿಸಿ ಮತದಾನ ಜಾಗೃತಿ ಮೂಡಿಸಲಾಯಿತು.ಅಂಗನವಾಡಿ ಮೇಲ್ವಿಚಾರಕಿಯರಾದ ಚಂದ್ರಲೀಲಾ ನಿಂಬೂರ, ಗುರುಬಾಯಿ, ಸತ್ಯಮ್ಮ, ಸರಸ್ವತಿ ಜೇವರ್ಗಿ,ಭಾಗ್ಯ ಬೈರಿಮಡ್ಡಿ ಸೇರಿದಂತೆ ಅಂಗನವಾಡಿ, ಆಶಾ ಕಾರ್ಯಕರ್ತೆಯರು ಜಾಗೃತಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು.