ಕಾರ್ಯಾಗಾರದಲ್ಲಿ ಗ್ರಾಮದ 23 ವಿದ್ಯಾರ್ಥಿಗಳು ಪಾಲ್ಗೊಂಡು, ಹೊಸ ಪರೀಕ್ಷಾ ವಿಧಾನದ ಬಗೆಗಿನ ಗೊಂದಲಗಳನ್ನು ಗಣಿತ ಶಿಕ್ಷಕ ಮಲ್ಲಿಕಾರ್ಜುನ ಕೋಡಬಾಳ ಹಾಗೂ ವಿಜ್ಞಾನ ಶಿಕ್ಷಕಿ ನರ್ಗೀಸ್ ಪಿಂಜಾರ ಅವರೊಂದಿಗೆ ಚರ್ಚಿಸಿ ಪರಿಹರಿಸಿಕೊಂಡರು. ಈ ವೇಳೆ ಬದಲಾದ ಪರೀಕ್ಷಾ ನೂತನ ಮಾರ್ಗಸೂಚಿಯನ್ವಯ ವಿದ್ಯಾರ್ಥಿಗಳು ಪ್ರಶ್ನೋತ್ತರಗಳಿಗೆ ಸರಿಯಾದ ಉತ್ತರವನ್ನು ಆಯ್ಕೆ ಮಾಡುವ ವಿಧಾನವನ್ನು ತಿಳಿಸಿಕೊಟ್ಟರು.