‘ದೇಹದಲ್ಲಿ ಶೇ 70ರಿಂದ 80ರಷ್ಟು ಅಂಶ ನೀರು ಇರುತ್ತದೆ. ಹೊರಗಿನ ತಾಪಮಾನಕ್ಕೆ ದೇಹವನ್ನು ಹೊಂದಾಣಿಕೆ ಮಾಡಲು ನೀರು ಅತ್ಯುಪಯುಕ್ತ. ಅಂಗಾಂಗಗಳು ಕೆಲಸ ಮಾಡಲೂ ನೀರು ಅಗತ್ಯವಾಗಿದೆ. ಆಹಾರದಲ್ಲಿನ ಪ್ರೋಟಿನ್ ಮತ್ತಿತರ ಅಂಶಗಳು ಕರಗಿ, ದೇಹಕ್ಕೆ ಬೇಕಾದ ಶಕ್ತಿಯನ್ನು ನೀಡುತ್ತವೆ. ಆ ಬಳಿಕ ಉಳಿಯುವ ‘ವಿಸರ್ಜನೆಗೊಳ್ಳಬೇಕಾದ ಉತ್ಪನ್ನ’ಗಳನ್ನು ನೀರಿನ ಮೂಲಕ ಕಿಡ್ನಿಯು ಹೊರಹಾಕುತ್ತದೆ. ದೇಹದಲ್ಲಿ ನೀರಿನಾಂಶ ಕಡಿಮೆಯಾದರೆ, ಈ ಅಂಶಗಳೇ ವಿಷಕಾರಿಯಾಗಿ ಕಿಡ್ನಿ ಮೇಲೆ ದುಷ್ಪರಿಣಾಮ ಬೀರುತ್ತದೆ’ ಎನ್ನುತ್ತಾರೆ ಜಿಲ್ಲಾ ಸರ್ಕಾರಿ ಆಸ್ಪತ್ರೆಯ ಶಸ್ತ್ರಚಿಕಿತ್ಸಕ ನಾಗರಾಜ ನಾಯಕ.
‘ಅದಕ್ಕಾಗಿ, ನೇರ ಹಾಗೂ ಪ್ರಖರ ಬಿಸಿಲಿಗೆ ತೆರೆದುಕೊಳ್ಳಬೇಡಿ. ನೀರು ಹೆಚ್ಚು ಸೇವಿಸಿ. ನೀರಿನಾಂಶ ಇರುವ ಹಣ್ಣು, ತರಕಾರಿ ಮತ್ತಿತರ ಆಹಾರಕ್ಕೆ ಆದ್ಯತೆ ನೀಡಿ’ ಎನ್ನುತ್ತಾರೆ ಅವರು.