ಮುಜಫ್ಫರ್ನಗರ, ಉತ್ತರ ಪ್ರದೇಶ: ಅಂಬೇಡ್ಕರ್ ಭಾವಚಿತ್ರವಿರುವ ನಾಮಫಲಕವನ್ನು ಹಾನಿಗೊಳಿಸಿರುವ ಘಟನೆ ಇಲ್ಲಿನ ಬೋಪಾ ಪ್ರದೇಶದ ಜಡ್ವಾದ್ ಗ್ರಾಮದಲ್ಲಿ ನಡೆದಿದೆ. ಪಂಚಾಯಿತಿ ಕಟ್ಟಡದ ಹೊರಗಡೆ ಅಳವಡಿಸಲಾಗಿದ್ದ ನಾಮಫಲಕವನ್ನು ಕಳೆದ ರಾತ್ರಿ ಕಿಡಿಗೇಡಿಗಳು ತೆರವುಗೊಳಿಸಿದ್ದಾರೆ ಎಂದು ಇನ್ಸ್ಪೆಕ್ಟರ್ ಮೊಹಮದ್ ರಿಜ್ವಾನ್ ಅವರು ತಿಳಿಸಿದ್ದಾರೆ.