ನಗರದ ನ್ಯಾಷನಲ್ ಕಾಲೇಜಿನಲ್ಲಿ ಕಾ.ತ.ಚಿಕ್ಕಣ್ಣ ಅವರ ‘ಪುರಾಣ ಕನ್ಯೆ’ ಕೃತಿ ಬಿಡುಗಡೆ ಮಾಡಿ ಮಾತನಾಡಿದ ಅವರು, ‘ಕೃತಿಯಲ್ಲಿ ಪುರಾಣ, ವರ್ತಮಾನ ಮುಖಾಮುಖಿ ಆಗಿವೆ. ಇಡೀ ಕಾದಂಬರಿ ಹೆಣ್ಣುಧ್ವನಿಯಲ್ಲಿ
ಇದೆ. ಅದು ವಿಶೇಷ ಅನುಭೂತಿ ನೀಡುತ್ತಿದೆ. ರಮಿಸಿ, ಸಂತೈಸಿ ಓದುವಂತೆ ಮಾಡುತ್ತದೆ. ಗಂಡಿಗೆ ಹೆಣ್ಣಿನಂತೆಯೇ ಅಂತಃಕರಣವಿದ್ದರೆ ಅದಕ್ಕಿಂತ ಮೇಲಿನ ಸ್ಥಾನದಲ್ಲಿ ಪುರುಷ ನಿಲ್ಲುತ್ತಾನೆ’ ಎಂದರು.